Bank notice, crop loss: Farmer committed suicide! ಬ್ಯಾಂಕ್ ನೋಟಿಸ್, ಬೆಳೆ ನಷ್ಟ : ಆತ್ಮಹತ್ಯೆಗೆ ಶರಣಾದ ರೈತ!

sagara | ಬ್ಯಾಂಕ್ ನೋಟಿಸ್, ಬೆಳೆ ನಷ್ಟ : ಆತ್ಮಹತ್ಯೆಗೆ ಶರಣಾದ ರೈತ!

ಸಾಗರ (sagara), ಆ. 27: ತೋಟದ ಕೃಷಿ ಹೊಂಡಕ್ಕೆ ಹಾರಿ ರೈತರೋರ್ವರು ಆತ್ಮಹತ್ಯೆ (farmer suicide) ಗೆ ಶರಣಾದ ಘಟನೆ, ಸಾಗರ ತಾಲೂಕಿನ ಕಾರ್ಗಲ್ (kargal) ಸಮೀಪದ ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೈನೆಮನೆ ಗ್ರಾಮದಲ್ಲಿ ನಡೆದಿದೆ.

ಅಶೋಕ (44) ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ. ಅಶೋಕ್ ಅವರಿಗೆ 2 ಎಕರೆ ಅಡಕೆ ತೋಟವಿದೆ . ಭಾರೀ ಮಳೆಯಿಂದ (heavy rainfall) ಕೊಳೆ  ರೋಗ ಕಾಣಿಸಿಕೊಂಡು ಬೆಳೆ ನಷ್ಟವಾಗಿತ್ತು.

ಕೃಷಿ ಉದ್ದೇಶಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್ ವೊಂದರಲ್ಲಿ ಸಾಲ (bank loan) ಮಾಡಿದ್ದು, ಸಕಾಲದಲ್ಲಿ ಮರು ಪಾವತಿ ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ, ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್ ನಿಂದ ನೋಟೀಸ್ (bank notice) ಬಂದಿದೆ.

ಈ ಎಲ್ಲ ಬೆಳವಣಿಗೆಗಳಿಂದ ಮನನೊಂದ ಅಶೋಕ ಅವರು, ಆ.26 ರಂದು ತಮ್ಮ ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆ (kargal police station) ಯಲ್ಲಿ ಪ್ರಕರಣ ದಾಖಲಾಗಿದೆ.

shimoga | Unidentified woman dies in Shimoga: Police appeals to help trace the heirs ಶಿವಮೊಗ್ಗದಲ್ಲಿ ಅಪರಿಚಿತ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಸಹಕರಿಸಲು ಪೊಲೀಸರ ಮನವಿ Previous post shimoga | ಶಿವಮೊಗ್ಗದಲ್ಲಿ ಅಪರಿಚಿತ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಪೊಲೀಸರ ಮನವಿ
What did the CM say about the transfer of actor Darshan to Bellary Jail? ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಕುರಿತಂತೆ ಸಿಎಂ ಹೇಳಿದ್ದೇನು? Next post actor darshan case | ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಕುರಿತಂತೆ ಸಿಎಂ ಹೇಳಿದ್ದೇನು?