
ದೇವಾಲಯದಲ್ಲಿ ಕಳ್ಳತನ : 6 ವರ್ಷ ಕಠಿಣ ಜೈಲು ಶಿಕ್ಷೆ!
ತೀರ್ಥಹಳ್ಳಿ, ಜೂ. 9: ದೇವಾಲಯದಲ್ಲಿ ಕಳವು ಮಾಡಿದ್ದ ವ್ಯಕ್ತಿಗೆ 6 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ತೀರ್ಥಹಳ್ಳಿಯ ಹಿರಿಯ ವ್ಯವಹಾರ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ತೀರ್ಪು ನೀಡಿದೆ.
ಚಿಕ್ಕಮಗಳೂರು ಜಿಲ್ಲೆ ಹೊಸಕೊಪ್ಪದ ಎಜಿ ಕಟ್ಟೆಯ ಬೇರು ಕೊಡಿಗೆ ನಿವಾಸಿ ಮಂಜುನಾಥ್ ಯಾನೆ ಬೋರ (41) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಶಿಕ್ಷೆಯ ಜೊತೆಗೆ 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ 1 ವರ್ಷ ಹೆಚ್ಚುವರಿಯಾಗಿ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರಾದ ಭರತ್ ಅವರು ಜೂ. 9 ರಂದು ನೀಡಿರುವ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೇಮಲೀಲಾ ಡಿ.ಜೆ. ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನಲೆ: 7-7-2021 ರಂದು ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪ ಚಂಗಾರು ಗ್ರಾಮದಲ್ಲಿರುವ ಉಮಾ ಮಹೇಶ್ವರ ದೇವಾಲಯದಲ್ಲಿ ಕಳವು ಕೃತ್ಯ ನಡೆದಿತ್ತು. ಕಾಣಿಕೆ ಹುಂಡಿಯಲ್ಲಿದ್ದ ಹಣ ಅಪಹರಿಸಲಾಗಿತ್ತು.
ಈ ಸಂಬಂಧ ದೇವಾಲಯ ಸಮಿತಿಯವರು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಂಜುನಾಥ್ ನನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.
More Stories
thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿ ಯುವತಿ!
thirthahalli | 19-year-old girl from Thirthahalli mysteriously disappears!
thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿಯ 19 ವರ್ಷದ ಯುವತಿ!
thirthahalli | ಅಪಘಾತದಲ್ಲಿ ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಉದ್ಯೋಗಿ ಸಾವು : ನಾಲ್ವರಿಗೆ ಗಾಯ!
Thirthahalli DCC Bank employee dies in accident: Four injured!
thirthahalli | ಅಪಘಾತದಲ್ಲಿ ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಉದ್ಯೋಗಿ ಸಾವು : ನಾಲ್ವರಿಗೆ ಗಾಯ!
Thirthahalli | ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು!
Thirthahalli: A young man who had gone swimming in the Tunga River drowned!
ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು!
thirthahalli | ತೀರ್ಥಹಳ್ಳಿಯಲ್ಲಿ 2 ಮನೆಗಳ ಕಳ್ಳತನ ಪ್ರಕರಣ : ಶಿವಮೊಗ್ಗದ ಮೂವರು ಅರೆಸ್ಟ್!
Thirthahalli | Theft of 2 houses in Thirthahalli: Three arrested from Shivamogga!
thirthahalli | ತೀರ್ಥಹಳ್ಳಿಯಲ್ಲಿ 2 ಮನೆಗಳ ಕಳ್ಳತನ ಪ್ರಕರಣ : ಶಿವಮೊಗ್ಗದ ಮೂವರು ಅರೆಸ್ಟ್!
thirthahalli | ತೀರ್ಥಹಳ್ಳಿ : ನಕಲಿ ಬಂಗಾರ ವಂಚಕರ ಗ್ಯಾಂಗ್ ನಿಂದ ಆಂಧ್ರ ವ್ಯಾಪಾರಿಗೆ ಲಕ್ಷಾಂತರ ರೂ. ದೋಖಾ!
thirthahalli | ತೀರ್ಥಹಳ್ಳಿ : ನಕಲಿ ಬಂಗಾರ ವಂಚಕರ ಗ್ಯಾಂಗ್ ನಿಂದ ಆಂಧ್ರ ವ್ಯಾಪಾರಿಗೆ ಲಕ್ಷಾಂತರ ರೂ. ದೋಖಾ!
Tirthahalli: A gang of fake gold fraudsters cheated an Andhra merchant of millions of rupees!
thirthahalli | ತೀರ್ಥಹಳ್ಳಿ : ಪ್ರವಾಸಿ ಬಸ್, ಬೈಕ್ ನಡುವೆ ಅಪಘಾತ – ವಿದ್ಯಾರ್ಥಿ ಸಾವು!
Accident between private tourist bus and bike near Bejjuvalli in Thirthahalli : student dies
ತೀರ್ಥಹಳ್ಳಿಯ ಬೆಜ್ಜುವಳ್ಳಿ ಬಳಿ ಖಾಸಗಿ ಪ್ರವಾಸಿ ಬಸ್ – ಬೈಕ್ ನಡುವೆ ಅಪಘಾತ : ವಿದ್ಯಾರ್ಥಿ ಸಾವು!