ಮುದ್ರಣ ಸ್ಥಗಿತಗೊಳಿಸಿದ ವಿಶ್ವದ ಅತ್ಯಂತ ಹಳೇಯ ದಿನ ಪತ್ರಿಕೆ!

ಮುದ್ರಣ ಸ್ಥಗಿತಗೊಳಿಸಿದ ವಿಶ್ವದ ಅತ್ಯಂತ ಹಳೇಯ ದಿನ ಪತ್ರಿಕೆ!

ಬರ್ಲಿನ್ (ಆಸ್ಟ್ರೀಯಾ): ವಿಶ್ವದ ಅತ್ಯಂತ ಹಳೇಯ ದಿನಪತ್ರಿಕೆಯಾದ ಆಸ್ಟ್ರೀಯಾ ದೇಶದ ವಿಯನ್ನಾ ಮೂಲದ ‘ವೀನರ್ ಜೈಟುಂಗ್’ ದಿನಪತ್ರಿಕೆಯ ಮುದ್ರಣ ಕಾರ್ಯವನ್ನು ಜೂ.30 ರ ಶುಕ್ರವಾರದಿಂದ ಸ್ಥಗಿತಗೊಳಿಸಲಾಗಿದೆ.

ಆಗಸ್ಟ್ 8, 1703 ರಲ್ಲಿ ಸದರಿ ಪತ್ರಿಕೆಯ ಮುದ್ರಣ ಕಾರ್ಯ ಆರಂಭಿಸಲಾಗಿತ್ತು. ಸತತ 320 ವರ್ಷಗಳಿಂದ ನಿರಂತರವಾಗಿ ಪತ್ರಿಕೆಯನ್ನು ಮುದ್ರಣ ಮಾಡಿಕೊಂಡು ಬರಲಾಗುತ್ತಿತ್ತು. ಒಟ್ಟಾರೆ ಇಲ್ಲಿಯವರೆಗೂ 1,16,840 ದಿನಗಳ ಕಾಲ ಪತ್ರಿಕೆ ಮುದ್ರಿತವಾಗಿದೆ!

ಸದರಿ ಪತ್ರಿಕೆಯು ಸರ್ಕಾರದ ಒಡೆತನದಲ್ಲಿತ್ತು. ಆದರೆ ಪ್ರತ್ಯೇಕ ಸಂಪಾದಕೀಯ ಮಂಡಳಿ ಹೊಂದಿತ್ತು. ಸರ್ಕಾರಿ ಜಾಹೀರಾತು ಹಾಗೂ ಆದಾಯದಿಂದಲೇ ಪತ್ರಿಕೆ ನಡೆಸಿಕೊಂಡು ಬರಲಾಗುತ್ತಿತ್ತು. ಸದ್ಯ ಆಸ್ಟ್ರೀಯಾ ಸರ್ಕಾರ ತನ್ನ ನೀತಿಯನ್ನು ಬದಲಾಯಿಸಿದ್ದು, ಪತ್ರಿಕೆಗೆ ನೀಡುತ್ತಿದ್ದ ಆದಾಯ ಸ್ಥಗಿತಗೊಳಿಸಿತ್ತು.

ಇದರಿಂದ ಪತ್ರಿಕೆ ಮುದ್ರಣ ಮಾಡುವುದು ಸಂಕಷ್ಟಕರವಾಗಿ ಪರಿಣಮಿಸಿತ್ತು. ಈ ಕಾರಣದಿಂದ ಪತ್ರಿಕೆಯ ದೈನಂದಿನ ಮುದ್ರಣ ಕಾರ್ಯ ಸ್ಥಗಿತಗೊಳಿಸುವ ನಿರ್ಧಾರವನ್ನು, ಪತ್ರಿಕೆಯ ಸಂಪಾದಕೀಯ ಮಂಡಳಿ ಕೈಗೊಂಡಿದೆ. ಇದಕ್ಕೆ ಬದಲಾಗಿ ಆನ್’ಲೈನ್ ಪೋರ್ಟಲ್ ಮೂಲಕ ದೈನಂದಿನ ಸುದ್ದಿ ಬಿತ್ತರಿಸಲು ಹಾಗೂ ತಿಂಗಳಿಗೊಮ್ಮೆ ಪತ್ರಿಕೆ ಹೊರತರುವ ತೀರ್ಮಾನ ಮಾಡಿದೆ.

ಪತ್ರಿಕೆಯ ಕೊನೆಯ ಮುದ್ರಣದ ಮೊದಲ ಪುಟದಲ್ಲಿ ‘320 ವರ್ಷ… 12 ಅಧ್ಯಕ್ಷರು… 10 ಚಕ್ರವರ್ತಿಗಳು… 2 ಗಣರಾಜ್ಯ… 1 ಪತ್ರಿಕೆ…’ ಎಂಬ ಹೆಡ್ಡಿಂಗ್ ನಲ್ಲಿ ಸುದ್ದಿ ಪ್ರಕಟಿಸಿದೆ.

‘ವೀನರ್ ಜೈಟುಂಗ್’ ಪ್ರಧಾನ ಸಂಪಾದಕ ಥಾಮಸ್ ಸೀಫರ್ಟ್ ಅವರು, ಆಸ್ಟ್ರೀಯ ಸರ್ಕಾರದ ಹೊಸ ನೀತಿಯನ್ನು ಖಂಡಿಸಿದ್ದಾರೆ. ಪತ್ರಿಕೆಯ ದೈನಂದಿನ ಆವೃತ್ತಿ ಸ್ಥಗಿತಗೊಳಿಸುವ ನಿರ್ಧಾರವನ್ನು, ‘ಪತ್ರಿಕೋದ್ಯಮಕ್ಕೆ ಬಿರುಗಾಳಿಯ ಸಮಯ’ ಎಂದು ಹೇಳಿಕೊಂಡಿದ್ದಾರೆ. 

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *