'There is no internal strife no external strife' : CM Siddaramaiah's response to opposition criticism ‘ಒಳಜಗಳವೂ ಇಲ್ಲ ಹೊರ ಜಗಳವೂ ಇಲ್ಲ’ : ವಿಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

‘ಒಳ ಜಗಳವೂ ಇಲ್ಲ, ಹೊರ ಜಗಳವೂ ಇಲ್ಲ’ : ಸಿಎಂ ಸಿದ್ದರಾಮಯ್ಯ

ಮೈಸೂರು (Mysuru), ಮೇ 14 : ‘ನಮ್ಮಲ್ಲಿ (ಕಾಂಗ್ರೆಸ್) ಎಲ್ಲಿ ಜಗಳವಿದೆ. ಒಳಜಗಳವೂ ಇಲ್ಲ, ಹೊರ ಜಗಳವೂ ಇಲ್ಲ. ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ (loksabha election) ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ತಿಳಿಸಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ (mysuru airport) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ (congress party) ಜಗಳವಾಗಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ (bjp) ನಾಯಕರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದಾರೆ  ಎಂದರು.  

ಉತ್ತಮ ವಾತಾವರಣ : ಪರಿಷತ್ ಚುನಾವಣೆಯ (mlc election) ವಾತಾವರಣ ಉತ್ತಮವಾಗಿದ್ದು,  ಈ ಬಾರಿ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ಅಭ್ಯರ್ಥಿಗಳನ್ನು ಆರು ತಿಂಗಳು ಮುಂಚಿತವಾಗಿಯೇ ಆಯ್ಕೆ ಮಾಡಲಾಗಿತ್ತು. ಅಭ್ಯರ್ಥಿಗಳಿಗೆ ಸಮಯ ಸಿಕ್ಕಿ ಮತದಾರರನ್ನು ಭೇಟಿಯಾಗಲು ಅವಕಾಶ ದೊರೆಯಿತು ಎಂದರು. 

ಪರಿಣಾಮ ಬೀರುವುದಿಲ್ಲ : ಬಿಜೆಪಿ – ಜೆಡಿಎಸ್ ಮೈತ್ರಿ (bjp jds coalition) ಪರಿಣಾಮ ಚುನಾವಣೆಯ ಮೇಲೆ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಲೋಕಸಭೆ ಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ಮೈತ್ರಿ  ಮಾಡಿಕೊಂಡಿದ್ದವು. ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಪ್ರಜ್ವಲ್ ರೇವಣ್ಣ (prajwal revanna) ಪೆನ್ ಡ್ರೈವ್ ಪ್ರಕರಣ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ರಾಜಕೀಯವಾಗಿ ಪ್ರಬುದ್ಧರಾಗಿರುವವರು. ಯಾವುದು ಸರಿ, ತಪ್ಪು ಎನ್ನುವ ಬಗ್ಗೆ ಅರಿವು ಹೊಂದಿದವರು. ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ತುಲನೆ ಮಾಡುವ ಶಕ್ತಿ ಅವರಿಗಿದೆ ಎಂದರು.

ಹಿಟ್ ಅಂಡ್ ರನ್ ಕೇಸ್ : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (h d kumaraswamy) ಅವರು ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಪೆನ್ ಡ್ರೈವ್ (pen drive) ಇದ್ದು, ತನಿಖೆ ಮಾಡಿಸುವ ತಾಕತ್ತು ಸರ್ಕಾರಕ್ಕಿದೆ ಎಂದರೆ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ಕುಮಾರಸ್ವಾಮಿಯವರದ್ದು ಸದಾ  ಹಿಟ್ ಅಂಡ್ ರನ್ (hit and run) ಕೇಸ್ ಎಂದು ಹೇಳಿದರು.

ಮೊದಲು ಉಳಿಸಿಕೊಳ್ಳಲಿ : ಮಹಾರಾಷ್ಟ್ರ ಸಿಎಂ (maharashtra cm) ಕರ್ನಾಟಕ ಸರ್ಕಾರ ಪತನವಾಗುವ ಬಗ್ಗೆ ಮಾತನಾಡಿ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಬದಲು ಅವರ ಸರ್ಕಾರವನ್ನು ಮೊದಲು ಉಳಿಸಿಕೊಳ್ಳಲಿ ಎಂದರು.

Shimoga: Land dispute - the murder of a young man ends! ಶಿವಮೊಗ್ಗ : ಜಮೀನು ವ್ಯಾಜ್ಯ – ಯುವಕನ ಕೊಲೆಯಲ್ಲಿ ಅಂತ್ಯ! Previous post ಶಿವಮೊಗ್ಗ : ಜಮೀನು ವ್ಯಾಜ್ಯ – ಯುವಕನ ಕೊಲೆಯಲ್ಲಿ ಅಂತ್ಯ!
Illegal usury business in Shimoga : Police raid on houses – case against seven people! ಶಿವಮೊಗ್ಗದಲ್ಲಿ ಕಾನೂನುಬಾಹಿರ ಬಡ್ಡಿ ದಂಧೆ : ಮನೆಗಳ ಮೇಲೆ ಪೊಲೀಸರ ದಾಳಿ – ಏಳು ಜನರ ವಿರುದ್ದ ಕೇಸ್! Next post ಶಿವಮೊಗ್ಗದಲ್ಲಿ ಕಾನೂನುಬಾಹಿರ ಬಡ್ಡಿ ದಂಧೆ : ಮನೆಗಳ ಮೇಲೆ ಪೊಲೀಸರ ದಾಳಿ – ಏಳು ಜನರ ವಿರುದ್ದ ಕೇಸ್!