ಸಾಗರ ವಿಧಾನಸಭಾ ಕ್ಷೇತ್ರ : ಹರತಾಳು ಹಾಲಪ್ಪ – ಬೇಳೂರು ಗೋಪಾಲಕೃಷ್ಣ ನಡುವೆ ಜಿದ್ದಾಜಿದ್ದಿನ ಹಣಾಹಣಿ!
‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತೃಗಳಲ್ಲ, ಮಿತ್ರರೂ ಅಲ್ಲ..’ ಎಂಬ ಮಾತು, ಸದ್ಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳಾಗಿರುವ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ..!
ಮಾಜಿ ಸಿಎಂ ಎಸ್.ಬಂಗಾರಪ್ಪ ಗರಡಿಯಲ್ಲಿ ಏಕಕಾಲಕ್ಕೆ ರಾಜಕೀಯ ಪ್ರವೇಶಿಸಿ, ಅವರ ಕೃಪಾಕಟಾಕ್ಷದಿಂದ ಏಕಕಾಲದಲ್ಲಿಯೇ ವಿಧಾನಸಭಾ ಚುನಾವಣಾ ಕಣಕ್ಕಿಳಿದು ಆಯ್ಕೆಯಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಗಳಸ್ಯ-ಕಂಠಸ್ಯರಾಗಿದ್ದರು. ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾಗ ಅವರನ್ನು ಬೆಂಬಲಿಸಿ, ಸಮಾಜವಾದಿ ಪಕ್ಷದ ಚಿಹ್ನೆಯಾದ ಸೈಕಲ್ ನಲ್ಲಿ ವಿಧಾನಸಭೆಗೆ ಆಗಮಿಸಿ ದೇಶದ ಗಮನ ಸೆಳೆದಿದ್ದರು!
ಸಾಗರ ವಿಧಾನಸಭಾ ಕ್ಷೇತ್ರ : ಹರತಾಳು ಹಾಲಪ್ಪ – ಬೇಳೂರು ಗೋಪಾಲಕೃಷ್ಣ ನಡುವೆ ಜಿದ್ದಾಜಿದ್ದಿನ ಹಣಾಹಣಿ! Read More
