An air force officer of Shimoga district died after falling from a height of 1500 feet without opening the parachute! ಪ್ಯಾರಚೂಟ್ ತೆರೆಯದೆ 1500 ಅಡಿ ಎತ್ತರದಿಂದ ಬಿದ್ದು ಶಿವಮೊಗ್ಗ ಜಿಲ್ಲೆಯ ವಾಯುಪಡೆ ಅಧಿಕಾರಿ ಸಾವು!

shimoga | ಪ್ಯಾರಚೂಟ್ ತೆರೆಯದೆ 1500 ಅಡಿ ಎತ್ತರದಿಂದ ಬಿದ್ದು ಶಿವಮೊಗ್ಗ ಮೂಲದ ವಾಯುಪಡೆ ಅಧಿಕಾರಿ ಸಾವು!

ಆಗ್ರಾ / ಶಿವಮೊಗ್ಗ, ಫೆ. 8: ನವದೆಹಲಿ ಸಮೀಪದ ಆಗ್ರಾಹದಲ್ಲಿ ಫೆ. 7 ರಂದು ನಡೆದ ಪ್ಯಾರಚೂಟ್ ತರಬೇತಿ ವೇಳೆ, ಕರ್ನಾಟಕ ರಾಜ್ಯ ಶಿವಮೊಗ್ಗ ಜಿಲ್ಲೆಯ ನಿವಾಸಿಯಾದ ವಾಯಪಡೆಯ ಅಧಿಕಾರಿಯೋರ್ವರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ.

ಆಗ್ರಾ ಏರ್’ಪೋರ್ಸ್ ಬೇಸ್ ನಲ್ಲಿ ವಾರಂಟ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ (36) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಪಟಗುಪ್ಪ ಸಮೀಪದ ಸಂಕೂರು ಗ್ರಾಮದ ನಿವಾಸಿ ನಿವಾಸಿಯಾಗಿದ್ದಾರೆ.

ಫೆ. 7 ರಂದು ಬೆಳಿಗ್ಗೆ 8. 30 ರ ಸುಮಾರಿಗೆ ತರಬೇತಿಯ ಭಾಗವಾಗಿ ಮಂಜುನಾಥ್ ಸೇರಿದಂತೆ 12 ಮಂದಿ ವಾಯುಪಡೆ ತರಬೇತುದಾರರು, ವಾಯುಪಡೆಯ ವಿಮಾನದಲ್ಲಿ ಪ್ಯಾರಚೂಟ್ ಕಟ್ಟಿಕೊಂಡು ಸುಮಾರು 1500 ಅಡಿ ಮೇಲ್ಭಾಗದಿಂದ ಕೆಳಕ್ಕೆ ಹಾರಿದ್ದರು.

ಇದರಲ್ಲಿ 11 ಮಂದಿ ಸುರಕ್ಷಿತವಾಗಿ ಕೆಳಕ್ಕೆ ಇಳಿದಿದ್ದರು. ಆದರೆ ಮಂಜುನಾಥ್ ಅವರು ಕೆಳಕ್ಕೆ ಇಳಿದಿರಲಿಲ್ಲ. ನಂತರ ತಪಾಸಣೆ ನಡೆಸಿದ ವೇಳೆ ಗೋಧಿ ಹೊಲದಲ್ಲಿ ಮಂಜುನಾಥ್ ಅವರು ಶವವಾಗಿ ಪತ್ತೆಯಾಗಿದ್ದರು. ವಿಮಾನದಿಂದ ಕೆಳಕ್ಕೆ ಹಾರಿದ ವೇಳೆ ಅವರ ಪ್ಯಾರಚೂಟ್ ತೆರೆದುಕೊಳ್ಳದಿರುವುದು ಪತ್ತೆಯಾಗಿತ್ತು.

ಸಾಮಾನ್ಯವಾಗಿ ವಿಮಾನದಿಂದ ಹಾರಿದ ಕೇವಲ 5 ಸೆಕೆಂಡ್ ಗಳಲ್ಲಿ ಪ್ಯಾರಚೂಟ್ ತನ್ನಿಂತಾನೆ ಬಿಚ್ಚಿಕೊಳ್ಳುತ್ತದೆ. ಒಂದು ವೇಳೆ ಇದು ತೆರೆದುಕೊಳ್ಳದಿದ್ದಲ್ಲಿ, ತುರ್ತು ಸಂದರ್ಭಕ್ಕೆಂದೆ ಇನ್ನೊಂದು ಪ್ಯಾರಚೂಟ್ ಇರುತ್ತದೆ. ಅದನ್ನು ಸ್ವತಃ ತೆರೆಯಬೇಕಾಗುತ್ತದೆ. ಆದರೆ ಮಂಜುನಾಥ್ ಅವರ ಎರಡು ಪ್ಯಾರಚೂಟ್ ಗಳು ತೆರೆದುಕೊಂಡಿಲ್ಲ ಎನ್ನಲಾಗಿದೆ.

ಈ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ಮತ್ತೊಂದೆಡೆ ಶವದ ಮರಣೋತ್ತರ ಪರೀಕ್ಷೆ ಸೇರಿದಂತೆ ಇತರೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಮಲ್ಪುರ ಪೊಲೀಸರು ತಿಳಿಸಿದ್ದಾರೆ. ಪಾರ್ಥಿವ ಶರೀರವು ಫೆ. 8 ರ ಸಂಜೆ ಅಥವಾ ಫೆ. 9 ರಂದು ತವರೂರು ಸಂಕೂರು ಗ್ರಾಮಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Agra/Shivamoga, Feb 8: A shocking incident occurred in which an Air Force officer, a resident of Shimoga district of Karnataka State, died during a parachute training exercise on February 7 at Agra near New Delhi.

Manjunath (36), who was working as a warrant officer at Agra Air Force base, was identified as dead. He is originally a resident of Sankuru village near Pataguppa, Hosnagar taluk, Shimoga district.

ಶಿವಮೊಗ್ಗ : ಬಲೆಯಲ್ಲಿ ಸಿಲುಕಿಬಿದ್ದ ನಾಗರಹಾವು..! ಶಿವಮೊಗ್ಗ, ಫೆ 7: ಮನೆ ಮುಂಭಾಗದ ಹೂವಿನ ಗಿಡಗಳ ಬೇಲಿಗೆ ರಕ್ಷಣೆಗೆಂದು ಹಾಕಿದ್ದ ಮೀನಿನ ಬಲೆಗೆ ನಾಗರಹಾವೊಂದು ಸಿಲುಕಿ ಬಿದ್ದ ಘಟನೆ, ಫೆಬ್ರವರಿ 7 ರಂದು ಶಿವಮೊಗ್ಗ ನಗರದ ಹೊರವಲಯ ಗೋಂಧಿಚಟ್ನಳ್ಳಿಯಲ್ಲಿ ನಡೆದಿದೆ. ನಾಗೇಂದ್ರ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಹೂವಿನ ಗಿಡಗಳ ರಕ್ಷಣೆಗೆಂದು ಬೇಲಿಯ ಸುತ್ತಲೂ ಬಲೆ ಹಾಕಲಾಗಿತ್ತು. ಆಕಸ್ಮಿಕವಾಗಿ ಸದರಿ ಬಲೆಗೆ ಬೃಹದಾಕಾರದ ನಾಗರಹಾವು ಹಾವು ಸಿಲುಕಿ ಬಿದ್ದಿದೆ. ಬಲೆಯಲ್ಲಿ ಹಾವು ಸಿಲುಕಿ ಬಿದ್ದು ಸಂಕಷ್ಟ ಪಡುತ್ತಿರುವುದನ್ನು ಗಮನಿಸಿದ ಕುಟುಂಬದವರು, ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ‘ಕತ್ತರಿಯ ಸಹಾಯದಿಂದ ಬಲೆ ಕತ್ತರಿಸಿ, ಸುಮಾರು 4 ಅಡಿ ಉದ್ದದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸಲಾಯಿತು’ ಎಂದು ಸ್ನೇಕ್ ಕಿರಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Previous post shimoga | ಶಿವಮೊಗ್ಗ : ಅತ್ಯಧಿಕ ಬಡ್ಡಿ ವಸೂಲಿ ಮಾಡಿದರೆ ಕೇಸ್ ದಾಖಲು – ಸಹಕಾರಿ ಇಲಾಖೆ ಎಚ್ಚರಿಕೆ!
Delhi, Feb 8: For 70 constituencies of Delhi Assembly on Feb. The counting of votes for the election held on 5th was held on 8th February. With a clear majority, after 27 years, the BJP party is on its way to power in Delhi. Next post delhi election result | ದೆಹಲಿಯಲ್ಲಿ ಬಿಜೆಪಿ ಸರ್ಕಾರ : ಅಧಿಕಾರ ಕಳೆದುಕೊಂಡ ಎಎಪಿ – ಕಾಂಗ್ರೆಸ್ ಶೂನ್ಯ!