ಶಿವಮೊಗ್ಗ (shivamogga), ಆ. 15: ಕಾರ್ಮಿಕ ಮಹಿಳೆಯೋರ್ವರ ಮಾಂಗಲ್ಯ ಸರವನ್ನು (mangalsutra snatching) ದುಷ್ಕರ್ಮಿಗಳು ಅಪಹರಿಸಿ (chain snatching) ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶದ (kalluru mandli industrial area) ಬಳಿ ನಡೆದಿದೆ.
ಕಲ್ಲೂರು ಮಂಡ್ಲಿಯೊಂದರ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದ, 53 ವರ್ಷದ ಮಹಿಳೆಯೇ (women) ಮಾಂಗಲ್ಯ ಸರ ಕಳೆದುಕೊಂಡವರೆಂದು ಗುರುತಿಸಲಾಗಿದೆ. ಆ. 13 ರ ಸಂಜೆ 7. 30 ರ ಸುಮಾರಿಗೆ ಘಟನೆ ನಡೆದಿದೆ.
ಮಹಿಳೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಬೈಕ್ (bike) ನಲ್ಲಿ ಕುಳಿತ್ತಿದ್ದ ಇಬ್ಬರು ದುಷ್ಕರ್ಮಿಗಳಲ್ಲಿ (criminals) ಓರ್ವ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ನಂತರ ಇಬ್ಬರು ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಕಳುವಾದ ಮಾಂಗಲ್ಯ ಸರ 20 ಗ್ರಾಂ ತೂಕದ್ದಾಗಿದ್ದು, ಸರಿಸುಮಾರು 1. 20 ಲಕ್ಷ ರೂ. ಮೌಲ್ಯವೆಂದು ಅಂದಾಜಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ (tunga nagar police station) ಪ್ರಕರಣ ದಾಖಲಾಗಿದೆ.

