monsoon rain - continued crowd to Joga falls...! ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ…!

ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ…!

ಜೋಗಫಾಲ್ಸ್ (jogfalls), ಜು. 28: ಮುಂಗಾರು ಮಳೆಗೆ (monsoon rain) ಮೈದುಂಬಿಕೊಂಡಿರುವ, ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜನಸಾಗರ ಮುಂದುವರಿದಿದೆ. ಜು. 28 ರ ಭಾನುವಾರ ಕೂಡ. ಸಾವಿರಾರು ಸಂಖ್ಯೆಯ ಪ್ರವಾಸಿಗರು (tourists) ಜಲಪಾತದ ಜಲಧಾರೆಯ ವೈಭೋಗ ವೀಕ್ಷಣೆಗೆ ವಿವಿಧೆಡೆಯಿಂದ ದೌಡಾಯಿಸಿದ್ದರು.

ಕಳೆದ ಕೆಲ ದಿನಗಳಿಂದ ಜಲಪಾತದ ಸುತ್ತಮುತ್ತ ಭಾರೀ ಮಳೆಯಾಗುತ್ತಿತ್ತು (heavy rainfall). ಇದರಿಂದ ಮಂಜು ಮುಸುಕಿದ ವಾತಾವರಣ ಆವರಿಸಿತ್ತು. ಆದರೆ ಭಾನುವಾರ ಮಳೆಯ ಪ್ರಮಾಣ ಇಳಿಮುಖವಾಗಿತ್ತು. ಇದರಿಂದ ಜಲಪಾತ (falls) ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಿತ್ತು.

ಶರಾವತಿ ಕಣಿವೆ (sharavati valley) ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ಜೋಗ ಜಲಪಾತ (jog falls) ಭೋರ್ಗರೆಯಲಾರಂಭಿಸಿದೆ. ಕಳೆದ ಹಲವು ವಾರಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಜೋಗಕ್ಕೆ ಆಗಮಿಸುತ್ತಿದ್ಧಾರೆ. ಅದರಲ್ಲಿಯೂ ರಜಾ ದಿನಗಳಂದು ಹಾಗೂ ವೀಕೆಂಡ್ ವೇಳೆ ಜನಸಾಗರವೇ ಹರಿದುಬರುತ್ತಿದೆ.

ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿರುವುದರಿಂದ, ಜಲಪಾತದ ಬಳಿ ಯಾವುದೇ ಗೊಂದಲ – ಗಡಿಬಿಡಿಗೆ ಆಸ್ಪದವಾಗದಂತೆ ಪ್ರವಾಸೋದ್ಯಮ ಇಲಾಖೆಯು ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಕಣ್ಮನ ಸೆಳೆಯುವ ವಾತಾವರಣ : ಜಲಪಾತದ ಬಳಿ ಆಗಾಗ್ಗೆ ಬೀಳುವ ಮಳೆ, ಮಂಜು ಮುಸುಕಿದ ವಾತಾವರಣ, ಹಚ್ಚ ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೊಬಗು  ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ.

Less rain in the malnad..! ಮಲೆನಾಡಿನಲ್ಲಿ ಕಡಿಮೆಯಾದ ಮಳೆ ಅಬ್ಬರ..! shimoga rain shivamooga rain monsoon #chakra, #hosanagara, #malnadrain, #malnadu, #mani, #masthikatte, #Rainfall in Western Ghats : Maximum 325 millimeter rain in Chakra, #shimoganews, #shimoganewsupdate, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #yadur, #ಉದಯಸಾಕ್ಷಿನ್ಯೂಸ್, #ಪಶ್ಚಿಮಘಟ್ಟ, #ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಆರ್ಭಟ : ಚಕ್ರಾದಲ್ಲಿ ಅತ್ಯಧಿಕ 325 ಮಿ.ಮೀ. ಮಳೆ!, #ಮಲೆನಾಡು, #ಮಳೆ, #ಮಾಣಿ, #ಮಾಸ್ತಿಕಟ್ಟೆ, #ಯಡೂರು, #ವರ್ಷಧಾರೆ, #ಶಿವಮೊಗ್ಗ, #ಶಿವಮೊಗ್ಗನ್ಯೂಸ್, #ಸಾವೇಹಕ್ಲು, #ಹೊಸನಗರ Previous post ಮಲೆನಾಡಿನಲ್ಲಿ ಕಡಿಮೆಯಾದ ಮಳೆ ಅಬ್ಬರ..!
In the heart of Shimoga 'Gundi danger!' : Is the administration turning a blind eye? ಶಿವಮೊಗ್ಗದ ಹೃದಯ ಭಾಗದಲ್ಲಿಯೇ ‘ಗುಂಡಿ ಗಂಡಾಂತರ!’ : ಕಣ್ಮುಚ್ಚಿ ಕುಳಿತ್ತಿದೆಯೇ ಆಡಳಿತ? ವರದಿ : ಬಿ. ರೇಣುಕೇಶ್ b renukesha Next post ಶಿವಮೊಗ್ಗದ ಹೃದಯ ಭಾಗದಲ್ಲಿಯೇ ‘ಗುಂಡಿ ಗಂಡಾಂತರ!’ : ಕಣ್ಮುಚ್ಚಿ ಕುಳಿತಿದೆಯೇ ಆಡಳಿತ?