ಶಿವಮೊಗ್ಗ ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಆಟೋ ಚಾಲಕರಿಬ್ಬರು ತಮಗೆ ಸಿಕ್ಕಿದ್ದ ನಗದು ಹಾಗೂ ಮೊಬೈಲ್ ಪೋನ್ ನನ್ನು, ಪೊಲೀಸರ ಮೂಲಕ ಕಳೆದುಕೊಂಡವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ. ಇವರ ಪ್ರಾಮಾಣಿಕತೆ, ಉತ್ತಮ ನಡವಳಿಕೆ ಮೆಚ್ಚಿ ಪೊಲೀಸ್ ಇಲಾಖೆ ಹಾಗೂ ವಸ್ತುಗಳನ್ನು ಕಳೆದುಕೊಂಡಿದ್ದವರು ಸದರಿ ಆಟೋ ಚಾಲಕರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.

ಶಿವಮೊಗ್ಗ : ಆಟೋ ಚಾಲಕರಿಬ್ಬರ ಪ್ರಾಮಾಣಿಕತೆ!

*ತಮಗೆ ಸಿಕ್ಕಿದ್ದ ಸಾವಿರಾರು ನಗದು, ದುಬಾರಿ ಬೆಲೆಯ ಮೊಬೈಲ್ ಪೋನ್ ಹಿಂದಿರುಗಿಸಿದರು

-ಬಿ.ರೇಣುಕೇಶ್-

ಶಿವಮೊಗ್ಗ, ಮೇ 4: ಶಿವಮೊಗ್ಗ ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಆಟೋ ಚಾಲಕರಿಬ್ಬರು ತಮಗೆ ಸಿಕ್ಕಿದ್ದ ನಗದು ಹಾಗೂ ಮೊಬೈಲ್ ಪೋನ್ ನನ್ನು, ಪೊಲೀಸರ ಮೂಲಕ ಕಳೆದುಕೊಂಡವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.  

ಇವರ ಪ್ರಾಮಾಣಿಕತೆ, ಉತ್ತಮ ನಡವಳಿಕೆ ಮೆಚ್ಚಿ ಪೊಲೀಸ್ ಇಲಾಖೆ ಹಾಗೂ ವಸ್ತುಗಳನ್ನು ಕಳೆದುಕೊಂಡಿದ್ದವರು ಸದರಿ ಆಟೋ ಚಾಲಕರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.

ಹಣವಿದ್ದ ಬ್ಯಾಗ್: 30-4-2023 ರಂದು ಶ್ರೀನಿವಾಸಗೌಡ ಎಂಬುವರ ಕಾರು ಶರಾವತಿ ನಗರದ ಬಳಿ ದುರಸ್ತಿಗೀಡಾಗಿತ್ತು. ಅಲ್ಲಿಯೇ ಇದ್ದ ಜೆ. ಪಿ. ನಗರ ಬಡಾವಣೆಯ ಆಟೋ ಚಾಲಕ ಫೈರೋಜ್ ಖಾನ್ ಎಂಬುವರು ಕಾರನ್ನು ತಳ್ಳಿ ಚಾಲನೆಯಾಗಲು ನೆರವಾಗಿದ್ದರು.

ಈ ವೇಳೆ ಶ್ರೀನಿವಾಸಗೌಡ ಅವರು 22 ಸಾವಿರ ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಅಡಕೆ ಮಂಡಿಯ ಕೀಯಿದ್ದ ಬ್ಯಾಗ್ ನ್ನು ಆಟೋದಲ್ಲಿಯೇ ಬಿಟ್ಟು ಮರೆತು ಹೋಗಿದ್ದರು. ಬ್ಯಾಗ್ ನ್ನು ಆಟೋ ಚಾಲಕ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಶ್ರೀನಿವಾಸಗೌಡರವರಿಗೆ ಹಿಂದಿರುಗಿಸಿದ್ದರು.

ಸದರಿ ಚಾಲಕನನ್ನು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಅಭಿನಂದಿಸಲಾಗಿದೆ. ಈ ವೇಳೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಇನ್ಸ್’ಪೆಕ್ಟರ್ ಕೆ.ವಿ.ಸತೀಶ್ ಕುಮಾರ್ ಉಪಸ್ಥಿತರಿದ್ದರು.

ಈ ವೇಳೆ ಶ್ರೀನಿವಾಸಗೌಡ ಅವರು 22 ಸಾವಿರ ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಅಡಕೆ ಮಂಡಿಯ ಕೀಯಿದ್ದ ಬ್ಯಾಗ್ ನ್ನು ಆಟೋದಲ್ಲಿಯೇ ಬಿಟ್ಟು ಮರೆತು ಹೋಗಿದ್ದರು. ಬ್ಯಾಗ್ ನ್ನು ಆಟೋ ಚಾಲಕ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಶ್ರೀನಿವಾಸಗೌಡರವರಿಗೆ ಹಿಂದಿರುಗಿಸಿದ್ದರು.

ಸದರಿ ಚಾಲಕನನ್ನು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಅಭಿನಂದಿಸಲಾಗಿದೆ. ಈ ವೇಳೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಇನ್ಸ್’ಪೆಕ್ಟರ್ ಕೆ.ವಿ.ಸತೀಶ್ ಕುಮಾರ್ ಉಪಸ್ಥಿತರಿದ್ದರು.

ದುಬಾರಿ ಮೊಬೈಲ್: ಮೇ 2 ರಂದು ರಾತ್ರಿ ನಗರದ ಹೊರವಲಯ ಸೋಮಿನಕೊಪ್ಪದ ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯ ನಿವಾಸಿ ನಿವೃತ್ತ ಇಂಜಿನಿಯರ್ ಈಶ್ವರಪ್ಪ ಎಂಬುವರು, ಬಡಾವಣೆಯ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯ ಧ್ವಜದ ಕಟ್ಟೆಯ ಬಳಿ ಕುಳಿತುಕೊಂಡಿದ್ದರು. 30 ಸಾವಿರ ರೂ. ಮೌಲ್ಯದ ತಮ್ಮ ಮೊಬೈಲ್ ಫೋನ್ ನನ್ನು, ಧ್ವಜದ ಕಟ್ಟೆಯ ಮೇಲಿಟ್ಟು ಮೆರೆತು ಮನೆಗೆ ಹಿಂದಿರುಗಿದ್ದರು.

ಅದೆ ವೇಳೆ ಪ್ರಯಾಣಿಕರೋರ್ವರನ್ನು ಬಿಡಲು ಆಗಮಿಸಿದ್ದ ದುರ್ಗಿಗುಡಿ ಆಟೋ ಸ್ಟ್ಯಾಂಡ್ ಚಾಲಕ ರವಿ ಎಂಬುವರು ಮೊಬೈಲ್ ಫೋನ್ ಗಮನಿಸಿದ್ದಾರೆ. ಮೊಬೈಲ್ ಫೋನ್ ಮಾಲೀಕರ ಬರುವಿಕೆಗಾಗಿ, ಸ್ಥಳದಲ್ಲಿಯೇ ಕೆಲ ಸಮಯ ಕಾದು ನಿಂತಿದ್ದಾರೆ. ಯಾರು ಬಾರದ ಕಾರಣದಿಂದ ಮೊಬೈಲ್ ಫೋನ್ ತೆಗೆದುಕೊಂಡು ವಿನೋಬನಗರ ಪೊಲೀಸ್ ಠಾಣೆಗೆ ನೀಡಿದ್ದರು.

ಮೇ 2 ರಂದು ರಾತ್ರಿ ನಗರದ ಹೊರವಲಯ ಸೋಮಿನಕೊಪ್ಪದ ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯ ನಿವಾಸಿ ನಿವೃತ್ತ ಇಂಜಿನಿಯರ್ ಈಶ್ವರಪ್ಪ ಎಂಬುವರು, ಬಡಾವಣೆಯ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯ ಧ್ವಜದ ಕಟ್ಟೆಯ ಬಳಿ ಕುಳಿತುಕೊಂಡವರು ಸುಮಾರು 30 ಸಾವಿರ ರೂ. ಮೌಲ್ಯದ ತಮ್ಮ ಮೊಬೈಲ್ ಫೋನ್ ನನ್ನು ಧ್ವಜದ ಕಟ್ಟೆಯ ಮೇಲಿಟ್ಟು ಮೆರೆತು ಮನೆಗೆ ಹಿಂದಿರುಗಿದ್ದರು.

ಅದೆ ವೇಳೆ ಪ್ರಯಾಣಿಕರೋರ್ವರನ್ನು ಬಿಡಲು ಆಗಮಿಸಿದ್ದ ದುರ್ಗಿಗುಡಿ ಆಟೋ ಸ್ಟ್ಯಾಂಡ್ ಚಾಲಕ ರವಿ ಎಂಬುವರು ಮೊಬೈಲ್ ಫೋನ್ ಗಮನಿಸಿದ್ದಾರೆ. ಮೊಬೈಲ್ ಫೋನ್ ಮಾಲೀಕರ ಬರುವಿಕೆಗಾಗಿ, ಸ್ಥಳದಲ್ಲಿಯೇ ಕೆಲ ಸಮಯ ಕಾದು ನಿಂತಿದ್ದಾರೆ. ಯಾರು ಬಾರದ ಕಾರಣದಿಂದ ಮೊಬೈಲ್ ಫೋನ್ ತೆಗೆದುಕೊಂಡು ವಿನೋಬನಗರ ಪೊಲೀಸ್ ಠಾಣೆಗೆ ನೀಡಿದ್ದರು.

ಪೊಲೀಸರು ನೀಡಿದ ಮಾಹಿತಿ ಮೇರೆಗೆ ಮೇ 3 ರ ಬೆಳಿಗ್ಗೆ ಇಂಜಿನಿಯರ್ ಈಶ್ವರಪ್ಪರವರು ಠಾಣೆಗೆ ತೆರಳಿ ಮೊಬೈಲ್ ಫೋನ್ ಪಡೆದುಕೊಂಡಿದ್ದರು. ಜೊತೆಗೆ ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಿ ಪೊಲೀಸ್ ಠಾಣೆಗೆ ಆತನನ್ನು ಕರೆಯಿಸಿ ಶಾಲು ಹೊದಿಸಿ, ಹೂವಿನ ಮಾಲೆ ಹಾಕಿ, ನಗದು ಬಹುಮಾನ ನೀಡಿ ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್, ಪಿಎಸ್ಐ ಸುನೀಲ್ ಬಿ.ಸಿ., ಎಎಸ್ಐ ರಮೇಶ್, ಮುಖ್ಯ ಪೇದೆ ರಾಮಪ್ಪ, ರಾಜಪ್ಪ ಮೊದಲಾದವರಿದ್ದರು.

ಸೊರಬ - ಕಾರು ಡಿಕ್ಕಿ : ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರಿಬ್ಬರ ದಾರುಣ ಸಾವು! Previous post ಸೊರಬ : ಕಾರು – ಬೈಕ್ ನಡುವೆ ಅಪಘಾತ ; ಸಹೋದರರಿಬ್ಬರ ದಾರುಣ ಸಾವು!
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ ಮಾಡಿಕೊಂಡಿರುವ ಕುರಿತು ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರು ಶಿವಮೊಗ್ಗ ನಗರದಲ್ಲಿ ರೋಡ್ ಶೋ ನಡೆಸಿದ ಸಂದರ್ಭದಲ್ಲಿ, ಶಿವಪ್ಪ ನಾಯಕ ವೃತ್ತದ ಬಳಿ ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಿಕೊಂಡಿರುವ ಕುರಿತು ದೂರಿನ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕಲಂ 14 ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಗಳು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ ಮಾಡಿಕೊಂಡ ಎರಡು ಪ್ರತ್ಯೇಕ ಪ್ರಕರಣಗಳ ಕುರಿತಂತೆ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯು ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ತಂಡದವರು ನೀಡಿದ ದೂರಿನ ಹಿನ್ನೆಲೆಯಲ್ಲಿ, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986 ಅಡಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಕ್ಕಳೊಂದಿಗೆ ಚುನಾವಣಾ ಪ್ರಚಾರ ಮಾಡುತ್ತಿರುವ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ತಂಡದವರು ನೀಡಿದ ದೂರಿನ ಹಿನ್ನೆಲೆಯಲ್ಲಿ, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕಲಂ 14 ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಲಿಸಲಾಗಿತ್ತು. Next post ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ : ಪ್ರಕರಣ ದಾಖಲು!