Flights from Shimoga to Goa Hyderabad Tirupati start: complete schedule details! ಉದಯ ಸಾಕ್ಷಿ ನ್ಯೂಸ್ ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್, ತಿರುಪತಿಗೆ ವಿಮಾನ ಸೇವೆ : ಇಲ್ಲಿದೆ ವೇಳಾಪಟ್ಟಿಯ ಕಂಪ್ಲೀಟ್ ಡೀಟೇಲ್ಸ್!

ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್, ತಿರುಪತಿಗೆ ವಿಮಾನ ಸೇವೆ : ಇಲ್ಲಿದೆ ವೇಳಾಪಟ್ಟಿಯ ಕಂಪ್ಲೀಟ್ ಡೀಟೇಲ್ಸ್!

ಶಿವಮೊಗ್ಗ, ನ. 21: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂದಿನಿಂದ ಗೋವಾ, ಹೈದ್ರಾಬಾದ್ ಹಾಗೂ ತಿರುಪತಿಗೆ ಸ್ಟಾರ್ ಏರ್ ಸಂಸ್ಥೆಯ ವಿಮಾನ ಹಾರಾಟ ಆರಂಭಗೊಂಡಿದೆ.

ಶಿವಮೊಗ್ಗ, ಗೋವಾ ಮತ್ತು ತಿರುಪತಿ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯವಿರಲಿದೆ. ವೇಳಾಪಟ್ಟಿಯ ವಿವರ ಈ ಮುಂದಿನಂತಿದೆ.

ಶಿವಮೊಗ್ಗ – ಗೋವಾ ವಿಮಾನ: ಶಿವಮೊಗ್ಗ – ಗೋವಾ ಹಾಗೂ ಗೋವಾ – ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ನಡೆಸಲಿದೆ.

ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಶಿವಮೊಗ್ಗದಿಂದ ಮಧ್ಯಾಹ್ನ 1. 55 ಕ್ಕೆ ಹೊರಡುವ ವಿಮಾನವು  ಮಧ್ಯಾಹ್ನ 2. 40 ಕ್ಕೆ ಗೋವಾ ನಿಲ್ದಾಣ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3. 10 ಕ್ಕೆ ಹೊರಡುವ ವಿಮಾನವು ಸಂಜೆ 4. 05 ಕ್ಕೆ ಶಿವಮೊಗ್ಗ ತಲುಪಲಿದೆ.

ಬುಧವಾರ ಬೆಳಿಗ್ಗೆ ಶಿವಮೊಗ್ಗದಿಂದ 11 ಗಂಟೆಗೆ ಹೊರಡಲಿರುವ ವಿಮಾನವು, ಬೆಳಿಗ್ಗೆ 11. 50 ಕ್ಕೆ ಗೋವಾ ತಲುಪಲಿದೆ. ಹಾಗೆಯೇ ಮಧ್ಯಾಹ್ನ 12. 20 ಗೋವಾದಿಂದ ಹೊರಡಲಿರುವ ವಿಮಾನವು ಮಧ್ಯಾಹ್ನ 1.10 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಶಿವಮೊಗ್ಗ – ಹೈದ್ರಾಬಾದ್ : ಶಿವಮೊಗ್ಗ – ಹೈದ್ರಾಬಾದ್ ಹಾಗೂ ಹೈದ್ರಾಬಾದ್ ಶಿವಮೊಗ್ಗ – ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ನಡೆಸಲಿದೆ.

ಹೈದ್ರಾಬಾದ್ ನಿಂದ ಬೆಳಿಗ್ಗೆ 9. 35 ಕ್ಕೆ ಹೊರಡುವ ವಿಮಾನವು ಬೆಳಿಗ್ಗೆ 10. 35 ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸಂಜೆ 4. 30 ಕ್ಕೆ ಹೊರಡುವ ವಿಮಾನವು ಸಂಜೆ 5.30 ಕ್ಕೆ ಹೈದ್ರಾಬಾದ್ ತಲುಪಲಿದೆ.

ಶಿವಮೊಗ್ಗ – ತಿರುಪತಿ : ಶಿವಮೊಗ್ಗ – ತಿರುಪತಿ ಹಾಗೂ ತಿರುಪತಿ – ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯವಿರಲಿದೆ.

ಮಂಗಳವಾರ, ಗುರುವಾರ, ಶನಿವಾರ ಶಿವಮೊಗ್ಗದಿಂದ ಬೆಳಿಗ್ಗೆ 11 ಗಂಟೆಗೆ ಹೊರಡುವ ವಿಮಾನವು 11.  50 ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಮಧ್ಯಾಹ್ನ 12. 15 ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 1. 40 ಕ್ಕೆ ಶಿವಮೊಗ್ಗ ತಲುಪಲಿದೆ.

ಬುಧವಾರ ಶಿವಮೊಗ್ಗದಿಂದ ಮಧ್ಯಾಹ್ನ 1. 40 ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 2. 30 ಕ್ಕೆ ತಿರುಪತಿ ತಲುಪಲಿದೆ. ಬುಧವಾರ ತಿರುಪತಿಯಿಂದ ಮಧ್ಯಾಹ್ನ 3 ಗಂಟೆಗೆ ಹೊರಡುವ ವಿಮಾನವು ಮಧ್ಯಾಹ್ನ 3. 50 ಕ್ಕೆ ಶಿವಮೊಗ್ಗ ತಲುಪಲಿದೆ.

From Bhadra Reservoir Water flow to canals stopped from 22 ಭದ್ರಾ ಜಲಾಶಯದಿಂದ ನ. 22 ರಿಂದ ನಾಲೆಗಳಿಗೆ ನೀರು ಹರಿವು ಸ್ಥಗಿತ Previous post ಭದ್ರಾ ಜಲಾಶಯದಿಂದ ನ. 22 ರಿಂದ ನಾಲೆಗಳಿಗೆ ನೀರು ಹರಿವು ಸ್ಥಗಿತ
Shimoga DC instructs to take action to prevent shortage of drinking water and fodder for cattle ‘ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗಬಾರದು’ : ಶಿವಮೊಗ್ಗ ಡಿಸಿ ಖಡಕ್ ಸೂಚನೆ Next post ‘ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗಬಾರದು’ : ಶಿವಮೊಗ್ಗ ಡಿಸಿ ಖಡಕ್ ಸೂಚನೆ