
ಭದ್ರಾವತಿ – ಚರಂಡಿ ಅವ್ಯವಸ್ಥೆಯಿಂದ ದುರ್ನಾತ : ನಗರಸಭೆ ವಿರುದ್ದ ನಿವಾಸಿಗಳ ಆಕ್ರೋಶ!
ಭದ್ರಾವತಿ, ಆ. 18: ‘ಚರಂಡಿಯಲ್ಲಿ ಕಸಕಡ್ಡಿ ತುಂಬಿಕೊಂಡು, ಸರಾಗವಾಗಿ ಕೊಳಚೆ ನೀರು ಹರಿದು ಹೋಗದೆ ದುರ್ನಾತ ಬೀರುತ್ತಿದೆ. ಅವ್ಯವಸ್ಥೆ ಪರಿಹಾರಕ್ಕೆ ನಗರಸಭೆ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ’ ಎಂದು ಭದ್ರಾವತಿ ಪಟ್ಟಣದ 4 ನೇ ವಾರ್ಡ್ ಹಳೇನಗರ ವ್ಯಾಪ್ತಿಯ ಮರಾಠ ಬೀದಿ ನಿವಾಸಿಗಳು ದೂರಿದ್ದಾರೆ.
ಕಳೆದ ಹಲವು ದಿನಗಳಿಂದ ಅವ್ಯವಸ್ಥೆ, ದುರ್ನಾತದಿಂದ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ದುಃಸ್ಥಿತಿಯಿದೆ. ಸೊಳ್ಳೆ, ನೊಣ, ಕ್ರಿಮಿಕೀಟಗಳ ಹಾವಳಿ ಹೆಚ್ಚಾಗುವಂತಾಗಿದೆ ಎಂದು ಸ್ಥಳೀಯರು ತಮ್ಮ ಅಹವಾಲು ತೋಡಿಕೊಂಡಿದ್ದಾರೆ.

ಈ ಸಂಬಂಧ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಚರಂಡಿ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಯೋರ್ವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ನಗರಸಭೆ ಆಡಳಿತ ಎಚ್ಚೆತ್ತುಕೊಳ್ಳಬೇಕು. ಕಾಲಮಿತಿಯೊಳಗೆ ಮರಾಠ ಬೀದಿಯಲ್ಲಿನ ಚರಂಡಿ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
More Stories
bhadravati news | ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
Woman’s body found in Bhadra River in Bhadravati city!
ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!
bhadravati news | ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
Caste abuse, assault case : Bhadravati man sentenced to 4 years rigorous imprisonment!
ಜಾತಿ ನಿಂದನೆ, ಹಲ್ಲೆ ಪ್ರಕರಣ : ಭದ್ರಾವತಿ ವ್ಯಕ್ತಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!
bhadravati | ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ : ನಾಗರೀಕರ ಆತಂಕ!
‘Chaddi gang’ roaming in Bhadravati: Citizens worried!
ಭದ್ರಾವತಿಯಲ್ಲಿ ‘ಚಡ್ಡಿ ಗ್ಯಾಂಗ್’ ಓಡಾಟ : ನಾಗರೀಕರ ಆತಂಕ!
bhadravati | ಭದ್ರಾವತಿ : ಮನೆಯಲ್ಲಿ ಕಳ್ಳತನ – ಬೆಂಗಳೂರಿನ ಇಬ್ಬರು ಆರೋಪಿಗಳ ಬಂಧನ!
Theft at home in Bhadravati: Two accused from Bengaluru arrested!
ಭದ್ರಾವತಿಯಲ್ಲಿ ಮನೆಯಲ್ಲಿ ಕಳ್ಳತನ : ಬೆಂಗಳೂರಿನ ಇಬ್ಬರು ಆರೋಪಿಗಳ ಬಂಧನ!
bhadravati news | ಭದ್ರಾವತಿಯಲ್ಲಿ ಪ್ರವಾಹ ಭೀತಿ ಸೃಷ್ಟಿಸಿದ ಭದ್ರಾ ನದಿ!
Bhadra river created flood threat in Bhadravati!
ಭದ್ರಾವತಿಯಲ್ಲಿ ಪ್ರವಾಹ ಭೀತಿ ಸೃಷ್ಟಿಸಿದ ಭದ್ರಾ ನದಿ!
Holehonnuru | ಹೊಳೆಹೊನ್ನೂರು : ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷರ ಅವಿರೋಧ ಆಯ್ಕೆ
Holehonnur : Yadehalli Grama Panchayat President and Vice President elected unopposed
ಹೊಳೆಹೊನ್ನೂರು : ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ – ಉಪಾಧ್ಯಕ್ಷರ ಅವಿರೋಧ ಆಯ್ಕೆ