Andhra Pradesh-based labourer's suspicious death: What is the family's allegation? ಆಂಧ್ರಪ್ರದೇಶ ಮೂಲದ ಕಾರ್ಮಿಕನ ಅನುಮಾನಾಸ್ಪದ ಸಾವು : ಕುಟುಂಬದವರ ಆರೋಪವೇನು?

ಆಂಧ್ರಪ್ರದೇಶ ಮೂಲದ ಕಾರ್ಮಿಕನ ಅನುಮಾನಾಸ್ಪದ ಸಾವು : ಕುಟುಂಬದವರ ಆರೋಪವೇನು?

ಶಿವಮೊಗ್ಗ (shivamogga), ಏ. 14: ಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ವಸಾಹುತ ಪ್ರದೇಶದ (machenhalli industrial area) ಕಾರ್ಖಾನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ (Labour) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೂಲತಃ ಆಂಧ್ರಪ್ರದೇಶ ಆನಂತಪುರಂ ಜಿಲ್ಲೆಯವರಾದ ಪ್ರಸ್ತುತ ಕುಂದಾಪುರದಲ್ಲಿ ನೆಲೆಸಿರುವ ಮಹೇಶ್ (37) ಎಂಬುವರೇ ಅನುಮಾನಾಸ್ಪದವಾಗಿ ಮೃತಪಟ್ಟ (suspicious dead) ಕಾರ್ಮಿಕನೆಂದು ಗುರುತಿಸಲಾಗಿದೆ.

ಭಾನುವಾರ ಇವರ ಚಿಕ್ಕಪ್ಪ ತಿಪ್ಪೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಮಹೇಶ್ ಅವರು ವಿವಾಹಿತರಾಗಿದ್ದಾರೆ. ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಶಿವಮೊಗ್ಗದ ಮಾಚೇನಹಳ್ಳಿಯ ಫ್ಯಾಕ್ಟರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಯೇ ತಂಗಿದ್ದರು. ಶನಿವಾರ ಇವರು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಮೃತಪಟ್ಟಿದ್ದಾರೆ ಎಂದು ಕುಟುಂಬದವರಿಗೆ ತಿಳಿಸಲಾಗಿದೆ.

ಭದ್ರಾವತಿ (bhadravathi) ಸರ್ಕಾರಿ ಆಸ್ಪತ್ರೆಯಲ್ಲಿ (govt hosptial) ಅವರ ಮೃತದೇಹವಿದೆ. ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಮಹೇಶ್ ಅವರ ಸಾವಿನಿಂದ ಕುಟುಂಬ ಬೀದಿ ಪಾಲಾಗುವಂತಾಗಿದೆ. ಅವರ ಸಾವಿನ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು. ಬಡ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕು’ ಎಂದು ತಿಪ್ಪೇಶ‍್ ಅವರು ಮನವಿ ಮಾಡಿದ್ದಾರೆ.

Police raid on houses of rowdies across Shimoga district! ಶಿವಮೊಗ್ಗ ಜಿಲ್ಲೆಯಾದ್ಯಂತ ರೌಡಿಗಳ ಮನೆಗಳ ಮೇಲೆ ಪೊಲೀಸರ ರೈಡ್! Previous post ಶಿವಮೊಗ್ಗ ಜಿಲ್ಲೆಯಾದ್ಯಂತ ರೌಡಿಗಳ ಮನೆಗಳ ಮೇಲೆ ಪೊಲೀಸರ ರೈಡ್!
Shivamogga: In a tragic incident, a boy died after he went for a swim in a lake in Shivamogga. ಶಿವಮೊಗ್ಗ : ಕೆರೆ ಹೂಳಿನಲ್ಲಿ ಸಿಲುಕಿ ಈಜಾಡಲು ತೆರಳಿದ್ದ ಬಾಲಕನ ದಾರುಣ ಸಾವು! Next post ಶಿವಮೊಗ್ಗ : ಕೆರೆ ಹೂಳಿನಲ್ಲಿ ಸಿಲುಕಿ ಈಜಾಡಲು ತೆರಳಿದ್ದ ಬಾಲಕನ ದಾರುಣ ಸಾವು!