Thieves stole the sandalwood trees in front of the house of an environmental lover! ಪರಿಸರ ಪ್ರೇಮಿ ಮನೆ ಮುಂಭಾಗವಿದ್ದ ಶ್ರೀಗಂಧದ ಮರಗಳನ್ನೇ ಕಳವು ಮಾಡಿದ ಕಳ್ಳರು!

ಪರಿಸರ ಪ್ರೇಮಿ ಮನೆ ಮುಂಭಾಗವಿದ್ದ ಶ್ರೀಗಂಧದ ಮರಗಳನ್ನೇ ಕಳವು ಮಾಡಿದ ಕಳ್ಳರು!

ಸಾಗರ, ಡಿ. 10: ಮನೆಯೊಂದರ ಮುಂಭಾಗವಿದ್ದ ಎರಡು ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕೊಂಡೊಯ್ದಿರುವ ಘಟನೆ ಸಾಗರ ನಗರದ ರಾಂಪುರ ಬಡಾವಣೆಯ ಸುವಿಧಾ ಸೂಪರ್ ಮಾರ್ಕೆಟ್ ಸಮೀಪ ನಡೆದಿದೆ.

ಪರಿಸರ ಪ್ರೇಮಿ ಗೌತಮ್ ಪೈ ಎಂಬುವರ ಮನೆಯ ಬಳಿ ಈ ಘಟನೆ ನಡೆದಿದೆ. ‘ಡಿ. 6 ರ ಮುಂಜಾನೆ ಸರಿಸುಮಾರು 2.30 ರ ನಂತರ ಈ ಕೃತ್ಯ ನಡೆಸಲಾಗಿದೆ. ಒಂದು ಮರ 22 ವರ್ಷ ಹಾಗೂ ಮತ್ತೊಂದು ಮರ 18 ವರ್ಷ ಹಳೇಯದ್ದಾಗಿದೆ.

ಅತ್ಯಂತ ವ್ಯವಸ್ಥಿತವಾಗಿ ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ’ ಎಂದು ಗೌತಮ್ ಪೈ ಅವರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಆರ್.ಎಫ್.ಓ ಅರವಿಂದ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Indefinite protest warning for distribution of BPL card! ಬಿಪಿಎಲ್ ಕಾರ್ಡ್ ವಿತರಣೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಎಚ್ಚರಿಕೆ! Previous post ಬಿಪಿಎಲ್ ಕಾರ್ಡ್ ವಿತರಣೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಎಚ್ಚರಿಕೆ!
MLA Manjunath Bhandari demands in the Vidhan Sabha to announce the name of Kuvempu-Keladi Shivappanayak for the Shimoga Airport-Railway Station. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು - ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪನಾಯಕ ಹೆಸರು ಘೋಷಣೆಗೆ ವಿಧಾನ ಪರಿಷತ್ ನಲ್ಲಿ ಶಾಸಕ ಮಂಜುನಾಥ್ ಭಂಡಾರಿ ಆಗ್ರಹ Next post ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು – ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪನಾಯಕ ಹೆಸರು ಘೋಷಣೆಗೆ ವಿಧಾನ ಪರಿಷತ್ ನಲ್ಲಿ ಶಾಸಕ ಮಂಜುನಾಥ್ ಭಂಡಾರಿ ಆಗ್ರಹ