
ಮಹಾರಾಷ್ಟ್ರದ ರಾಯಗಡ ಬಳಿ ಕಂದಕಕ್ಕೆ ಉರುಳಿದ ಖಾಸಗಿ ಬಸ್ : 13 ಮಂದಿ ಸಾವು – 29 ಜನರಿಗೆ ಗಾಯ!
ರಾಯಗಡ (ಮಹಾರಾಷ್ಟ್ರ), ಎ. 15: ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ವೊಂದು, ರಸ್ತೆ ಬದಿಯ ಕಂದಕಕ್ಕೆ ಉರುಳಿಬಿದ್ದ ಪರಿಣಾಮ, ಬಸ್ ನಲ್ಲಿದ್ದ 13 ಜನ ಮೃತಪಟ್ಟು 29 ಮಂದಿ ಗಾಯಗೊಂಡ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದ ರಾಯಗಡ ಬಳಿ ಶನಿವಾರ ಮುಂಜಾನೆ ನಡೆದಿದೆ.
ಮುಂಬಯಿ – ಪುಣೆ ಹಳೇ ಹೆದ್ಧಾರಿಯ, ಖೋಪೊಲಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಂಗ್ರೋಬಾ ದೇವಾಲಯ ಸಮೀಪ ಅವಘಡ ಸಂಭವಿಸಿದೆ. ಸದರಿ ಸ್ಥಳವು ಮುಂಬೈಯಿಂದ 70 ಕಿ.ಮೀ. ದೂರದಲ್ಲಿದೆ. ಪುಣೆಯ ಪಿಂಪ್ರಿ ಚಿಂಚವಾಡದಿಂದ ಮುಂಬೈಗೆ ಬಸ್ ಆಗಮಿಸುತ್ತಿದ್ದ ವೇಳೆ ಈ ಭೀಕರ ಅವಘಡ ಸಂಭವಿಸಿದೆ.

ಮೃತರೆಲ್ಲರೂ ಮುಂಬಯಿಯ ಗೋರೆಗಾಂವ್ ನ ಸಾಂಪ್ರದಾಯಿಕ ಸಂಗೀತ ತಂಡವಾದ ಬಜಿ ಪ್ರಭು ವಾದಕ್ ಗ್ರೂಪ್ ಎಂಬ ಸಂಗೀತ ತಂಡದ ಸದ್ಯರಾಗಿದ್ದಾರೆ. 18 ರಿಂದ 25 ವಯೋಮಾನದೊಳಗಿನವರಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪುಣೆ ಜಿಲ್ಲೆಯ ಪಿಂಪ್ರಿ ಚಿಂಚವಾಡದ ಕಾರ್ಯಕ್ರಮವೊಂದರಲ್ಲಿ ಸಂಗೀತ ತಂಡ ಭಾಗವಹಿಸಿತ್ತು. ಕಾರ್ಯಕ್ರಮ ಪೂರ್ಣಗೊಂಡ ನಂತರ, ಶನಿವಾರ ಮುಂಜಾನೆ 1 ಗಂಟೆಗೆ ಸ್ಥಳದಿಂದ ಖಾಸಗಿ ಬಸ್ ನಲ್ಲಿ ಸಂಗೀತ ತಂಡದ ಸದಸ್ಯರು ಪ್ರಯಾಣಿಸಿದ್ದರು. ಮುಂಜಾನೆ 4.50 ರ ಸುಮಾರಿಗೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
More Stories
ಸಚಿವ ಜಮೀರ್ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬೇಳೂರು ಆಗ್ರಹ : ಸಿದ್ದರಾಮಯ್ಯ ಹೇಳಿದ್ದೇನು?
Congress MLA from Belur demands Minister Jamir’s resignation: What did Siddaramaiah say?
ಸಚಿವ ಜಮೀರ್ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬೇಳೂರು ಆಗ್ರಹ : ಸಿದ್ದರಾಮಯ್ಯ ಹೇಳಿದ್ದೇನು?
Gujarat Plane Crash : ಅಹಮದಾಬಾದ್ನಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ!
Gujarat Plane Crash : ಅಹಮದಾಬಾದ್ನಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ!
Gujarat Plane Crash: Air India plane carrying 242 people crashes in Ahmedabad!
kudala sangama | ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
kudala sangama | What did CM Siddaramaiah say about Prime Minister Modi’s Mann Ki Baat program?
kudala sangama | ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
shimoga | ಸರ್ಕಾರಿ ಬಸ್ ಪ್ರಯಾಣದ ದರ ಏರಿಕೆ ಬೆನ್ನಲ್ಲೆ, ಖಾಸಗಿ ಬಸ್ ದರ ಹೆಚ್ಚಳಕ್ಕೆ ಆಗ್ರಹ!
shimoga | After the government bus travel fare hike demand for private bus fare hike!
shimoga | ಸರ್ಕಾರಿ ಬಸ್ ಪ್ರಯಾಣದ ದರ ಏರಿಕೆ ಬೆನ್ನಲ್ಲೆ, ಖಾಸಗಿ ಬಸ್ ದರ ಹೆಚ್ಚಳಕ್ಕೆ ಆಗ್ರಹ!
ಕರ್ನಾಟಕ – ಆಂಧ್ರ ಪ್ರದೇಶ ಗ್ರಾಮಗಳ ನಡುವೆ ವಿವಾದ ಸೃಷ್ಟಿಸಿದ ದೇವರಿಗೆ ಬಿಟ್ಟ‘ಕೋಣ’ದ ಮಾಲೀಕತ್ವ!
Ownership of ‘Kona’ left to God, which created controversy between Karnataka and Andhra Pradesh villages!
ಕರ್ನಾಟಕ – ಆಂಧ್ರ ಪ್ರದೇಶ ಗ್ರಾಮಗಳ ನಡುವೆ ವಿವಾದ ಸೃಷ್ಟಿಸಿದ ದೇವರಿಗೆ ಬಿಟ್ಟ‘ಕೋಣ’ದ ಮಾಲೀಕತ್ವ!
viral video | ಕರುವಿಗೆ ಡಿಕ್ಕಿ ಹೊಡೆದ ಕಾರನ್ನು ಬೆನ್ನಟ್ಟಿ ನಿಲ್ಲಿಸಿದ ಆಕಳುಗಳ..!
An interesting and cinematic incident where cows chased a car that hit a calf and stopped it, took place in Rai’garh of Chhattisgarh state.
viral video | ಕರುವಿಗೆ ಡಿಕ್ಕಿ ಹೊಡೆದ ಕಾರನ್ನು ಬೆನ್ನಟ್ಟಿ ನಿಲ್ಲಿಸಿದ ಆಕಳುಗಳ..!