
ಭೀಕರ ರಸ್ತೆ ಅಪಘಾತ : ಕಾರಿನಲ್ಲಿದ್ದ ಮೂವರು ಸಾವು – ನಾಲ್ವರಿಗೆ ಗಾಯ!
ನ್ಯಾಮತಿ (nyamathi), ಏ. 11: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಓಮ್ನಿ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ (accident) ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನ್ಯಾಮತಿ ತಾಲೂಕು ಸವಳಂಗ (savalanga) ಸಮೀಪದ ಚಿನ್ನಿಕಟ್ಟೆ – ಬಿದರಹಳ್ಳಿ ಮಾರ್ಗದಲ್ಲಿ ನಡೆದಿದೆ.
ಶಿವಮೊಗ್ಗ (shivamogga) ತಾಲೂಕಿನ ಹರಮಘಟ್ಟದ ನಂಜುಂಡಪ್ಪ (83), ರಾಕೇಶ್ (27) ಹಾಗೂ ಹೊನ್ನಾಳ್ಳಿ ತಾಲೂಕಿನ ಸೂರಗೊಂಡನಕೊಪ್ಪದ (surgundanakoppa) ನಿವಾಸಿ ದೇವರಾಜ್ (30) ಮೃತಪಟ್ಟವರೆಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ (car) ನಾಲ್ವರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ( www.udayasaakshi.com )
ಓಮ್ನಿ ಕಾರಿನಲ್ಲಿ (omni car) 7 ಜನರು ಪ್ರಯಾಣಿಸುತ್ತಿದ್ದು, ಶಿವಮೊಗ್ಗದೆಡೆಯಿಂದ ಸೂರಗೊಂಡನಕೊಪ್ಪಕ್ಕೆ ತೆರಳುತ್ತಿತ್ತು. ಹಾಗೂ ಹಾನಗಲ್ (hangal) ಕಡೆಯಿಂದ ಶಿವಮೊಗ್ಗದೆಡೆಗೆ ಕೆ.ಎಸ್.ಆರ್.ಟಿ.ಸಿ (ksrtc bus) ಬಸ್ ಆಗಮಿಸುತ್ತಿತ್ತು ಎಂದು ಹೇಳಲಾಗಿದೆ.
ಅಪಘಾತದ ರಭಸಕ್ಕೆ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಜೊತೆಗೆ ಬಸ್ ಕೂಡ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿ, ಟೈರ್ ವೊಂದು ಕಳಚಿ ಬಿದ್ದಿದೆ. ಸ್ಥಳೀಯ ನಿವಾಸಿಗಳು ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಎಸ್ಪಿ (asp) ಮಂಜುನಾಥ್, ಡಿವೈಎಸ್ಪಿ (dysp) ಪ್ರಶಾಂತ್ ಮುನ್ನೊಳಿ, ನ್ಯಾಮತಿ ಪೊಲೀಸ್ ಠಾಣೆ (nyamathi police station) ಇನ್ಸ್’ಪೆಕ್ಟರ್ ರವಿ ಎನ್. ಎಸ್. ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ. ( www.udayasaakshi.com )
More Stories
ಬಸ್ – ಕಾರು ಡಿಕ್ಕಿ : ಶಿವಮೊಗ್ಗ ಕ್ರೈಸ್ತ ಧರ್ಮ ಗುರುಗಳು ಸ್ಥಳದಲ್ಲಿಯೇ ಸಾವು!
Bus-car collision: Shimoga Christian guru died on the spot!
ಬಸ್ – ಕಾರು ಡಿಕ್ಕಿ : ಶಿವಮೊಗ್ಗ ಕ್ರೈಸ್ತ ಧರ್ಮ ಗುರುಗಳು ಸ್ಥಳದಲ್ಲಿಯೇ ಸಾವು!
‘ಗ್ಯಾರಂಟಿಗಳು ಸ್ಥಗಿತವಾಗುವುದಿಲ್ಲ’ : ಸಿಎಂ ಪುನುರಚ್ಚಾರ
‘Guarantees do not stop’: CM reiterates
‘ಗ್ಯಾರಂಟಿಗಳು ಸ್ಥಗಿತವಾಗುವುದಿಲ್ಲ’ : ಸಿಎಂ ಪುನುರಚ್ಚಾರ
ಪೂನಂ ಪಾಂಡೆ ಪ್ರಕರಣದಲ್ಲಿ ಎಡವಿದ ಮಾಧ್ಯಮಗಳು : ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದೇನು?
Media stumbled in Poonampande case : What did CM’s media advisor KV Prabhakar say?
ಪೂನಂಪಾಂಡೆ ಪ್ರಕರಣದಲ್ಲಿ ಎಡವಿದ ಮಾಧ್ಯಮಗಳು : ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದೇನು?
‘ಮೌಢ್ಯ, ಕಂದಾಚಾರ ತಿರಸ್ಕರಿಸಿ – ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ’ : ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ
CM Siddaramaiah advises journalists to ‘reject stupidity and gossip – develop the courage to tell the truth
‘ಮೌಢ್ಯ, ಕಂದಾಚಾರ ತಿರಸ್ಕರಿಸಿ – ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ’ – ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ
ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ..!
Heavy size python conservation!
ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ!
ಭದ್ರಾ ಡ್ಯಾಂನಿಂದ ನೀರು ಬಿಡುಗಡೆಗೆ ಆಗ್ರಹಿಸಿ ದಾವಣಗೆರೆ ಬಂದ್!
ದಾವಣಗೆರೆ, ಸೆ. 25: ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಆಗ್ರಹಿಸಿ, ಸೋಮವಾರ ಭಾರತೀಯ ರೈತ ಒಕ್ಕೂಟವು ದಾವಣಗೆರೆ ಬಂದ್ ಗೆ ಕರೆ ನೀಡಿತ್ತು.
ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಸತತ 100 ದಿನಗಳ ಕಾಲ ನೀರು ಹರಿಸುವುದಾಗಿ ಹೇಳಲಾಗಿತ್ತು. ಆದರೆ ಬೇಸಿಗೆ ನೆಪವೊಡ್ಡಿ ಭದ್ರಾ ಕಾಡಾ ಸಮಿತಿಯು, ದಿಢೀರ್ ಆಗಿ 40 ದಿನಕ್ಕೆ ಡ್ಯಾಂನಿಂದ ನೀರು ಬಂದ್ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.