Allowing alcohol consumption in front of the hotel and shop: File a case! ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!

shimoga | ಶಿವಮೊಗ್ಗ : ಅಡಕೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪುರುಷನ ಶ*ವ ಪತ್ತೆ!

ಶಿವಮೊಗ್ಗ (shivamogga), ಜೂ. 23: ಅಡಕೆ ತೋಟದ ಹೊಂಗೆ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅನಾಮಧೇಯ ಪುರುಷನೋರ್ವನ ಶವ ಪತ್ತೆಯಾದ ಘಟನೆ, ಶಿವಮೊಗ್ಗ ನಗರದ ಹೊರವಲಯ ಮಲವಗೊಪ್ಪದಲ್ಲಿ ನಡೆದಿದೆ.

ಮಲವಗೊಪ್ಪದ ರೈಲ್ವೇ ಟ್ರ್ಯಾಕ್ ಉತ್ತರದಲ್ಲಿನ ಅಡಕೆ ತೋಟದಲ್ಲಿ ಘಟನೆ ನಡೆದಿದೆ. ಜೂ. 22 ರ ಬೆಳಿಗ್ಗೆ 6 ಗಂಟೆ ಸರಿಸುಮಾರಿಗೆ ಸದರಿ ವ್ಯಕ್ತಿ ಕಬ್ಬಿಣದ ತಂತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಜೂ. 23 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಮೃತ ವ್ಯಕ್ತಿಗೆ ಸುಮಾರು 35 ರಿಂದ 40 ವರ್ಷ ವಯೋಮಾನವಿದೆ. 5.6 ಅಡಿ ಎತ್ತರ, ಕೋಲು ಮುಖ, ಕಂದು ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಮೈಮೇಲೆ ತಿಳಿ ನೀಲಿ ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.

ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಕೂಡಲೇ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ: 08182 261418, 9480803350, 08182-261410, 9480803332, 100, 08182-261400 ಗೆ ಮಾಹಿತಿ ನೀಡಲು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್’ಪೆಕ್ಟರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga, June 23: The body of an unidentified man was found hanging from a honge tree in an orchard in Malavagoppa, on the outskirts of Shivamogga city. The Sub-Inspector of the Rural Police Station said in a statement that if the heirs of the deceased are found, they should immediately inform the Rural Police Station on the following numbers: 08182 261418, 9480803350, 08182-261410, 9480803332, 100, 08182-261400.

Shivamogga: Blood donation from police officers, staff, publicಶಿವಮೊಗ್ಗ : ಪೊಲೀಸ್ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರಿಂದ ರಕ್ತದಾನ Previous post shimoga | ಶಿವಮೊಗ್ಗ : ಪೊಲೀಸ್ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರಿಂದ ರಕ್ತದಾನ
Congress MLA from Belur demands Minister Jamir's resignation: What did Siddaramaiah say? ಸಚಿವ ಜಮೀರ್ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬೇಳೂರು ಆಗ್ರಹ : ಸಿದ್ದರಾಮಯ್ಯ ಹೇಳಿದ್ದೇನು? Next post ಸಚಿವ ಜಮೀರ್ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬೇಳೂರು ಆಗ್ರಹ : ಸಿದ್ದರಾಮಯ್ಯ ಹೇಳಿದ್ದೇನು?