
ರಾಜ್ಯದಲ್ಲಿಯೂ ನಿಷೇಧವಾಗಲಿದೆಯಾ ಗೋಬಿ ಮಂಚೂರಿ – ಬಾಂಬೆ ಮಿಠಾಯಿ?!
ಬೆಂಗಳೂರು, ಮಾ. 10: ಆರೋಗ್ಯಕ್ಕೆ ಹಾನಿಕಾರಕ ಅಂಶ ಒಳಗೊಂಡಿರುವ ಹಿನ್ನೆಲೆಯಲ್ಲಿ, ಗೋವಾ ರಾಜ್ಯದ ಮಾಪುಸ ನಗರಾಡಳಿತವು ಗೋಬಿ ಮಂಚೂರಿ ನಿಷೇಧಿಸಿತ್ತು. ಮತ್ತೊಂದೆಡೆ ತಮಿಳುನಾಡು ಹಾಗೂ ಪುದುಚೇರಿ ಸರ್ಕಾರಗಳು, ಬಾಂಬೆ ಮಿಠಾಯಿ ನಿಷೇಧಿಸಿತ್ತು. ಈ ನಡುವೆ ಕರ್ನಾಟಕ ರಾಜ್ಯದಲ್ಲಿ ಈ ಎರಡು ತಿನಿಸುಗಳು ನಿಷೇಧಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಎರಡು ತಿನಿಸುಗಳ ಕುರಿತಂತೆ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಲಾಗಿದ್ದು, ಈಗಾಗಲೇ ಇದರ ವರದಿಯು ಆರೋಗ್ಯ ಇಲಾಖೆ ಕೈ ಸೇರಿದೆ. ಈ ಸಂಬಂಧ ಮಾ.11 ರ ಸೋಮವಾರ ಆರೋಗ್ಯ ಇಲಾಖೆ ಸಚಿವರು ಅದಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ರಾಜ್ಯದ ನೂರಾರು ಕಡೆ ಗೋಬಿ ಮಂಚೂರಿ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ತಪಾಸಣೆಗೊಳಪಡಿಸಿದೆ ಎಂದು ಹೇಳಲಾಗಿದೆ.
ಆರೋಗ್ಯ ಸಚಿವರು ಹೇಳಿದ್ದೇನು? : ‘ಗೋಬಿ ಮಂಚೂರಿ ಖಾದ್ಯದ ಬಗ್ಗೆ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ ಪರೀಕ್ಷೆ ನಡೆಸಲಾಗಿದ್ದು, ವರದಿ ಪರಿಶೀಲನೆ ನಡೆಸಿ ಸೋಮವಾರ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗೂಂಡುರಾವ್ ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ನಿಷೇಧ : ಕ್ಯಾನ್ಸರ್’ಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ, ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿ ಸರ್ಕಾರಗಳು ಬಾಂಬೆ ಮಿಠಾಯಿ ಸಿಹಿ ತಿನಿಸನ್ನು ನಿಷೇಧಿಸಿವೆ. ಮತ್ತೊಂದೆಡೆ ಗೋವಾ ರಾಜ್ಯದ ಮಾಪುಸ ನಗರಾಡಳಿತವು, ಗೋಬಿ ಮಂಚೂರಿ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಿತ್ತು.
More Stories
bengaluru | ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕ್ರಮಕ್ಕೆ ಸಿಎಂ ಸೂಚನೆ!
bengaluru | CM instructs for strict action against those who spread fake news!
bengaluru | ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕ್ರಮಕ್ಕೆ ಸಿಎಂ ಸೂಚನೆ!
bengaluru | ನಾಳೆಯೇ SSLC ಫಲಿತಾಂಶ : ಎಷ್ಟು ಗಂಟೆಗೆ ರಿಸಲ್ಟ್? ನೋಡೋದು ಹೇಗೆ?
bengaluru | SSLC result tomorrow: What time will the result be out? How to check it?
bengaluru | ನಾಳೆಯೇ SSLC ಫಲಿತಾಂಶ : ಎಷ್ಟು ಗಂಟೆಗೆ ರಿಸಲ್ಟ್? ನೋಡೋದು ಹೇಗೆ?
bengaluru | ಬೆಂಗಳೂರು | ಲಂಚವಿಲ್ಲದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ : ಸಿಎಂ ಸಿದ್ದರಾಮಯ್ಯ
bengaluru | Bangalore | Recruitment for village administrator posts without bribery, without the interference of middlemen: CM Siddaramaiah
bengaluru | ಬೆಂಗಳೂರು | ಲಂಚವಿಲ್ಲದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ : ಸಿಎಂ ಸಿದ್ದರಾಮಯ್ಯ
bengaluru | ‘ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ’ : ಸಿಎಂ ಸಿದ್ದರಾಮಯ್ಯ
‘India is ready to wage war against any country, be it Pakistan or any other’: CM Siddaramaiah
‘ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ’ : ಸಿಎಂ ಸಿದ್ದರಾಮಯ್ಯ
bengaluru | ‘ರೌಡಿಸಂ ಮಟ್ಟ ಹಾಕಿ..!’ : ಪೊಲೀಸರಿಗೆ ಸಿಎಂ ಖಡಕ್ ಸೂಚನೆ
CM instructs police to control rowdyism
‘ರೌಡಿಸಂ ಮಟ್ಟ ಹಾಕಿ..!’ : ಪೊಲೀಸರಿಗೆ ಸಿಎಂ ಖಡಕ್ ಸೂಚನೆ
diesel price hike | ಮತ್ತೊಂದು ಶಾಕ್ – ಡೀಸೆಲ್ ದರದಲ್ಲಿ ಏರಿಕೆ!
diesel price hike | Another shock – diesel price hike!
diesel price hike | ಮತ್ತೊಂದು ಶಾಕ್ – ಡೀಸೆಲ್ ದರದಲ್ಲಿ ಏರಿಕೆ!