ಶಿವಮೊಗ್ಗ (shivamogga), ಜೂ. 29: ಮನೆಯೊಂದರ ಹಿತ್ತಲಿನಲ್ಲಿ ಕಾಣಿಸಿಕೊಂಡ 5 ನಾಗರಹಾವಿನ ಮರಿಗಳನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ತೆವರೆಚಟ್ನಳ್ಳಿ ಗ್ರಾಮದಲ್ಲಿ ಜೂ. 29 ರಂದು ನಡೆದಿದೆ.
ಶರಣ್ ಎಂಬುವರ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಹಾವಿನ ಮರಿಗಳು ಕಾಣಿಸಿಕೊಂಡಿದ್ದವು. ತಕ್ಷಣವೇ ಅವರು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು.
ಸ್ಥಳಕ್ಕಾಗಮಿಸಿದ ಕಿರಣ್ ಅವರು ಪ್ಲಾಸ್ಟಿಕ್ ಟಾರ್ಪಲ್ ಕೆಳಭಾಗ, ಪೊದೆಗಳಲ್ಲಿ ಅಡಗಿದ್ದ 5 ನಾಗರಹಾವಿನ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಕೆಲ ನಾಗರಹಾವಿನ ಮರಿಗಳು ತಪ್ಪಿಸಿಕೊಂಡಿವೆ.
‘ಸುರಕ್ಷಿತವಾಗಿ ಹಾವಿನ ಮರಿಗಳನ್ನು ರಕ್ಷಿಸಲಾಗಿದೆ. ರಕ್ಷಣೆ ಮಾಡುವ ವೇಳೆ, ಕೆಲ ಹಾವಿನ ಮರಿಗಳು ಪೊದೆಗಳಲ್ಲಿ ತಪ್ಪಿಸಿಕೊಂಡಿವೆ. ಅವುಗಳು ಕಂಡ ವೇಳೆ ತಮಗೆ ಮಾಹಿತಿ ನೀಡುವಂತೆ ಕುಟುಂಬದವರಿಗೆ ತಿಳಿಸಲಾಗಿದೆ’ ಎಂದು ಸ್ನೇಕ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ.
Shivamogga, June 29: An incident occurred on June 29 in Tyavarechatnalli village on the outskirts of Shivamogga city when reptile conservationist Snake Kiran rescued 5 baby cobras that were found in the backyard of a house.

