Tribute to father and daughter who are doing selfless service of cremation of orphans ಅನಾಥ ಶವಗಳ ಅಂತ್ಯ ಸಂಸ್ಕಾರದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಂದೆ – ಮಗಳಿಗೆ ಸನ್ಮಾನ

ಅನಾಥ ಶವಗಳ ಅಂತ್ಯ ಸಂಸ್ಕಾರದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಂದೆ – ಮಗಳಿಗೆ ಸನ್ಮಾನ

ಶಿವಮೊಗ್ಗ (shivamogga), ಆ. 10: ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸುವ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಂದೆ ಹಾಗೂ ಮಗಳಿಗೆ (father and daughter), ಜಿಲ್ಲಾ ರಕ್ಷಣಾಧಿಕಾರಿ (sp) ಜಿ.ಕೆ.ಮಿಥುನ್ ಕುಮಾರ್ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.

ಗಾಡಿಕೊಪ್ಪದ ನಿವಾಸಿಗಳಾದ ರವಿ ಎಸ್ ಹಾಗೂ ಅವರ ಪುತ್ರಿ ಧನುಶ್ರೀ ಎಂಬುವರೇ, ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿಕೊಂಡು ಬರುತ್ತಿರುವವರಾಗಿದ್ದಾರೆ. ಇವರ ನಿಸ್ವಾರ್ಥ ಸೇವಾ ಕಾರ್ಯ ಮೆಚ್ಚಿ, ಎಸ್ಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಗಿದೆ.

2005 ನೇ ಸಾಲಿನಿಂದಲೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅನಾಥ ಶವಗಳು ಕಂಡುಬಂದ ವೇಳೆ, ಶವಗಳ ಸಾಗಾಣೆ (transportation of dead bodies) ಮಾಡುವುದರ ಜೊತೆಗೆ, ಅಂತ್ಯ ಸಂಸ್ಕಾರ (last rites) ನೆರವೇರಿಸಲು ಪೊಲೀಸ್ ಇಲಾಖೆಗೆ ತಂದೆ – ಮಗಳು ನೆರವಾಗುತ್ತಾ ಬಂದಿದ್ದಾರೆ ಎಂದು ಪೊಲೀಸ್ ಇಲಾಖೆ (police dept) ತಿಳಿಸಿದೆ.

ಸನ್ಮಾನದ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (asp) ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿಗಳಾದ (dysp) ಬಾಬು ಆಂಜನಪ್ಪ, ಸುರೇಶ್ ಎಂ ಉಪಸ್ಥಿತರಿದ್ದರು.

Installation of LED light in vehicles clearance operation: Thousands of cases registered! ವಾಹನಗಳಲ್ಲಿ ಎಲ್ಇಡಿ ಲೈಟ್ ಅಳವಡಿಕೆ ತೆರವು ಕಾರ್ಯಾಚರಣೆ : ಸಾವಿರಾರು ಕೇಸ್ ದಾಖಲು! Previous post ವಾಹನಗಳಲ್ಲಿ ಎಲ್ಇಡಿ ಲೈಟ್ ಅಳವಡಿಕೆ ತೆರವು ಕಾರ್ಯಾಚರಣೆ : ಸಾವಿರಾರು ಕೇಸ್ ದಾಖಲು!
Installation of Public Ganesha Murti : Bhadravati Special Meeting by Sagar Police ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆ : ಭದ್ರಾವತಿ, ಸಾಗರ ಪೊಲೀಸರಿಂದ ವಿಶೇಷ ಸಭೆ Next post ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆ : ಭದ್ರಾವತಿ, ಸಾಗರ ಪೊಲೀಸರಿಂದ ವಿಶೇಷ ಸಭೆ