
ಸಾಗರ ಪ್ರಕರಣ : ಮೂವರು ಆರೋಪಿಗಳು ವಶಕ್ಕೆ – ಎಸ್ಪಿ ಜಿ.ಕೆ.ಮಿಥುನ್ ಕುಮಾರ್
ಶಿವಮೊಗ್ಗ, ಜ. 10: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಜ. 9 ರಂದು ಭಜರಂಗದಳ ಕಾರ್ಯಕರ್ತ ಸುನೀಲ್ ಎಂಬ ಯುವಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ವಿಫಲ ಯತ್ನ ನಡೆಸಿದ ಘಟನೆಗೆ ಸಂಬಂಧಿಸಿದಂತೆ, ಮುಖ್ಯ ಆರೋಪಿ ಸಮೀರ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವಿಷಯವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ. ಈ ಕುರಿತಂತೆ ಮಂಗಳವಾರ ಬೆಳಿಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಮೀರ್, ಇಮಿಯಾನ್ ಹಾಗೂ ಮನ್ಸೂರ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಸಾಗರ ಪಟ್ಟಣದ ಆಭರಣ ಜ್ಯುವೆಲರ್ಸ್ ಎದುರು ಆರೋಪಿ ಸಮೀರ್, ಹಾಡಹಗಲೇ ಮಾರಕಾಸ್ತ್ರದಿಂದ ಭಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆಗೆ ಯತ್ನಿಸಿದ್ದ. ಕೂದಲೆಳೆ ಅಂತರದಲ್ಲಿ ಸುನೀಲ್ ಅನಾಹುತದಿಂದ ಪಾರಾಗಿದ್ದ . ಸದರಿ ಘಟನೆಯು ದೃಶ್ಯವು ಸಮೀಪದ ಕಟ್ಟಡದ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದರಿ ವೀಡಿಯೋ ವೈರಲ್ ಆಗಿತ್ತು.
More Stories
shimoga | ಶಿವಮೊಗ್ಗ | ಬಿಜೆಪಿ ಮರು ಸೇರ್ಪಡೆ ಚರ್ಚೆಯ ಕುರಿತಂತೆ ಕೆ ಎಸ್ ಈಶ್ವರಪ್ಪ ಹೇಳಿದ್ದೇನು?
Shivamogga | Joining BJP: What did K.S. Eshwarappa say?
shimoga | ಶಿವಮೊಗ್ಗ | ಬಿಜೆಪಿ ಸೇರ್ಪಡೆ : ಕೆ.ಎಸ್ ಈಶ್ವರಪ್ಪ ಹೇಳಿದ್ದೇನು?
shimoga | power cut news | ಶಿವಮೊಗ್ಗ : ಜೂ. 20 ರಂದು ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ!
Shivamogga: Power outage until 5 pm on June 20th!
ಶಿವಮೊಗ್ಗ : ಜೂ. 20 ರಂದು ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ!
shimoga | ಶಿವಮೊಗ್ಗ | ಮಾರಣಾಂತಿಕ ಹಲ್ಲೆ ಪ್ರಕರಣ : 2 ವರ್ಷ ಜೈಲು ಶಿಕ್ಷೆ!
shimoga | Shivamogga | Fatal assault case: 2 years in prison!
shimoga | ಶಿವಮೊಗ್ಗ | ಮಾರಣಾಂತಿಕ ಹಲ್ಲೆ ಪ್ರಕರಣ : 2 ವರ್ಷ ಜೈಲು ಶಿಕ್ಷೆ!
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 18 ರ ತರಕಾರಿ ಬೆಲೆಗಳ ವಿವರ
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 18 ರ ತರಕಾರಿ ಬೆಲೆಗಳ ವಿವರ
shimoga | Details of vegetable prices for June 18 in Shivamogga APMC wholesale market
shimoga | power cut news | ಶಿವಮೊಗ್ಗ : ಗಾಂಧಿಬಜಾರ್ ಸುತ್ತಮುತ್ತ ಜೂ. 18 ರಂದು ವಿದ್ಯುತ್ ವ್ಯತ್ಯಯ!
shimoga | Shivamogga: Power outage around Gandhibazar on June 18!
shimoga | ಶಿವಮೊಗ್ಗ : ಗಾಂಧಿಬಜಾರ್ ಸುತ್ತಮುತ್ತ ಜೂ. 18 ರಂದು ವಿದ್ಯುತ್ ವ್ಯತ್ಯಯ!
bhadra dam | ಭದ್ರಾ ಜಲಾಶಯ ಎಡದಂಡೆ ನಾಲೆಗೆ ಮುಂಗಾರು ಹಂಗಾಮಿನ ನೀರು ವ್ಯತ್ಯಯ : ಕಾರಣವೇನು?
Bhadra Dam | Monsoon season water flow to Bhadra Reservoir left bank canal: What is the reason?
bhadra dam | ಭದ್ರಾ ಜಲಾಶಯ ಎಡದಂಡೆ ನಾಲೆಗೆ ಮುಂಗಾರು ಹಂಗಾಮಿನ ನೀರು ವ್ಯತ್ಯಯ : ಕಾರಣವೇನು?