50 lakhs to the family of sub-inspector Parashuram declaration of compensation ಸಬ್ ಇನ್ಸ್’ಪೆಕ್ಟರ್ ಪರಶುರಾಮ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ

PSI ಪರಶುರಾಮ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ

ಕೊಪ್ಪಳ, ಆ. 7: ಯಾದಗಿರಿ ನಗರದ ಮನೆಯಲ್ಲಿಯೇ ಹಠಾತ್ ಸಾವಿಗೀಡಾಗಿದ್ದ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಪರಶುರಾಮ (sub-inspector Parashuram) ಕುಟುಂಬಕ್ಕೆ ಗೃಹ ಸಚಿವ (home minister) ಜಿ. ಪರಮೇಶ್ವರ್ ಅವರು 50 ಲಕ್ಷ ರೂ. ಪರಿಹಾರ (compensation) ಘೋಷಣೆ ಮಾಡಿದ್ದಾರೆ.

ಕೊಪ್ಪಳ (kopppala) ಜಿಲ್ಲೆ ಕಾರಟಗಿಯ ಸೋಮನಾಳ ಗ್ರಾಮದಲ್ಲಿರುವ ಮೃತ ಸಬ್ ಇನ್ಸ್’ಪೆಕ್ಟರ್ (sub inspector) ನಿವಾಸಕ್ಕೆ ಜಿ.ಪರಮೇಶ್ವರ್ (g parameshwara) ಅವರು ಬುಧವಾರ ಭೇಟಿ ನೀಡಿದ್ದರು. ಕುಟುಂಬ ಸದಸ್ಯರ ಅಹವಾಲು ಆಲಿಸಿ, ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಾಮಾಣಿಕ ಪೊಲೀಸ್ ಅಧಿಕಾರಿಯನ್ನು ಕಳೆದುಕೊಂಡಿದ್ದೆವೆ.  ಮರಣೋತ್ತರ ಪರೀಕ್ಷೆಯ ವರದಿ (Postmortem report) ನಿರೀಕ್ಷೆಯಲ್ಲಿದ್ದೆವೆ. ಪ್ರಕರಣದ ತನಿಖೆಯನ್ನು ಸಿಬಿಐಗೆ (cbi enquiry) ಒಪ್ಪಿಸುವ ಅಗತ್ಯವಿಲ್ಲ. ಈಗಾಗಲೇ ಸದರಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಐಡಿ ತನಿಖೆ (cid enquiry) ನೆಡಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮೃತ ಪಿಎಸ್ಐ ಪತ್ನಿಗೆ ಸರ್ಕಾರಿ ನೌಕರಿ ಕೊಡುವ ಕುರಿತಂತೆ, ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ಕುಟುಂಬಕ್ಕೆ ಸಕಲ ನೆರವಿನಹಸ್ತ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಯಾವುದೇ ಪೊಲೀಸ್ ಅಧಿಕಾರಿಯ ವರ್ಗಾವಣೆ ಮಾಡುವ ಮೊದಲು ಎರಡು ವರ್ಷಗಳ ಕಾಲಾವಧಿಯನ್ನು ನಿಗದಪಡಿಸಲಾಗಿದೆ ಎಂದು ಇದೇ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆ ಹಿನ್ನೆಲೆ : ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ (sub inspector) ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಶುರಾಮ್ (parusharam) ಅವರನ್ನು, ಸೈಬರ್ ಕ್ರೈಂ ಪೊಲೀಸ್ ಠಾಣೆಗೆ (cyber police station) ವರ್ಗಾವಣೆ (transfer) ಮಾಡಲಾಗಿತ್ತು. ಈ ನಡುವೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ನಿಧನರಾಗಿದ್ದರು.

ಪೋಸ್ಟಿಂಗ್ ಗಾಗಿ ಯಾದಗಿರಿ ಕಾಂಗ್ರೆಸ್ ಶಾಸಕ (congress mla) ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಹಣಕ್ಕೆ ಡಿಮ್ಯಾಂಡ್ ಮಾಡುವ ಮೂಲಕ  ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಒತ್ತಡದಿಂದಲೇ ಪರಶುರಾಮ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ  ಆರೋಪ ಕೇಳಿಬಂದಿತ್ತು.

Vinesh Phogat disqualified from Olympics : dream of another medal is dashed! ಒಲಿಂಪಿಕ್ಸ್ ನಿಂದ ವಿನೇಶ್ ಫೋಗಟ್ ಅನರ್ಹ : ಮತ್ತೊಂದು ಪದಕದ ಕನಸು ನುಚ್ಚುನೂರು! Previous post ಒಲಿಂಪಿಕ್ಸ್ ನಿಂದ ವಿನೇಶ್ ಪೋಗಟ್ ಅನರ್ಹ : ಮತ್ತೊಂದು ಪದಕದ ಕನಸು ನುಚ್ಚುನೂರು!
Illegal sale of sandalwood pieces : Three arrested! ಶ್ರೀಗಂಧದ ತುಂಡುಗಳ ಅಕ್ರಮ ಮಾರಾಟ : ಮೂವರ ಬಂಧನ! ಶಿವಮೊಗ್ಗ Next post ಶ್ರೀಗಂಧದ ತುಂಡುಗಳ ಅಕ್ರಮ ಮಾರಾಟ : ಮೂವರ ಬಂಧನ!