ಬಿರುಗಾಳಿ ಮಳೆ – ಸಿಡಿಲು ಬಡಿದು ಮಹಿಳೆ ಸಾವು!

ಶಿವಮೊಗ್ಗ, ಮೇ 29: ಶಿವಮೊಗ್ಗ ನಗರದಲ್ಲಿ ಸೋಮವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಬಿದ್ದ ಭಾರೀ ಮಳೆಯ ವೇಳೆ ಸಿಡಿಲು ಬಡಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಹಾಗೆಯೇ ನಗರದ ವಿವಿಧೆಡೆ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾದ ವರದಿಗಳು ಬಂದಿವೆ.

ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಲಕ್ಷ್ಮೀಬಾಯಿ (28) ಎಂಬ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕುರಿಗಳಿಗೆ ಮೇವು ತರಲು ಮನೆಯಿಂದ ಹೊರಹೊದ ವೇಳೆ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

ಅಪಾರ ಹಾನಿ: ಬಿರುಗಾಳಿ ಮಳೆಗೆ ನಗರದ ವಿವಿಧೆಡೆ ಮರಗಳು ಉರುಳಿ ಬಿದ್ದಿವೆ. ಸೋಮಿನಕೊಪ್ಪ ಬಡಾವಣೆಯ ಕೆ.ಹೆಚ್.ಬಿ ಕಾಲೋನಿಯಲ್ಲಿ ಬಿರುಗಾಳಿಗೆ ವಾಸದ ಮನೆ, ಲೇಔಟ್ ವೊಂದರ ಶೆಡ್ ಹಾಗೂ ಜಾನುವಾರು ಕೊಟ್ಟಿಗೆಯ ತಗಡಿನ ಶೀಟ್ ಗಳು ಹಾರಿ ಹೋದ ಘಟನೆ ನಡೆದಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯು ಎನ್‌ವಿಎಸ್-01  ನ್ಯಾವಿಗೇಶನ್ (ದಿಕ್ಸೂಚಿ – ಪಥದರ್ಶಕ) ಉಪಗ್ರಹ ವನ್ನು ಮೇ 29 ರ ಸೋಮವಾರ ಬೆಳಿಗ್ಗೆ10.42 ಕ್ಕೆ ಆಂಧ್ರಪ್ರದೇಶದ ಶೀಹರಿಕೊಟಾ ದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹ ಉಡಾವಣೆ ಮೂಲಕ ಇಸ್ರೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಉಪಗ್ರಹವು 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ. Previous post ಇಸ್ರೋದಿಂದ ‘ಎನ್‌ವಿಎಸ್‌–01’ ನ್ಯಾವಿಗೇಶನ್ ಉಪಗ್ರಹ ಯಶಸ್ವಿ ಉಡಾವಣೆ
Next post ಶಿವಮೊಗ್ಗ ಜಿಲ್ಲೆಯ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ