shimoga news | ಶಿವಮೊಗ್ಗ : ವೃದ್ದೆಯ ನಕಲಿ ಬಂಗಾರದ ಬಳೆ ಕದ್ದು ಪರಾರಿಯಾದ ದರೋಡೆಕೋರರು!
ಶಿವಮೊಗ್ಗ (shivamogga), ಜನವರಿ 09: ಬೆಳಿಗ್ಗೆಯೇ ಮನೆಯೊಂದಕ್ಕೆ ಪ್ರವೇಶಿಸಿದ ಇಬ್ಬರು ದರೋಡೆಕೋರರು, ಏಕಾಂಗಿಯಾಗಿದ್ದ ವೃದ್ದೆಗೆ ಬೆದರಿಕೆ ಹಾಕಿ, ಅವರ ಕೈಗಳಲ್ಲಿದ್ದ ನಕಲಿ ಬಂಗಾರದ ಬಳೆಗಳನ್ನು ಕದ್ದು ಪರಾರಿಯಾದ ಘಟನೆ, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೋಪಾಳದ ವಿನಾಯಕ ಸರ್ಕಲ್ ಬಳಿಯಿರುವ ಕೆ ಹೆಚ್ ಬಿ ಕಾಲೋನಿಯ ನಿವಾಸಿ ಶಿವಲಿಂಗಮ್ಮ (70) ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಹಿನ್ನೆಲೆ : ಕಳೆದ ಬುಧವಾರ ಬೆಳಿಗ್ಗೆ 11.30 ರ ಸರಿಸುಮಾರಿಗೆ ಘಟನೆ ನಡೆದಿದೆ. ಶಿವಲಿಂಗಮ್ಮ ಅವರ ಕುಟುಂಬ ಸದಸ್ಯರು ಕೆಲಸಕಾರ್ಯಗಳ ನಿಮಿತ್ತ ಹೊರತೆರಳಿದ್ದು, ಅವರು ಓರ್ವರೇ ಮನೆಯಲ್ಲಿದ್ದರು.
ಇದರ ಮಾಹಿತಿ ತಿಳಿದಿದ್ದ ಇಬ್ಬರು ದುಷ್ಕರ್ಮಿಗಳು ಮನೆಗೆ ಆಗಮಿಸಿದ್ದಾರೆ. ಅಜ್ಜಿಯ ಬಾಯಿ ಹಾಗೂ ಕೈಗಳನ್ನು ಬಟ್ಟೆಯಿಂದ ಕಟ್ಟಿ ಹಾಕಿ, ಬೆದರಿಕೆ ಹಾಕಿದ್ದಾರೆ. ತರಾತುರಿಯಲ್ಲಿ ಅಜ್ಜಿಯ ಕೈಗಳಲ್ಲಿದ್ದ ನಾಲ್ಕು ನಕಲಿ ಬಂಗಾರದ ಬಳೆಗಳನ್ನು ಕಿತ್ತುಕೊಂಡು ಓಡಿ ಹೋಗಿದ್ದಾರೆ.
ನಂತರ ಬಾಯಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿಕೊಂಡ ವೃದ್ದೆಯು, ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ತುಂಗಾನಗರ ಪೊಲೀಸ್ ಠಾಣೆ ಕ್ರೈಂ ವಿಭಾಗದ ಸಬ್ ಇನ್ಸ್’ಪೆಕ್ಟರ್ ಗಾದಿ ಲಿಂಗಪ್ಪರವರು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.
Shivamogga, January 09: An incident took place in the Tunganagar police station limits of Shivamogga where two robbers entered a house in broad daylight, tied the hands and feet of an elderly woman, stole the fake gold bangles she was wearing and fled.
More Stories
shimoga | hosanagara news | ಹೊಸನಗರ : ರಸ್ತೆಯಲ್ಲಿ ತೆಗೆದ ಗುಂಡಿಗೆ ಬಿದ್ದು ಬೈಕ್ ಸವಾರ ಸಾ**ವು!
Hosanagar: Biker dies on the spot in road accident!
ಹೊಸನಗರ : ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು!
shimoga news | ಶಿವಮೊಗ್ಗ | ಭದ್ರಾವತಿ ಮಲ್ಲಾಪುರದಲ್ಲಿ ಪತ್ತೆಯಾದ ಅನಾಮಧೇಯ ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
Shivamogga | Appeal to find parents of anonymous baby boy found in Bhadravati Mallapur
shimoga news | ಶಿವಮೊಗ್ಗ | ಭದ್ರಾವತಿ ಮಲ್ಲಾಪುರದಲ್ಲಿ ಪತ್ತೆಯಾದ ಅನಾಮಧೇಯ ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
hosanagara news | ರಿಪ್ಪನ್’ಪೇಟೆ | ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ವ್ಯಕ್ತಿ ಸಾ**ವು!
Rippon’pet | Man dies on the spot after being hit by a lorry!
ರಿಪ್ಪನ್’ಪೇಟೆ | ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ವ್ಯಕ್ತಿ ಸಾವು!
shimoga news | ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ದ ಬಿಎಸ್ಎನ್ಎಲ್ ನಿವೃತ್ತ ನೌಕರರ ಪ್ರತಿಭಟನೆ
Shivamogga: BSNL retired employees protest against the central government
ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ದ ಬಿಎಸ್ಎನ್ಎಲ್ ನಿವೃತ್ತ ನೌಕರರ ಪ್ರತಿಭಟನೆ
shimoga news | ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ತಂಡದಿಂದ ದಿಡೀರ್ ತಪಾಸಣೆ!
Lokayukta team conducts surprise inspection at Shivamogga Municipal Corporation office!
ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ತಂಡದಿಂದ ದಿಡೀರ್ ತಪಾಸಣೆ!
shimoga news | ಶಿವಮೊಗ್ಗ : ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!
Shivamogga: Engineering student dies of heart attack!
ಶಿವಮೊಗ್ಗ : ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!
