ಶಿವಮೊಗ್ಗ ದಸರಾ : ಗಜ ಪಡೆಗಳ ಕೊನೆ ಹಂತದ ತಾಲೀಮು!
ಶಿವಮೊಗ್ಗ, ಅ. 23: ನಾಡಹಬ್ಬ ದಸರಾದ ವಿಜಯದಶಮಿ ಮೆರವಣಿಗೆಯಲ್ಲಿ ಭಾಗಿಯಾಗಲಿರುವ, ಸಕ್ರೆಬೈಲು ಆನೆ ಬಿಡಾರದ ಮೂರು ಗಜ ಪಡೆಗಳ ತಾಲೀಮು ಕಾರ್ಯ ಸೋಮವಾರ ಕೂಡ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಮಂಗಳವಾರ ನಡೆಯಲಿರುವ ವಿಜಯದಶಮಿ ಮೆರವಣಿಗೆಯಲ್ಲಿ ಅಂಬಾರಿ ಹೊರಲಿರುವ ಸಾಗರ ಆನೆ ಮತ್ತು ಈತನಿಗೆ ಸಾಥ್ ನೀಡಲಿರುವ ನೇತ್ರಾವತಿ ಹಾಗೂ ಹೇಮಾವತಿ ಆನೆಗಳನ್ನು ವಿಜಯದಶಮಿ ಮೆರವಣಿಗೆ ಸಾಗಲಿರುವ ಮಾರ್ಗಗಳಲ್ಲಿ ಸೋಮವಾರ ಸಂಜೆ ಕರೆದೊಯ್ಯಲಾಯಿತು.
ಅತ್ಯಂತ ಆರಾಮದಾಯಕವಾಗಿ ಆನೆಗಳು ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸರು ಹಾಗೂ ಸಕ್ರೆಬೈಲು ಆನೆ ಬಿಡಾರದ ಮಾವುತರು, ಕಾವಾಡಿಗಳು ಉಪಸ್ಥಿತರಿದ್ದರು.
ಈ ಬಾರಿಯು ಕೂಡ ಸುಮಾರು 39 ವರ್ಷ ಪ್ರಾಯದ ಸಾಗರ್ ಆನೆ ಅಂಬಾರಿ ಹೊರಲಿದ್ದಾನೆ. ಈತನಿಗೆ 25 ವರ್ಷದ ನೇತ್ರಾವತಿ ಹಾಗೂ 9 ವರ್ಷದ ಹೇಮಾವತಿ ಆನೆಗಳು ಜೊತೆಯಾಗಲಿದ್ದಾರೆ.
ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆ ಆರಂಭವಾಗಲಿದೆ. ರಾಮಣ್ಣಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪನಾಯಕ ಸರ್ಕಲ್, ಅಮೀರ್ ಅಹಮ್ಮದ್ ಸರ್ಕಲ್, ಗೋಪಿ ಸರ್ಕಲ್, ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ಸರ್ಕಲ್, ಜೈಲ್ ರಸ್ತೆ, ಲಕ್ಷ್ಮೀ ಚಿತ್ರಮಂದರಿ ಸರ್ಕಲ್ ಮೂಲಕ ಸಮಾರಂಭ ನಡೆಯುವ ಸ್ಥಳವಾದ ಫ್ರೀಡಂ ಪಾರ್ಕ್ ಗೆ ಮೆರವಣಿಗೆ ಆಗಮಿಸಲಿದೆ. ಬನ್ನಿ ಮುಡಿಯುವ ಕಾರ್ಯದ ನಂತರ ನವರಾತ್ರಿಯ ಸಂಭ್ರಮಕ್ಕೆ ಅಂತಿಮ ತೆರೆ ಬೀಳಲಿದೆ.
More Stories
shimoga news | ಶಿವಮೊಗ್ಗ ನಗರದಲ್ಲಿ ಹೆಚ್ಚಿದ ಚಳಿ, ಶೀತ ಗಾಳಿಯ ತೀವ್ರತೆ!
Increased cold – intense cold winds in Shivamogga city!
ಶಿವಮೊಗ್ಗ ನಗರದಲ್ಲಿ ಹೆಚ್ಚಿದ ಚಳಿ – ಶೀತ ಗಾಳಿಯ ತೀವ್ರತೆ!
shimoga news | ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ಹೃದಯಾಂಜಲಿ ಕಾರ್ಯಕ್ರಮ
Heartfelt tribute program by the Sacred Heart High School Alumni Association, Shivamogga
ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ಹೃದಯಾಂಜಲಿ ಕಾರ್ಯಕ್ರಮ
shimoga news | ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ
Shivamogga: Request to the Water Board Engineer to supply drinking water to the areas around Press Colony
ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ
shimoga outer ring road | ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರ ವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ?
MP BY Raghavendra appeals for implementation of national highway projects in Shivamogga constituency
Will the delayed Shivamogga Outer Ring Road get speed in Phase 2?
ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ?
shimoga news | ಮೃತ ಮಹಿಳೆಯ ಬಳಿಯಿದ್ದ ನಗದು, ಚಿನ್ನಾಭರಣ ಮಗಳಿಗೆ ಹಿಂದಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಪೇದೆ!
Police constable shows loyalty to duty by returning cash and jewelry belonging to a deceased woman to her daughter!
ಮೃತ ಮಹಿಳೆಯ ಬಳಿಯಿದ್ದ ನಗದು – ಚಿನ್ನಾಭರಣ ಮಗಳಿಗೆ ಹಿಂದಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಪೇದೆ!
news update | ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!
Legislative Council MLA DS Arun urges Revenue Minister to rectify division letter confusion!
ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!
