Kudos to the police personnel who tracked down the accused who did not appear in court and managed the police station files well ಕೋರ್ಟ್’ಗೆ ಹಾಜರಾಗದ ಆರೋಪಿಗಳ ಪತ್ತೆ ಹಚ್ಚಿದ, ಉತ್ತಮವಾಗಿ ಠಾಣಾ ಕಡತಗಳ ನಿರ್ವಹಣೆ ಮಾಡಿದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ

ಕೋರ್ಟ್’ಗೆ ಹಾಜರಾಗದ ಆರೋಪಿಗಳ ಪತ್ತೆ ಹಚ್ಚಿದ – ಉತ್ತಮವಾಗಿ ಠಾಣಾ ಕಡತಗಳ ನಿರ್ವಹಣೆ ಮಾಡಿದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ

ಶಿವಮೊಗ್ಗ, ಫೆ. 12: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದ  ಹಾಗೂ ಉತ್ತಮವಾಗಿ ಠಾಣಾ ಕಡತಗಳ ನಿರ್ವಹಣೆ ಮಾಡಿದ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.

ಆರೋಪಿಗಳ ಪತ್ತೆ : ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ನಾಗರಾಜ್ ಹೆಚ್ ಸಿ ಹಾಗೂ ಕುಮಾರ್ ನಾಯ್ಕ್ ಹೆಚ್ ಸಿ ರವರು ಒಟ್ಟು 7 ಎಲ್.ಪಿ.ಆರ್, 7 ಪ್ರೊಕ್ಲಮೇಷನ್ ಹಾಗೂ 19 ಜನ ತಲೆ ಮರೆಸಿಕೊಂಡಿದ್ದ ವಾರೆಂಟ್ ಆಸಾಮಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಫಲರಾಗಿದ್ದಾರೆ.

ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ರಾಘವೇಂದ್ರ ಹೆಚ್ ಸಿ ಹಾಗೂ ಸಜ್ಜನ್ ರಾವ್ ಸಿಪಿಸಿ ರವರು ಒಟ್ಟು 4 ಎಲ್.ಪಿ.ಆರ್, 3 ಪ್ರೊಕ್ಲಮೇಷನ್ ಮತ್ತು 14  ಜನ ತಲೆ ಮರೆಸಿಕೊಂಡಿದ್ದ ವಾರೆಂಟ್ ಆಸಾಮಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಕಡತ ನಿರ್ವಹಣೆ : ಹಾಗೆಯೇ ಸಾಗರ ಪೊಲೀಸ್ ಠಾಣೆಯ ಶಂಕರ್ ಹೆಚ್ ಸಿ ಮತ್ತು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ದ್ಯಾಮಣ್ಣ ಹೆಚ್ ಸಿ ಅವರು, ಠಾಣಾ ಬರಹಗಾರರಾಗಿ ಮತ್ತು ಕಡತಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದರು.

ಸನ್ಮಾನ : ಶಿವಮೊಗ್ಗದ ಎಸ್ಪಿ ಕಚೇರಿಯಲ್ಲಿ ಫೆ. 12 ರಂದು ಸದರಿ ಸಿಬ್ಬಂದಿಗಳಿಗೆ ಎಸ್ಪಿ ಅವರು ಸನ್ಮಾನಿಸುವುದರ ಜೊತೆಗೆ, ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

What is the truth behind the viral video of the gun show? : The fake air pistol of Maklaklata was shown to the light! ಗನ್ ಪ್ರದರ್ಶನದ ವೈರಲ್ ವೀಡಿಯೋದ ಸತ್ಯಾಂಶವೇನು? : ಮಕ್ಕಳಾಟದ ನಕಲಿ ಏರ್ ಪಿಸ್ತೂಲ್ ತೋರಿಸಿದ್ದು ಬೆಳಕಿಗೆ! Previous post ಗನ್ ಪ್ರದರ್ಶನದ ವೈರಲ್ ವೀಡಿಯೋದ ಸತ್ಯಾಂಶವೇನು? : ಮಕ್ಕಳಾಟದ ನಕಲಿ ಏರ್ ಪಿಸ್ತೂಲ್ ತೋರಿಸಿದ್ದು ಬೆಳಕಿಗೆ…!
'Vishwaguru Basavanna - Cultural Leader' - Must be slogan in all government offices: CM Siddaramaiah ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ - ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಘೋಷವಾಕ್ಯ ಕಡ್ಡಾಯ : ಸಿಎಂ ಸಿದ್ದರಾಮಯ್ಯ Next post ‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ : ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಘೋಷವಾಕ್ಯ ಕಡ್ಡಾಯ