Soraba: Kerala-based man killed by stabbing! ಸೊರಬ : ಮಾರಕಾಸ್ತ್ರದಿಂದ ಇರಿದು ಕೇರಳ ಮೂಲದ ಕೂಲಿಕಾರ್ಮಿಕನ ಕೊಲೆ!

ಸೊರಬ : ಮಾರಕಾಸ್ತ್ರದಿಂದ ಇರಿದು ಕೇರಳ ಮೂಲದ ಕೂಲಿಕಾರ್ಮಿಕನ ಕೊಲೆ!

ಸೊರಬ, ಡಿ. 5: ಮಾರಕಾಸ್ತ್ರದಿಂದ ಇರಿದು ಕೇರಳ ಮೂಲದ ಕೂಲಿ ಕಾರ್ಮಿಕನೋರ್ವನನ್ನು ಕೊಲೆ ಮಾಡಿರುವ ಘಟನೆ ಸೊರಬ ತಾಲೂಕಿನ ಕಟ್ಟಿನಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕೇರಳ ರಾಜ್ಯದ ಕಣ್ಣೂರು ನಿವಾಸಿ ಶಿಜು (42) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದರು.

ಈತನೊಂದಿಗೆ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯೇ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮದ್ಯದ ಅಮಲಿನಲ್ಲಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಸೊರಬ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

Shimoga: PU student's death - anger of parents against the college! ವಿದ್ಯಾರ್ಥಿನಿಯ ಸಾವು – ಕಾಲೇಜ್ ವಿರುದ್ದ ಪೋಷಕರ ತೀವ್ರ ಆಕ್ರೋಶ : ಸ್ಥಳಕ್ಕೆ ಎಸ್ಪಿ ಭೇಟಿ Previous post ವಿದ್ಯಾರ್ಥಿನಿಯ ಸಾವು – ಕಾಲೇಜ್ ವಿರುದ್ದ ಪೋಷಕರ ತೀವ್ರ ಆಕ್ರೋಶ : ಸ್ಥಳಕ್ಕೆ ಎಸ್ಪಿ ಭೇಟಿ
Protest demanding to name Shimoga airport after Kuvempu ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಆಗ್ರಹಿಸಿ ಪ್ರತಿಭಟನೆ Next post ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಆಗ್ರಹಿಸಿ ಪ್ರತಿಭಟನೆ