ಶಿವಮೊಗ್ಗ ಅರಣ್ಯ ಇಲಾಖೆ ಕಾರ್ಯಾಚರಣೆ : ಲಕ್ಷಾಂತರ ರೂ. ಮೌಲ್ಯದ ನಾಟಾ ವಶ – ಓರ್ವನ ಬಂಧನ!
ಶಿವಮೊಗ್ಗ, ನ. 11: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನಾಟಾ ಕಳ್ಳ ಸಾಗಾಣೆ ಮಾಡುತ್ತಿದ್ದ ಪ್ರಕರಣವೊಂದನ್ನು ಅರಣ್ಯ ಇಲಾಖೆ (ಶಂಕರ ವಲಯ) ಪತ್ತೆ ಹಚ್ಚಿದ್ದು, ಲಕ್ಷಾಂತರ ರೂ. ಮೌಲ್ಯದ ಮರದ ತುಂಡುಗಳನ್ನು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.
ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ನಿವಾಸಿ ಸಯ್ಯದ್ ಅಜೀಜ್ ಉರ್ ರೆಹಮಾನ್ ಬಂಧಿತ ಆರೋಪಿ. ಬುಲೆರೋ ಪಿಕಪ್ ವಾಹನದಲ್ಲಿ ಆರೋಪಿಯು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನಾಟಾ ತರುತ್ತಿರುವ ಕುರಿತಂತೆ ಶಿವಮೊಗ್ಗ ಅರಣ್ಯ ಇಲಾಖೆಯ ಶಂಕರ ವಲಯ ವಿಭಾಗದ ಅಧಿಕಾರಿಗಳಿಗೆ ಖಚಿತ ವರ್ತಮಾನ ಲಭಿಸಿತ್ತು.
ಶನಿವಾರ ಬೆಳಿಗ್ಗೆ ಶಿವಮೊಗ್ಗದ ಹೊರವಲಯ ಹೊಳೆಹೊನ್ನೂರು ರಸ್ತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ, ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬೀಟೆ ಮರ ಹಾಗೂ ಅತ್ಯಂತ ಅಪರೂಪದ ಕರಿಮರ (ಡಯಾಸ್ಪರಸ್ ಸೆಬನಮ) ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಕರಿಮರದ ಮೌಲ್ಯ ಎಷ್ಟೆಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಶಂಕರ ವಲಯದ ವಲಯ ಅರಣ್ಯಾಧಿಕಾರಿ ಸುಧಾಕರ್ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
More Stories
shimoga | ‘ಸಭೆ – ಸಮಾರಂಭಗಳಲ್ಲಿ ಕನ್ನಡ ಪುಸ್ತಕ ನೀಡುವ ಹವ್ಯಾಸ ಬೆಳೆಸಿಕೊಳ್ಳಿ’ : ಹಿರಿಯ ಸಾಹಿತಿ ಎಂ ಎನ್ ಸುಂದರರಾಜ್ ಸಲಹೆ
‘Develop the habit of giving Kannada books at meetings and events’: Senior writer M N. Sundarraj advises
‘ಸಭೆ-ಸಮಾರಂಭಗಳಲ್ಲಿ ಕನ್ನಡ ಪುಸ್ತಕ ನೀಡುವ ಹವ್ಯಾಸ ಬೆಳೆಸಿಕೊಳ್ಳಿ’ : ಹಿರಿಯ ಸಾಹಿತಿ ಎಂ ಎನ್. ಸುಂದರರಾಜ್ ಸಲಹೆ
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 30 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for November 30 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 30 ರ ತರಕಾರಿ ಬೆಲೆಗಳ ವಿವರ
shimoga | power cut news | ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 30 ರಂದು ವಿದ್ಯುತ್ ವ್ಯತ್ಯಯ!
Power outages in various parts of Shivamogga city on November 30th!
ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 30 ರಂದು ವಿದ್ಯುತ್ ವ್ಯತ್ಯಯ!
shimoga news | ಶಿವಮೊಗ್ಗ : ಕಾರ್ ಡೆಕೋರ್ ಶಾಪ್ ನಲ್ಲಿ ಬೆಂಕಿ ಅವಘಡ!
Shivamogga: Fire accident at car decor shop!
ಶಿವಮೊಗ್ಗ : ಕಾರ್ ಡೆಕೋರ್ ಶಾಪ್ ನಲ್ಲಿ ಬೆಂಕಿ ಅವಘಡ!
shimoga news | ಶಿವಮೊಗ್ಗ : ತುಂಗಾ ನಾಲೆಗೆ ಬಿದ್ದಿದ್ದ ಯುವಕನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ!
Shivamogga: Firefighters rescue a young man who had fallen into the Tunga canal!
ಶಿವಮೊಗ್ಗ : ತುಂಗಾ ನಾಲೆಗೆ ಬಿದ್ದಿದ್ದ ಯುವಕನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ!
shimoga news | ಶಿವಮೊಗ್ಗ : ಅಪಾಯಕಾರಿ ರಸ್ತೆಗಳತ್ತ ಹರಿಯುವುದೆ ಪಿಡಬ್ಲ್ಯೂಡಿ ಚಿತ್ತ?
Shivamogga : Is the PWD planning to focus on dangerous roads?
ಶಿವಮೊಗ್ಗ : ಅಪಾಯಕಾರಿ ರಸ್ತೆಗಳತ್ತ ಗಮನಹರಿಸುವುದೆ ಪಿಡಬ್ಲ್ಯೂಡಿ ಚಿತ್ತ?
