The accused of Shikaripura who cheated Tarikere old woman in Shimoga with a fake gold chain was arrested! ಶಿವಮೊಗ್ಗದಲ್ಲಿ ತರೀಕೆರೆ ವೃದ್ದೆಗೆ ನಕಲಿ ಬಂಗಾರದ ಸರ ನೀಡಿ ವಂಚಿಸಿದ್ದ ಶಿಕಾರಿಪುರದ ಆರೋಪಿ ಸೆರೆ!

ಶಿವಮೊಗ್ಗದಲ್ಲಿ ತರೀಕೆರೆ ವೃದ್ದೆಗೆ ನಕಲಿ ಬಂಗಾರದ ಸರ ನೀಡಿ ವಂಚಿಸಿದ್ದ ಶಿಕಾರಿಪುರದ ಆರೋಪಿ ಸೆರೆ!

ಶಿವಮೊಗ್ಗ, ಜ. 14: ವಯೋವೃದ್ದೆಯೋರ್ವರಿಗೆ ನಕಲಿ ಬಂಗಾರದ ಸರ ನೀಡಿ, ಅವರ ಬಳಿಯಿದ್ದ ಅಸಲಿ ಬಂಗಾರದ ಆಭರಣ ಪಡೆದು ವಂಚಿಸಿದ್ದ ಆರೋಪದ ಮೇರೆಗೆ, ಓರ್ವನನ್ನು ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದ ನಿವಾಸಿ ಕೃಷ್ಣಪ್ಪ (62) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 25 ಸಾವಿರ ರೂ. ಮೌಲ್ಯದ 05 ಗ್ರಾಂದ ತೂಕದ ಬಂಗಾರದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ಸ್’ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಶ್ರೀನಿವಾಸ್, ಸಿಬ್ಬಂದಿಗಳಾದ ಫಾಲಾಕ್ಷನಾಯ್ಕ್, ಲಚ್ಚಾನಾಯ್ಕ್, ಚಂದ್ರಾನಾಯ್ಕ್, ನಿತಿನ್, ಪುನೀತ್, ಚಂದ್ರಾನಾಯ್ಕ್ ಎಂ, ಮನೋಹರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಲಕ್ಷಮ್ಮ (70) ಎಂಬುವರು ಅಡಕೆ ಸುಲಿಯುವ ಕೆಲಸಕ್ಕೆಂದು ತೀರ್ಥಹಳ್ಳಿಗೆ ತೆರಳಲು ಶಿವಮೊಗ್ಗಕ್ಕೆ ಆಗಮಿಸಿ, ಅಲ್ಲಿಂದ ಖಾಸಗಿ ಬಸ್ ನಿಲ್ದಾಣದ ಕಡೆ ಹೋಗುತ್ತಿರುವಾಗ ಇಬ್ಬರು ಅಪರಿಚಿತರು ಇವರನ್ನು ನಿಲ್ಲಿಸಿ ಪರಿಚಯ ಮಾಡಿಕೊಂಡಿದ್ದರು.

‘ಮಗಳನ್ನು ಚಿಕಿತ್ಸೆಗೆ ದಾಖಲಿಸಿದ್ದು, ಆಪರೇಷನ್ ಮಾಡಲು ಹಣ ಬೇಕಾಗಿದೆ. ಈ ಕಾರಣದಿಂದ ತಮ್ಮ ಬಳಿಯಿರುವ ದುಬಾರಿ ಬೆಲೆಯ ಕಾಸಿನ ಸರ ಮಾರುತ್ತಿದ್ದೆವೆ’ ಎಂದು ಹೇಳಿದ್ದಾರೆ. ಆದರೆ ಲಕ್ಷಮ್ಮ ಅವರು ತಮ್ಮ ಬಳಿ ಹಣವಿಲ್ಲ ಎಂದು ತಿಳಿಸಿದ್ದಾರೆ.

‘ನಿಮ್ಮ ಬಳಿಯಿರುವ ಕಿವಿಯೊಲೆ, ಸರ ಕೊಡಿ. ಕಾಸಿನ ಸರವನ್ನು ಬೇರೆಡೆ ಮಾರಾಟ ಮಾಡಿ…’ ಎಂದು ವಂಚಕರು ನಂಬಿಸಿದ್ದರು. ಇವರ ಮಾತು ನಂಬಿದ ವೃದ್ದೆಯು, 3 ಗ್ರಾಂ ತೂಕದ ಕಿವಿಯೊಲೆ ಹಾಗೂ 2 ಗ್ರಾಂ ತೂಕದ ಸರವನ್ನು ನೀಡಿದ್ದರು. ನಂತರ ಕಾಸಿನ ಸರ ನಕಲಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Sexual harassment of 15-year-old girl: 19-year-old man sentenced to 20 years of rigorous imprisonment! 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ : 19 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ! Previous post 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ : 19 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!
ಶಿವಮೊಗ್ಗದ ಪ್ರೆಸ್ ಕಾಲೋನಿ ಸುತ್ತಮುತ್ತ ಹೆಚ್ಚಾದ ಕಳ್ಳಕಾಕರು : ಗಮನಹರಿಸುವರೆ ಪೊಲೀಸರು?! ಶಿವಮೊಗ್ಗ, ಜ. 15: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮಿನಕೊಪ್ಪದ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಇತ್ತೀಚೆಗೆ ಕಳ್ಳಕಾಕರ ಹಾವಳಿ ವಿಪರೀತವಾಗಿದೆ. ಸ್ಥಳೀಯ ನಾಗರೀಕರ ನಿದ್ದೆಗೆಡುವಂತೆ ಮಾಡಿದೆ. ಭಾನುವಾರ ರಾತ್ರಿ ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಯ, ಮೂರ್ನಾಲ್ಕು ಕಡೆ ಕಳವು ಕೃತ್ಯಗಳು ನಡೆದಿವೆ. ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ವಾಹನದಿಂದ ಪೆಟ್ರೋಲ್ ತೆಗೆಯುವುದರ ಜೊತೆಗೆ, ಕೆಲ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉಳಿದಂತೆ ಕೆಲವೆಡೆ ನಿರ್ಮಾಣ ಹಂತದ ಕಟ್ಟಡಗಳ ಸ್ಥಳದ ಶೆಡ್ ಗಳ ಶೀಟ್ ಗಳನ್ನು ಕಿತ್ತು ಹಾಕಿ ಕಳವಿಗೆ ಯತ್ನಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗಣಪತಿ ದೇವಾಲಯದ ಹುಂಡಿ ಒಡೆದು ಅದರೊಳಗಿದ್ದ ಸಾವಿರಾರು ರೂ. ಗಳನ್ನು ಕಳ್ಳರು ಅಪಹರಿಸಿದ್ದರು. ಮನೆಯೊಂದರ ಮುಂಭಾಗವಿದ್ದ ಕಬ್ಬಿಣದ ನೆಲಹಾಸನ್ನು ಕಳವು ಮಾಡಲಾಗಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ. ‘ಬಡಾವಣೆಯ ಸುತ್ತಮುತ್ತ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಇದರ ಜೊತೆಗೆ ಗಾಂಜಾ, ಮದ್ಯ ವ್ಯಸನಿಗಳ ಹಾವಳಿಯಿದೆ. ಕ್ರಿಮಿನಲ್ಸ್ ಗಳಿಗೆ ಯಾವುದೇ ಭಯವಿಲ್ಲವಾಗಿದೆ. ಇದು ಸಹಜವಾಗಿಯೇ ಆತಂಕ ಉಂಟು ಮಾಡಿದೆ. ಪೊಲೀಸರು ಕಳ್ಳಕಾಕರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. Next post ಶಿವಮೊಗ್ಗದ ಪ್ರೆಸ್ ಕಾಲೋನಿ ಸುತ್ತಮುತ್ತ ಹೆಚ್ಚಾದ ಕಳ್ಳಕಾಕರು : ಗಮನಹರಿಸುವರೆ ಪೊಲೀಸರು?!