The tragic death of three students who went swimming in the Tunga river! ತುಂಗಾ ನದಿಯಲ್ಲಿ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳ ದಾರುಣ ಸಾವು!

ತುಂಗಾ ನದಿಯಲ್ಲಿ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳ ದಾರುಣ ಸಾವು!

ತೀರ್ಥಹಳ್ಳಿ, ಏ. 1: ತುಂಗಾ ನದಿಯಲ್ಲಿ (tunga river) ಈಜಲು ತೆರಳಿದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ, ತೀರ್ಥಹಳ್ಳಿ (thirthahalli) ಪಟ್ಟಣದ ರಾಮಮಂಟಪದ ಸಮೀಪ ಸೋಮವಾರ ನಡೆದಿದೆ.

ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ನಿವಾಸಿಗಳಾದ ಮಹ್ಮದ್ ಅಯಾನ್ (16),  ರಫಾನ್ (16) ಹಾಗೂ ಸೊಪ್ಪುಗುಡ್ಡೆ ನಿವಾಸಿ ಸಮರ್ (16) ಮೃತಪಟ್ಟ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಇವರೆಲ್ಲ ಎಸ್.ಎಸ್.ಎಲ್.ಸಿ (sslc) ವಿದ್ಯಾರ್ಥಿಗಳಾಗಿದ್ದು ಸ್ನೇಹಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ರಂಜಾನ್ (Ramzan) ಉಪವಾಸ ಮುಗಿಸಿದ ನಂತರ ತುಂಗಾ ನದಿಯಲ್ಲಿ ಈಜಲು (swimming) ತೆರಳಿದ ವೇಳೆ ಮೂವರು ನೀರು ಪಾಲಾಗಿದ್ದಾರೆ ಎಂದು ಹೇಳಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು (thirthahalli police station) ಸ್ಥಳೀಯರೊಂದಿಗೆ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನದಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ. (udaya saakshi news website)

B.Y.Raghavendra criticism against K. S. Eshwarappa! ಕೆ.ಎಸ್.ಈಶ್ವರಪ್ಪ ವಿರುದ್ದ ಬಿ.ವೈ.ರಾಘವೇಂದ್ರ ಟೀಕಾಪ್ರಹಾರ! reporter – b. renukesha Previous post ಕೆ.ಎಸ್.ಈಶ್ವರಪ್ಪ ವಿರುದ್ದ ಬಿ.ವೈ.ರಾಘವೇಂದ್ರ ಟೀಕಾಪ್ರಹಾರ!
A case will fall if children are used for Lok Sabha election campaign! ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಸಿಕೊಂಡರೆ ಬೀಳಲಿದೆ ಕೇಸ್! Next post ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಸಿಕೊಂಡರೆ ಬೀಳಲಿದೆ ಕೇಸ್!