Shivamogga : Street lights on the state highway repaired overnight! ಶಿವಮೊಗ್ಗ : ರಾಜ್ಯ ಹೆದ್ದಾರಿಯಲ್ಲಿ ರಾತ್ರೋರಾತ್ರಿ ದುರಸ್ತಿಯಾದ ಬೀದಿ ದೀಪಗಳು!
Shivamogga Municipal Corporation launches helpline for flood emergency management ಅತಿವೃಷ್ಠಿ ತುರ್ತು ನಿರ್ವಹಣೆಗೆ ಶಿವಮೊಗ್ಗ ಪಾಲಿಕೆಯಿಂದ ಸಹಾಯವಾಣಿ
Dowry harassment of wife: Husband sentenced to prison

shimoga news | ಶಿವಮೊಗ್ಗ | ಪತ್ನಿಗೆ ವರದಕ್ಷಿಣೆ ಕಿರುಕುಳ : ಪತಿಗೆ ಜೈಲು ಶಿಕ್ಷೆ

ಶಿವಮೊಗ್ಗ (shivamogga), ಜೂನ್ 08: ಪತ್ನಿಗೆ ವರದಕ್ಷಿಣೆ ಕಿರುಕುಳದ ಪ್ರಕರಣದಲ್ಲಿ ಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ 2ನೇ ಜೆಎಂಎಫ್’ಸಿ ನ್ಯಾಯಾಲಯ 28-05-2026 ರಂದು ತೀರ್ಪು ನೀಡಿದೆ. ಶಿವಮೊಗ್ಗದ ಹೊರವಲಯ ಹುಣಸೋಡು ನಿವಾಸಿಯಾದ ಶ್ರೀನಿವಾಸ್ ಜೈಲು ಶಿಕ್ಷೆಗೆ ಗುರಿಯಾದ …

shimoga news | ಶಿವಮೊಗ್ಗ | ಪತ್ನಿಗೆ ವರದಕ್ಷಿಣೆ ಕಿರುಕುಳ : ಪತಿಗೆ ಜೈಲು ಶಿಕ್ಷೆ Read More
ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ - ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್? ವರದಿ : ಬಿ. ರೇಣುಕೇಶ್ ಶಿವಮೊಗ್ಗ, ಜೂನ್ 08: ಶಿವಮೊಗ್ಗದ ಹೊರವಲಯ ದೇವಕಾತಿಕೊಪ್ಪದಲ್ಲಿ ನಿರ್ಮಿಸಿರುವ ಕೈಗಾರಿಕಾ ವಸಾಹತು ಪ್ರದೇಶವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಸಂಸ್ಥೆ (ಕೆಐಎಡಿಬಿ) ಯ ದಿವ್ಯ ನಿರ್ಲಕ್ಷ್ಯದಿಂದ ಪಾಳು ಬೀಳಲಾರಂಭಿಸಿದೆ. ಕೈಗಾರಿಕೋದ್ಯಮಿಗಳು ತೊಂದರೆಗೆ ಸಿಲುಕುವಂತಾಗಿದೆ! ಸದರಿ ಕೈಗಾರಿಕಾ ಪ್ರದೇಶಕ್ಕೆ ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ‘ಪರಿಸರ ವಿಮೋನಚನಾ ಪತ್ರ’ ದೊರಕಿಲ್ಲ. ಇದರಿಂದ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ದೊರಕುತ್ತಿಲ್ಲ. ಸದರಿ ಪ್ರದೇಶದಲ್ಲಿ ನಿವೇಶನ ಹೊಂದಿರುವ ಕೈಗಾರಿಕೋದ್ಯಮಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ನೂರಾರು ಕೋಟಿ ರೂ. ವೆಚ್ಚ : ದೇವಕಾತಿಕೊಪ್ಪ ಹಾಗೂ ಸಿದ್ಲಿಪುರ ಗ್ರಾಮ ವ್ಯಾಪ್ತಿಗಳಲ್ಲಿ 2013-14 ನೇ ಸಾಲಿನಲ್ಲಿ 456 ಎಕರೆ ಭೂಮಿಯನ್ನು ಕೆಐಎಡಿಬಿ ಸಂಸ್ಥೆ ಭೂ ಸ್ವಾದೀನ ಪಡಿಸಿಕೊಂಡಿತ್ತು. ಇದರಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಸಂಸ್ಥೆಗೆ, 80 ಎಕರೆ, ಕೆಎಸ್ಎಸ್ಐಡಿ ಸಂಸ್ಥೆಗೆ 66 ಎಕರೆ, ಕಾರ್ಮಿಕ ಇಲಾಖೆಗೆ 10 ಎಕರೆ ಭೂಮಿ ನೀಡಲಾಗಿತ್ತು. ಉಳಿದಂತೆ ಕೆಐಎಡಿಬಿ ಸಂಸ್ಥೆಯು 2018-19 ರಲ್ಲಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ದೇವಕಾತಿಕೊಪ್ಪದ 250 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಲೇಔಟ್ ರಚನೆ ಮಾಡಿತ್ತು. ನಿವೇಶನ ಕೂಡ ಹಂಚಿಕೆ ಮಾಡಿತ್ತು. ಅನುಮತಿ ಪಡೆಯಲಿಲ್ಲ : ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿ ಸಮೀಪದಲ್ಲಿ ಸದರಿ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶವಿರುವುದರಿಂದ, ನಿಯಮಾನುಸಾರ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ‘ಪರಿಸರ ವಿಮೋನಚನಾ ಪತ್ರ’ವನ್ನು ಕೆಐಎಡಿಬಿ ಸಂಸ್ಥೆ ಪಡೆದುಕೊಳ್ಳಬೇಕಾಗಿತ್ತು. ಆದರೆ ಅನುಮತಿ ಪಡೆದುಕೊಂಡಿರಿಲಿಲ್ಲ. ಮತ್ತೊಂದೆಡೆ, ಸದರಿ ಸ್ಥಳದಲ್ಲಿ ಕೈಗಾರಿಕೆಗಳ ನಿರ್ಮಾಣಕ್ಕೆ ಕೆಐಎಡಿಬಿ ಸಂಸ್ಥೆಯು ಅನುಮತಿ ನೀಡಿತ್ತು. ಅದರಂತೆ ಸರಿಸುಮಾರು 20 ಕೈಗಾರಿಕೆ ಸಂಸ್ಥೆಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ತದನಂತರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಪರಿಸರ ವಿಮೋಚನಾ ಪತ್ರ ಪಡೆಯದೆ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಸೂಚಿಸಿತ್ತು. ತದನಂತರ ಕೈಗಾರಿಕೆಗಳ ಸ್ಥಾಪನೆಗೆ ಕೆಐಎಡಿಬಿ ಸಂಸ್ಥೆ ಅನುಮತಿ ನೀಡುತ್ತಿಲ್ಲ. ಪರಿಹಾರವಾಗಿಲ್ಲ : ಇದರಿಂದ ಕಳೆದ ಹಲವು ವರ್ಷಗಳಿಂದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಕೆಐಎಡಿಬಿ ಸಂಸ್ಥೆಯು ಪರಿಸರ ವಿಮೋಚನಾ ಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚಿತ್ತ ಹರಿಸಿಲ್ಲ. ಇದರಿಂದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶವು ಪಾಳು ಬೀಳಲಾರಂಭಿಸಿದೆ. ಸಿಎಂ ಗಮನಿಸಲಿ : ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಪರಿಸರ ವಿಮೋಚನಾ ಪತ್ರ ಪಡೆಯುವ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ಕುರಿತಂತೆ ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಜೊತೆ ಸಮಾಲೋಚಿಸಬೇಕಾಗಿದೆ. ಕಾಲಮಿತಿಯೊಳಗೆ ಸಮಸ್ಯೆಗೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಕೆಲ ಕೈಗಾರಿಕೋದ್ಯಮಿಗಳು ಆಗ್ರಹಿಸುತ್ತಾರೆ.
Heavy rain likely in various places in Shivamogga district on June 9-10 - Red alert forecast : What did the DC say? ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಜೂನ್ 9-10 ರಂದು ಭಾರೀ ಮಳೆ ಸಾಧ್ಯತೆ - ರೆಡ್ ಅಲರ್ಟ್ ಮುನ್ಸೂಚನೆ : ಡಿಸಿ ಹೇಳಿದ್ದೇನು?
Domestic gas cylinder price hiked by Rs 29! ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರ 29 ರೂ. ಏರಿಕೆ!
shimoga news | Drinking water supply disruption in Shivamogga city on June 7-8 ಶಿವಮೊಗ್ಗ ನಗರದಲ್ಲಿ ಜೂನ್ 7 - 8 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ
Gas Tanker Stuck in Slush at Shivamogga ಶಿವಮೊಗ್ಗ : ಕೆಸರಲ್ಲಿ ಸಿಲುಕಿದ ಗ್ಯಾಸ್ ಟ್ಯಾಂಕರ್!
Missing Mother with Two Children: Police Seek Public Help shikaripura news | ಶಿಕಾರಿಪುರ | ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ತಾಯಿ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ
Traffic Inspector Devaraj Creates a Stir in Shivamogga City ಶಿವಮೊಗ್ಗ ನಗರದಲ್ಲಿ ಸಂಚಲನ ಮೂಡಿಸಿದ ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್!