Chennai-Shivamoga train service started ಚೆನ್ನೈ – ಶಿವಮೊಗ್ಗ ರೈಲು ಸಂಚಾರಕ್ಕೆ ಚಾಲನೆ

ಚೆನ್ನೈ – ಶಿವಮೊಗ್ಗ ರೈಲು ಸಂಚಾರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ

ಶಿವಮೊಗ್ಗ, ಜು. 13: ಚೆನ್ನೈ – ಶಿವಮೊಗ್ಗ (chennai – shivamogga) ನಡುವೆ ಸಂಚರಿಸುವ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು (express train) ಸಂಚಾರಕ್ಕೆ ಶನಿವಾರ ಸಂಜೆ, ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಸಂಜೆ 5. 15 ಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (mp b y raghavendra) ಅವರು ಹಸಿರು ನಿಶಾನೆ (flagged off) ತೋರ್ಪಡಿಸುವ ಮೂಲಕ ರೈಲು ಸಂಚಾರಕ್ಕೆ ಅಧಿಕೃತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ್ (mla sahrada puryanaik), ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ (mlc d s arun),

ಧನಂಜಯ ಸರ್ಜಿ (mlc dhananjaya surji) ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮೊದಲಾದವರಿದ್ದರು.

ರೈಲ್ವೆ ನಿಲ್ದಾಣದ ಫ್ಲ್ಯಾಟ್’ಫಾರಂ-1 ರಲ್ಲಿ ವೇದಿಕೆ ಸಮಾರಂಭ ಆಯೋಜಿಸಲಾಗಿತ್ತು.ಸಂಸದರು, ಶಾಸಕರು, ರೈಲ್ವೆ ಅಧಿಕಾರಿಗಳು ಮಾತನಾಡಿದರು.

ಇದೇ ವೇಳೆ ವಿವಿಧ ಸಂಘಟನೆಗಳು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸನ್ಮಾನಿಸಿದವು. ಕಾರ್ಯಕ್ರಮದ ನಂತರ ಸಂಸದರು, ಶಾಸಕರು ನೂತನ ರೈಲಿನಲ್ಲಿ ಶಿವಮೊಗ್ಗದಿಂದ ಭದ್ರಾವತಿವರೆಗೆ ಪ್ರಯಾಣ ಬೆಳೆಸಿದರು.

Sharavati river water to 354 villages around Soraba Shiralakoppa Anavatti ಸೊರಬ ಶಿರಾಳಕೊಪ್ಪ ಆನವಟ್ಟಿ ಸುತ್ತಮುತ್ತಲಿನ 354 ಗ್ರಾಮಗಳಿಗೆ ಶರಾವತಿ ನದಿ ನೀರು minister Madhu Bangarappa statement ಸಚಿವ ಮಧು ಬಂಗಾರಪ್ಪ ಹೇಳಿಕೆ Previous post ಸೊರಬ ಶಿರಾಳಕೊಪ್ಪ ಆನವಟ್ಟಿ ಸುತ್ತಮುತ್ತಲಿನ 354 ಗ್ರಾಮಗಳಿಗೆ ಶರಾವತಿ ನದಿ ನೀರು  : ಸಚಿವ ಮಧು ಬಂಗಾರಪ್ಪ ಹೇಳಿಕೆ
Millions of Android Mobile Phone Hacking Threat : Central Govt ಕೋಟ್ಯಾಂತರ ಮೊಬೈಲ್ ಫೋನ್ ಗಳಿಗೆ ಹ್ಯಾಕಿಂಗ್ ಭೀತಿ…! Next post ಕೋಟ್ಯಾಂತರ ಆಂಡ್ರಾಯ್ಡ್ ಮೊಬೈಲ್ ಫೋನ್ ಹ್ಯಾಕಿಂಗ್ ಭೀತಿ : ಕೇಂದ್ರ ಸರ್ಕಾರ ಎಚ್ಚರಿಕೆ