Dead body found in Bhadra river in Bhadravati: Request to trace the heirs ಭದ್ರಾವತಿಯ ಭದ್ರಾ ನದಿಯಲ್ಲಿ ಮೃತದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ

ಭದ್ರಾವತಿಯ ಭದ್ರಾ ನದಿಯಲ್ಲಿ ಮೃತದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ

ಭದ್ರಾವತಿ (bhadravathi), ಏ.12 : ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೌಳಿಗರ ಬೀದಿ ಹಿಂಭಾಗದ ಭದ್ರಾ ನದಿಯಲ್ಲಿ (bhadra river) ಭಾಗಶಃ ಕೊಳೆತ ಸ್ಥಿತಿಯಲ್ಲಿ ಪುರುಷನ ಮೃತದೇಹ (dead body) ಪತ್ತೆಯಾಗಿದೆ. 

ಮೃತರ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳು ಪತ್ತೆಯಾಗಿಲ್ಲ. ಮೃತರಿಗೆ ಸುಮಾರು 45 ರಿಂದ 50 ವರ್ಷ ವಯೋಮಾನವಿದೆ. 5 ಅಡಿ ಎತ್ತರ, ದುಂಡು ಮುಖ,  ಸಾಧಾರಣ ಮೈಕಟ್ಟು ಹೊಂದಿದ್ದಾರೆ. ತಲೆಯಲ್ಲಿ ಸುಮಾರು 3 ಇಂಚು ಉದ್ದದ ಗಾಯದ ಗುರುತು, ಎಡಕಣ್ಣಿನ ಹುಬ್ಬಿನ ಮೇಲೆ ಹಳೇಯ ಗಾಯದ ಗುರುತು ಇರುತ್ತದೆ. ( www.udayasaakshi.com )

ದೇಹದ ಹಲವೆಡೆ ಚರ್ಮ ಕೊಳೆತಿದೆ. ಕಣ್ಣುಗಳನ್ನು ಜಲಚರಗಳು ತಿಂದಿವೆ. ಮೈ ಮೇಲೆ ಹಳದಿ ಬಣ್ಣದ ಅಂಗಿ, ಬೂದು ಬಣ್ಣದ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ. 

ಹೆಚ್ಚಿನ ಮಾಹಿತಿಗೆ ಭದ್ರಾವತಿ (bhadravathi) ಹಳೇನಗರ ಪೊಲೀಸ್ ಠಾಣೆಯನ್ನು (old town police station) ಸಂಪರ್ಕಿಸುವಂತೆ ಇನ್ಸ್’ಪೆಕ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. (www.udayasaakshi.com )

Terrible road accident near Chinnikatte near Savalanga Nyamati taluk :Three people in the car died - many injured! ನ್ಯಾಮತಿ ತಾಲೂಕು ಸವಳಂಗ ಸಮೀಪದ ಚಿನ್ನಿಕಟ್ಟೆ ಬಳಿ ಭೀಕರ ರಸ್ತೆ ಅಪಘಾತ : ಕಾರಿನಲ್ಲಿದ್ದ ಮೂವರು ಸಾವು – ಹಲವರಿಗೆ ಗಾಯ! Previous post ಭೀಕರ ರಸ್ತೆ ಅಪಘಾತ : ಕಾರಿನಲ್ಲಿದ್ದ ಮೂವರು ಸಾವು – ನಾಲ್ವರಿಗೆ ಗಾಯ!
Shimoga Lok Sabha Constituency: KS Eshwarappa Nomination Paper Submission ಶಿವಮೊಗ್ಗ ಲೋಕಸಭಾ ಕ್ಷೇತ್ರ : ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಕೆ Next post ಶಿವಮೊಗ್ಗ ಲೋಕಸಭಾ ಕ್ಷೇತ್ರ : ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಕೆ