ಶಿವಮೊಗ್ಗ (shivamogga), ಆಗಸ್ಟ್ 3: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೋರ್ವ, ನೇಣು ಬಿಗಿದು ಆತ್ಮ*ಹ**ತ್ಯೆಗೆ ಶರಣಾದ ಘಟನೆ ಆಗಸ್ಟ್ 2 ರ ಸಂಜೆ ನಡೆದಿದೆ.
ಬಸವರಾಜು (38) ಆತ್ಮ*ಹ**ತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಂಜೆ 7 ಗಂಟೆ ಸುಮಾರಿಗೆ ಕಾರಾಗೃಹದ ಶರಾವತಿ ಬ್ಯಾರಕ್ ನ 42 ನೇ ಕೊಠಡಿಯ ಶೌಚಾಲಯದ ಕಿಟಕಿ ಸರಳಿಗೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡಿದ್ದ.
ಗಸ್ತಿನಲ್ಲಿದ್ದ ಜೈಲು ಸಿಬ್ಬಂದಿಗಳು ತಕ್ಷಣವೇ ಆತನನ್ನು ವಾಹನವೊಂದರಲ್ಲಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ.
ಯಾರೀತ? : ಬಸವರಾಜು ವಿರುದ್ದ ಪತ್ನಿಯ ಕೊ**ಲೆ ಮಾಡಿದ ಆರೋಪವಿತ್ತು. ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಾಗಿತ್ತು. ಜೂನ್ 16 ರಿಂದ ಆತ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ.
Shivamogga, August 3: An undertrial prisoner committed suicide by hanging himself at the Shivamogga Central Jail on the evening of August 2.

