ಶಿವಮೊಗ್ಗ, ಜ. 16: ಶಿವಮೊಗ್ಗ ನಗರದ ಆದಿ ದ್ರಾವಿಡರ್ ಕೋ ಆಪರೇಟಿವ್ ಸೊಸೈಟಿಯ ಪ್ರಥಮ ಸರ್ವ ಸದಸ್ಯರ ಸಭೆಯು ಜ. 13 ರಂದು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಿಂಭಾಗದ ಆನಂದರಾವ್ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಸಿ.ವಿ.ನಾರಾಯಣನ್ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎಂ.ಪ್ರಭಾಕರ್, ನಿರ್ದೇಶಕರಾದ ರಾಮನಾಥನ್, ಮುರುಗನ್, ಶಕ್ತಿವೇಲು, ಶೇಖರ್,
ಕಾಳಿಮುತ್ತು, ಸುಬ್ರಹ್ಮಣಿ, ವಡಿವೇಲು ಎಸ್., ವಡಿವೇಲು ಎಂ., ರಮೇಶ್, ಕೇಶವನ್, ಪಳನಿ, ಉಷಾ, ಕಲ್ಪನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

