Dharwad Constituency - Dingaleshwar Swamiji Uturn: Nomination Form Back! ಧಾರವಾಡ ಕ್ಷೇತ್ರ - ದಿಂಗಾಲೇಶ್ವರ ಸ್ವಾಮೀಜಿ ಯೂಟರ್ನ್ : ನಾಮಪತ್ರ ವಾಪಾಸ್!

ಧಾರವಾಡ ಕ್ಷೇತ್ರ – ದಿಂಗಾಲೇಶ್ವರ ಸ್ವಾಮೀಜಿ ಯೂಟರ್ನ್ : ನಾಮಪತ್ರ ವಾಪಾಸ್!

ಧಾರವಾಡ (Dharwad), ಏ. 22: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ (Dharwad Lok Sabha Constituency) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ (Dingaleshwar Swamiji) ಯೂಟರ್ನ್ ಹೊಡೆದಿದ್ದಾರೆ! ಸೋವಾರ ತಾವು ಸಲ್ಲಿಸಿದ್ದ ನಾಮಪತ್ರ (nomination) ವಾಪಾಸ್ ಪಡೆದು, ಚುನಾವಣಾ ಕಣದಿಂದ ದೂರ ಉಳಿದಿದ್ದಾರೆ. ( www.udayasaakshi.com )

ಧಾರವಾಡ ಕ್ಷೇತ್ರದಿಂದ ಬಿಜೆಪಿ (bjp) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ, ಹಾಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕಿಳಿದಿದ್ದರು. ಜೋಶಿ ಅವರು ಲಿಂಗಾಯಿತ (Lingayat) ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಪಕ್ಷ ಅವರ ಸ್ಪರ್ಧೆಗೆ ಅವಕಾಶ ನೀಡಬಾರದು. ಒಂದು ವೇಳೆ ಟಿಕೆಟ್ ನೀಡಿದರೆ ಜೋಶಿ ವಿರುದ್ದ ಪಕ್ಷೇತರವಾಗಿ ಕಣಕ್ಕಿಳಿಯುವುದಾಗಿ ಶ್ರೀಗಳು ಹೇಳಿದ್ದರು.

ಅದರಂತೆ ನಾಮಪತ್ರ ಸಲ್ಲಿಸಿದ್ದ ಸ್ವಾಮೀಜಿ, ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ ಪಡೆಯುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ದಿಢೀರ್ ಯೂಟರ್ನ್ (u turn) ತೆಗೆದುಕೊಂಡಿದ್ದು ಚುನಾವಣಾ ಕಣದಿಂದ ವಾಪಾಸ್ ಸರದಿದ್ದಾರೆ. ( www.udayasaakshi.com )

ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಾಸ್ ಪಡೆದಿರುವುದರಿಂದ, ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ್‌ ಜೋಶಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿನೋದ್‌ ಅಸೂಟಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಮನವಿ ಮಾಡಿದ್ದ ಸಿಎಂ : ಶಿವಮೊಗ್ಗದಲ್ಲಿ (shivamogga) ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು,  ‘ಜಾತ್ಯತೀತ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರ ಉಮೇದುವಾರಿಕೆಯನ್ನು ಹಿಂಪಡೆದು ಜಾತ್ಯಾತೀತ ಪಕ್ಷ ಕಾಂಗ್ರೆಸ್ ನ್ನು ಬೆಂಬಲಿಸಬೇಕೆಂದು ಅವರಲ್ಲಿ ಮನವಿ ಮಾಡಿದ್ದೇನೆ. ಅವರ ಮಠ ಜಾತ್ಯಾತೀತವಾಗಿದ್ದು ಅವರ ಬೆಂಬಲ ಅಗತ್ಯವಿದೆ’ ಎಂದಿದ್ದರು. ( www.udayasaakshi.com )

Lok Sabha Elections: Nomination Paper Withdrawal Deadline Ends - 23 Candidates in Shimoga Constituency ಲೋಕಸಭೆ ಚುನಾವಣೆ : ನಾಮಪತ್ರ ಹಿಂಪಡೆಯುವ ಗಡುವು ಅಂತ್ಯ - ಶಿವಮೊಗ್ಗ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿ Previous post ಲೋಕಸಭೆ ಚುನಾವಣೆ : ನಾಮಪತ್ರ ಹಿಂಪಡೆಯುವ ಗಡುವು ಅಂತ್ಯ  – ಶಿವಮೊಗ್ಗ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿ
KSEshwarappa who is contesting as a non-party candidate: What is the BJP-Congress calculation? ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಎಸ್.ಈಶ್ವರಪ್ಪ : ಬಿಜೆಪಿ – ಕಾಂಗ್ರೆಸ್ ಲೆಕ್ಕಾಚಾರವೇನು? Next post ಅಖಾಡದಲ್ಲಿ ಉಳಿದ ಕೆ.ಎಸ್.ಈಶ್ವರಪ್ಪ : ಬಿಜೆಪಿ – ಕಾಂಗ್ರೆಸ್ ಲೆಕ್ಕಾಚಾರವೇನು?