ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ಶಿವಮೊಗ್ಗ, ಆ. 14: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದ ನಿರ್ಜನ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ನೀರಿನ ಗುಂಡಿಯೊಂದಕ್ಕೆ ಬಿದ್ದು, ಹೊರಬರಲಾಗದೆ ಸಂಕಷ್ಟ ಪಡುತ್ತಿದ್ದ ಎರಡು ಎಮ್ಮೆಗಳನ್ನು ಭಾನುವಾರ ರಕ್ಷಿಸಿದ ಘಟನೆ ನಡೆದಿದೆ.

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ಸೋಮಿನಕೊಪ್ಪದ ಜಾನುವಾರು ಪಾಲಕರಾದ ಮುತಾಹೆರ್ ಇಕ್ಬಾಲ್ ಎಂಬುವರಿಗೆ ಈ ಎಮ್ಮೆಗಳು ಸೇರಿದ್ದಾಗಿವೆ. ಕಳೆದ ಮೂರು ದಿನಗಳ ಹಿಂದೆ ಎಂದಿನಂತೆ ಎಮ್ಮೆಗಳನ್ನು ಮೇಯಲು ಬಿಟ್ಟಿದ್ದರು.

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ಆದರೆ ಇದರಲ್ಲಿ ಎರಡು ಎಮ್ಮೆಗಳು ಸುಮಾರು ಐದಾರು ಅಡಿ ಆಳದ ಗುಂಡಿಗೆ ಬಿದ್ದಿದ್ದವು. ಎಲ್ಲೆಡೆ ಹುಡುಕಿದರೂ ಎಮ್ಮೆಗಳ ಸುಳಿವು ಲಭ್ಯವಾಗಿರಲಿಲ್ಲ.

ಭಾನುವಾರ ಎಮ್ಮೆಗಳ ಹುಡುಕಾಟದಲ್ಲಿದ್ದ ಮುತಾಹೇರ್ ಇಕ್ಬಾಲ್ ರವರ ಪುತ್ರ ಶೇಕ್ ಅಯಾಜ್ ಅವರಿಗೆ, ನೀರಿನ ಗುಂಡಿಯಲ್ಲಿ ಎಮ್ಮೆಗಳು ಸಿಲುಕಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ತಕ್ಷಣವೇ ಕುಟುಂಬ ಸದಸ್ಯರು ಎರಡು ಎಮ್ಮೆಗಳನ್ನು ಗುಂಡಿಯಿಂದ ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ.

ತೀರ್ಥಹಳ್ಳಿ - ರೆಸಾರ್ಟ್ ಮೇಲೆ ಪೊಲೀಸರ ದಾಳಿ : ಬಂದೂಕು, ಚಾಕು, ಕತ್ತಿ, ಮದ್ಯದ ಬಾಟಲಿಗಳು ವಶ..! Previous post ತೀರ್ಥಹಳ್ಳಿ – ರೆಸಾರ್ಟ್ ಮೇಲೆ ಪೊಲೀಸರ ದಾಳಿ : ಬಂದೂಕು, ಚಾಕು, ಕತ್ತಿ, ಮದ್ಯದ ಬಾಟಲಿಗಳು ವಶ..!
ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿ ಜಾನುವಾರುಗಳ ಕಳವು..! *ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ!! Next post ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿ ಜಾನುವಾರುಗಳ ಕಳವು!