
ಗಾಂಜಾ ಮಾರಾಟ ಇಬ್ಬರು ಅರೆಸ್ಟ್!
ಶಿವಮೊಗ್ಗ, ಮಾ. 13: ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋ ಸಮೀಪ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಭರ್ಮಪ್ಪನಗರದ ನಿವಾಸಿ ಮೊಹಮ್ಮದ್ ಆರೀಸ್ (22) ಹಾಗೂ ಕ್ಲಾರ್ಕ್ ಪೇಟೆಯ ಸೈಯದ್ ಅಫ್ತಾಬ್ (19) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಂದ 38 ಸಾವಿರ ರೂ. ಮೌಲ್ಯದ 580 ಗ್ರಾಂ ತೂಕದ ಒಣ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ದೊಡ್ಡಪೇಟೆ ಠಾಣೆ ಸಬ್ ಇನ್ಸ್ ಪೆಕ್ಟರ್ ವಸಂತ್ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In#arrest, #arrestaccused, #crime, #crimenews, #doddapetepolicestation, #ganzasale, #karnatakapolice, #police, #shimogadoddapetepolicestation, #shimoganews, #shimogapolice, #Shivamogga, #shivamogganews #shimogalocalnews, #shivamogganews #shimoganews, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಆರೋಪಿಗಳು, #ಉದಯಸಾಕ್ಷಿ, #ಕರ್ನಾಟಕಪೊಲೀಸ್, #ಗಾಂಜಾ, #ಗಾಂಜಾಮಾರಾಟ, #ಪೊಲೀಸರದಾಳಿ, #ಪೊಲೀಸ್, #ಬಂಧನ, #ಶಿವಮೊಗ್ಗ, #ಶಿವಮೊಗ್ಗಪೊಲೀಸ್