
ಸಡಗರ-ಸಂಭ್ರಮದ ಯುಗಾದಿ ಹಬ್ಬ ಆಚರಣೆ
ಶಿವಮೊಗ್ಗ, ಮಾ. 22: ಶಿವಮೊಗ್ಗ ನಗರದಲ್ಲಿ ಬುಧವಾರ ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕದಿಂದ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ – ಸಂಭ್ರಮದಿಂದ ಆಚರಿಸಲಾಯಿತು.
ಶಿವಮೊಗ್ಗದ ಅಮೃತ್ ಲೇಔಟ್ ನಲ್ಲಿರುವ ಸಂಘದ ಅಧ್ಯಕ್ಷೆ ಡಾ. ಶಾಂತಾ ಸುರೇಂದ್ರ ಅವರ ನಿವಾಸದಲ್ಲಿ ಹಬ್ಬ ಆಚರಣೆ ಮಾಡಲಾಯಿತು. ಈ ವೇಳೆ ಸಂಘದ ಸದಸ್ಯರು ಪರಸ್ಪರ ಬೇವು-ಬೆಲ್ಲ ವಿತರಣೆ ಮಾಡಿದರು.
ನಂತರ ಯುಗಾದಿ ಹಬ್ಬಕ್ಕೆ ಸಂಬಂಧಿಸಿದ ಗೀತೆಗಳ ಗಾಯನ ನಡೆಯಿತು. ಈ ವೇಳೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಈ ವೇಳೆ ಸಂಘದ ಅಧ್ಯಕ್ಷೆ ಶಾಂತಾ ಸುರೇಂದ್ರ ಸೇರಿದಂತೆ ಪ್ರಮುಖರು ಹಬ್ಬದ ಮಹತ್ವದ ಕುರಿತಂತೆ ಮಾತನಾಡಿದರು.
In#shimoga, #Shivamogga, #shivamogganews, #shivamogganews #shimogalocalnews, #shivamogganews #shimoganews, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ugadi, #ugadicelebaration, #ugadifestival, #ugadihabba, #ಯುಗಾದಿ, #ಯುಗಾದಿಸಂವತ್ಸರ, #ಯುಗಾದಿಹಬ್ಬ, #ಶಿವಮೊಗ್ಗ, #ಶಿವಮೊಗ್ಗನ್ಯೂಸ್