Shimoga: Land dispute - the murder of a young man ends! ಶಿವಮೊಗ್ಗ : ಜಮೀನು ವ್ಯಾಜ್ಯ – ಯುವಕನ ಕೊಲೆಯಲ್ಲಿ ಅಂತ್ಯ!

ಶಿವಮೊಗ್ಗ : ಜಮೀನು ವ್ಯಾಜ್ಯ – ಯುವಕನ ಕೊಲೆಯಲ್ಲಿ ಅಂತ್ಯ!

ಶಿವಮೊಗ್ಗ (shivamogga), ಮೇ 13: ಮಚ್ಚಿನಿಂದ ದಾಳಿ ನಡೆಸಿ ಯುವಕನೋರ್ವನನ್ನು ಭೀಕರವಾಗಿ ಕೊಲೆ (murder) ಮಾಡಿರುವ ಘಟನೆ, ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ(dummalli village) ಸೋಮವಾರ ಬೆಳಿಗ್ಗೆ ನಡೆದಿದೆ.

ದುಮ್ಮಳ್ಳಿಯ ನಿವಾಸಿ ಸತೀಶ್ ನಾಯ್ಕ್ (28) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಗ್ರಾಮದ ಹೊರವಲಯದ ತೋಟವೊಂದರ ಬಳಿ ಕೊಲೆ ನಡೆದಿದೆ. ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು (tunga nagar polic station) ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

ಬೆಳಿಗ್ಗೆ ಸತೀಶ್ ನಾಯ್ಕ್ ಮನೆಯಿಂದ ತಮ್ಮ ಜಮೀನಿಗೆ ತೆರಳಿದ್ದರು. ಈ ವೇಳೆ ಅವರ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ವ್ಯಕ್ತಿಯೋರ್ವರು ಸತೀಶ್ ನಾಯ್ಕ್ ಅವರ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಆರೋಪಿಯ ಮನೆ ಮೇಲೆ, ಕೊಲೆಗೀಡಾದ ಯುವಕನ ಕಡೆಯವರು ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ. ತಕ್ಷಣವೇ ಆರೋಪಿಯನ್ನು ಬಂಧಿಸಬೇಕು ಎಂದು ಪೊಲೀಸರಿಗೆ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ.

Murder case: Rowdy shot in the leg ಶಿವಮೊಗ್ಗ : ರೌಡಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು! Previous post ಶಿವಮೊಗ್ಗ : ರೌಡಿ ಕಾಲಿಗೆ ಗುಂಡೇಟು!
'There is no internal strife no external strife' : CM Siddaramaiah's response to opposition criticism ‘ಒಳಜಗಳವೂ ಇಲ್ಲ ಹೊರ ಜಗಳವೂ ಇಲ್ಲ’ : ವಿಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ Next post ‘ಒಳ ಜಗಳವೂ ಇಲ್ಲ, ಹೊರ ಜಗಳವೂ ಇಲ್ಲ’ : ಸಿಎಂ ಸಿದ್ದರಾಮಯ್ಯ