ಸಾಗರ, ಫೆ. 22: ಮಾಜಿ ಶಾಸಕ, ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನದ ಅಂಗವಾಗಿ ಬುಧವಾರ, ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲು ವಿತರಣೆ ಮಾಡಲಾಯಿತು.
ಅಶೋಕ ಬೇಳೂರು ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಂಡಗಳಲೆ ಗಣಪತಿ, ಸೋಮಶೇಖರ್ ಲಾವಿಗೆರೆ, ಮಂಜು ಬೆಳಲಮಕ್ಕಿ, ಅವಿನಾಶ್, ಮಹಾಬಲೇಶ್ವರ ಶೆಟ್ಟಿ, ರವಿ ಲಿಂಗನಮಕ್ಕಿ, ಕಾರ್ತಿಕ್, ಶ್ರೀಕಾಂತ್ ಕುರುವರಿ, ಚರಿ, ಷಣ್ಮುಖ ಸೂರನಗದ್ದೆ, ಶ್ರೀಧರ್ ಪಟೇಲ್, ರಮಾನಂದ್ ಆನಂದಪುರ, ಮಂಜು ಗೆಡ್ಡೆ, ಸಿಎಂ ಚಿನ್ಮಯ್ ದೀಪು, ಪವನ್ ಸಾಗರ್, ಯುವ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

