
ಖ್ಯಾತ ಚಿತ್ರನಟ ದ್ವಾರಕೀಶ್ ವಿಧಿವಶ
ಬೆಂಗಳೂರು (bengaluru), ಏ. 16: ಕನ್ನಡ ಚಲನಚಿತ್ರರಂಗದ (sandalwood) ಖ್ಯಾತ ನಟ, ನಿರ್ಮಾಪಕ ದ್ವಾರಕೀಶ್ (dwarakish) ಅವರು ಮಂಗಳವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸರಿಯಾಗಿ ನಿದ್ರೆ ಕೂಡ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಮಲಗಿದ್ದರು. ಬಳಿಕ ಅವರು ಎಚ್ಚರಗೊಳ್ಳಲಿಲ್ಲ. ಮಲಗಿದ್ದಲ್ಲಿಯೇ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ದ್ವಾರಕೀಶ್ ಅವರ ಪುತ್ರ ಯೋಗೇಶ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹೆಸರುವಾಸಿ : ಆಗಸ್ಟ್ 19, 1942 ರಂದು ಅವರು ಹುಣಸೂರು ತಾಲೂಕಿನಲ್ಲಿ ಜನಿಸಿದ್ದರು. ಸಿನಿಮಾ (film) ರಂಗಕ್ಕೆ ಆಗಮಿಸುವ ಮುನ್ನ ಅವರು ಉದ್ಯಮದಲ್ಲಿ ತೊಡಗಿಸಿದ್ದರು. 1963 ರಲ್ಲಿ ವ್ಯಾಪಾರ ತೊರೆದು ಸಿನಿಮಾ ನಟನ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ‘ವೀರ ಸಂಕಲ್ಪ’ ಸಿನಿಮಾದ ಮೂಲಕ ನಟನೆ ಪ್ರಾರಂಭಿಸಿದ್ದರು.
ನಾಯಕರಾಗಿ, ಹಾಸ್ಯ, ಪೋಷಕ ಪಾತ್ರಗಳ ಮೂಲಕ ಸಿನಿಮಾ ಪ್ರಿಯರ ಮನಗೆದ್ದಿದ್ದರು. ಕನ್ನಡ ಚಲನಚಿತ್ರರಂಗದಲ್ಲಿ (Kannada film industry) ಸಾಕಷ್ಟು ಹೆಸರು ಸಂಪಾದಿಸಿದ್ದರು. ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಾಗೆಯೇ 40 ಕ್ಕೂ ಅಧಿಕ ಸಿನಿಮಾಗಳ ನಿರ್ದೇಶನ (director) ಮಾಡಿದ್ದ ಅವರು ಸಾಕಷ್ಟು ಏರಿಳಿತ ಕಂಡಿದ್ದರು. ರಾಜಾಕುಳ್ಳ ಎಂದೇ ಹೆಸರು ಸಂಪಾದಿಸಿದ್ದರು.
More Stories
bengaluru news | ‘ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿ ವಿರೋಧಿಗಳು’ – ಸಿಎಂ ಸಿದ್ದರಾಮಯ್ಯ ಟೀಕೆ
‘BJP members who missed the GBA meeting are opponents of Bengaluru’s development’ – CM Siddaramaiah criticizes
‘ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳು’ – ಸಿಎಂ ಸಿದ್ದರಾಮಯ್ಯ ಟೀಕೆ
bengaluru | ಸಮೀಕ್ಷೆ : ಅಕ್ಟೋಬರ್ 18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ – PUC ಉಪನ್ಯಾಸಕರಿಗೆ ವಿನಾಯ್ತಿ!
Survey: Holiday for government and aided schools till October 18 – Exemption for PUC lecturers!
ಸಮೀಕ್ಷೆ : ಅಕ್ಟೋಬರ್ 18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ – PUC ಉಪನ್ಯಾಸಕರಿಗೆ ವಿನಾಯ್ತಿ!
bengaluru | ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದೇನು?
Good news for state government employees : What did state president CS Shadakshari say?
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದೇನು?
bengaluru | ಬೆಂಗಳೂರಲ್ಲಿ ಭೀಕರ ಸಿಲಿಂಡರ್ ಸ್ಫೋಟ : ಹಾನಿಗೀಡಾಗಿರುವ ಮನೆಗಳ ದುರಸ್ತಿಗೆ ಸೂಚನೆ – ಪರಿಹಾರ ಘೋಷಣೆ
Bengaluru cylinder explosion: Instructions to repair damaged houses – Compensation announced
ಬೆಂಗಳೂರಲ್ಲಿ ಭೀಕರ ಸಿಲಿಂಡರ್ ಸ್ಫೋಟ : ಹಾನಿಗೀಡಾಗಿರುವ ಮನೆಗಳ ದುರಸ್ತಿಗೆ ಸೂಚನೆ – ಪರಿಹಾರ ಘೋಷಣೆ
bengaluru | ಬೆಂಗಳೂರು | ‘ಪತ್ರಕರ್ತರು ಅಧಿಕಾರಸ್ಥರ ಓಲೈಕೆ ಮಾಡಬಾರದು!’ : ಸಿಎಂ ಸಿದ್ದರಾಮಯ್ಯ
‘Journalists should not try to favor with those in power!’: CM Siddaramaiah
‘ಪತ್ರಕರ್ತರು ಅಧಿಕಾರಸ್ಥರ ಓಲೈಕೆ ಮಾಡಬಾರದು!’ : ಸಿಎಂ ಸಿದ್ದರಾಮಯ್ಯ
bengaluru stamped | ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತಕ್ಕೆ ಕಾರಣವೇನು?
What caused the stampede near Chinnaswamy Stadium in Bengaluru?
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತಕ್ಕೆ ಕಾರಣವೇನು?