
bhadravati | ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗನ ದಾರುಣ ಸಾವು!
ಭದ್ರಾವತಿ (bhadravathi), ಏ. 21: ಭದ್ರಾ ಜಲಾಶಯ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗ ಮೃತಪಟ್ಟ ದಾರುಣ ಘಟನೆ, ಬಿಆರ್’ಪಿಯಲ್ಲಿ ಏ. 20 ರಂದು ನಡೆದಿದೆ.
ಭದ್ರಾವತಿ ನಗರದ ಭೂತನಗುಡಿ ನಿವಾಸಿ, ಫ್ಲೈವುಡ್ ಅಂಗಡಿಯೊಂದರ ಮಾಲೀಕರಾದ ಮೊಹಮ್ಮದ್ ಜಾಬೀರ್ (55) ಹಾಗೂ ಅವರ ಪುತ್ರ ಜಾವೇದ್ (15) ಮೃತಪಟ್ಟವರೆಂದು ಗುರುತಿಸಲಾಗಿದೆ.
ಭಾನುವಾರ ಜಾಬೀರ್ ಅವರು ಕುಟುಂಬದವರೊಂದಿಗೆ ಭದ್ರಾ ಜಲಾಶಯಕ್ಕೆ ವಿಹಾರಕ್ಕೆಂದು ಆಗಮಿಸಿದ್ದರು. ಊಟವಾದ ನಂತರ ಪುತ್ರ ಜಾವೇದ್ ಜಲಾಶಯದ ಹಿನ್ನೀರಿನಲ್ಲಿ ಈಜಾಡುತ್ತಿದ್ದ. ಈ ವೇಳೆ ಮುಳುಗಲಾರಂಭಿಸಿದ್ದಾನೆ.
ತಕ್ಷಣವೇ ಜಾಬೀರ್ ಅವರು ಮುಳುಗುತ್ತಿದ್ದ ಮಗನ ರಕ್ಷಣೆಗೆಂದು ನೀರಿಗೆ ಧುಮುಕಿದ್ದಾರೆ. ಆದರೆ ಅಪ್ಪ – ಮಗ ಇಬ್ಬರು ಕೂಡ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು, ಸಂಜೆ ಹಿನ್ನೀರಿನಿಂದ ಬಾಲಕನ ಶವ ಪತ್ತೆ ಹಚ್ಚಿ ಹೊರ ತೆಗೆದಿದ್ದರು. ಮುಳುಗು ತಜ್ಞ ಮಲ್ಪೆ ಈಶ್ವರ್ ನೇತೃತ್ವದ ತಂಡವು ತಡರಾತ್ರಿ ವೇಳೆ ಜಾಬೀರ್ ಅವರ ಶವ ಪತ್ತೆ ಹಚ್ಚಿ ಹೊರತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಶಿಲ್ಪಾ ಅವರು ಭೇಟಿ ನೀಡಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bhadravathi, Apr. 21: A tragic incident in which a father and son drowned in the backwaters of Bhadra reservoir took place in BRP on Apr. 20. The police and fire brigade, who reached the spot after learning about the incident, found the boy’s body from the backwater in the evening and pulled it out. A team led by Malpe Ishwar found and pulled out Jabir’s body late at night.
More Stories
Holehonnuru | ಹೊಳೆಹೊನ್ನೂರು : ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷರ ಅವಿರೋಧ ಆಯ್ಕೆ
Holehonnur : Yadehalli Grama Panchayat President and Vice President elected unopposed
ಹೊಳೆಹೊನ್ನೂರು : ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ – ಉಪಾಧ್ಯಕ್ಷರ ಅವಿರೋಧ ಆಯ್ಕೆ
shimoga | bhadravati | ಶಿವಮೊಗ್ಗ – ಭದ್ರಾವತಿಯಲ್ಲಿ ಮೂವರು ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ
Three missing in Shivamogga-Bhadravati: Police appeal for help in finding them
shimoga | bhadravati | ಶಿವಮೊಗ್ಗ – ಭದ್ರಾವತಿಯಲ್ಲಿ ಮೂವರು ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ
bhadravati crime news | ಭದ್ರಾವತಿ | ವಿವಿಧೆಡೆ ಬೈಕ್ ಕಳವು ಮಾಡಿದ್ದ ಯುವಕ ಸೆರೆ!
Bhadravati | A young man who had stolen bikes from various places was arrested!
ಭದ್ರಾವತಿ | ವಿವಿಧೆಡೆ ಬೈಕ್ ಕಳವು ಮಾಡಿದ್ದ ಯುವಕ ಸೆರೆ!
ಭದ್ರಾವತಿ : ನಕಲಿ ನೋಟು ಚಲಾವಣೆ – ರಿಯಲ್ ಎಸ್ಟೇಟ್ ಕೆಲಸಗಾರ ಅರೆಸ್ಟ್!
Bhadravati: Fake currency circulation – Real estate worker arrested!
ಭದ್ರಾವತಿ : ನಕಲಿ ನೋಟು ಚಲಾವಣೆ – ರಿಯಲ್ ಎಸ್ಟೇಟ್ ಕೆಲಸಗಾರ ಅರೆಸ್ಟ್!
ಹಲವು ವರ್ಷಗಳ ನಂತರ ಭದ್ರಾವತಿಯ ಕಾರೇಹಳ್ಳಿಯಲ್ಲಿ KHB ಯಿಂದ ಹೊಸ ಬಡಾವಣೆ : ನಿವೇಶನಗಳಿಗೆ ಅರ್ಜಿ ಆಹ್ವಾನ!
khb site | After many years a new layout from KHB in Karehalli Bhadravati: Applications invited for sites!
khb site | ಹಲವು ವರ್ಷಗಳ ನಂತರ ಭದ್ರಾವತಿಯ ಕಾರೇಹಳ್ಳಿಯಲ್ಲಿ KHB ಯಿಂದ ಹೊಸ ಬಡಾವಣೆ : ನಿವೇಶನಗಳಿಗೆ ಅರ್ಜಿ ಆಹ್ವಾನ!
bhadravati | ಭದ್ರಾವತಿ : ಹೊಳೆಹೊನ್ನೂರು ಭದ್ರಾಪುರದಲ್ಲಿ ಕೊಲೆ ಪ್ರಕರಣ – 7 ಜನರಿಗೆ ಜೀವಾವಧಿ ಶಿಕ್ಷೆ!
Bhadravati: Murder case – 7 people sentenced to life imprisonment!
bhadravati | ಭದ್ರಾವತಿ : ಕೊಲೆ ಪ್ರಕರಣ – 7 ಜನರಿಗೆ ಜೀವಾವಧಿ ಶಿಕ್ಷೆ!