ಶಿವಮೊಗ್ಗ : ಒಣಗಿದ ಕೆರೆಗಳಿಗೆ ಜೀವ ಕಳೆ!

Shimoga: Life weed for lakes dried up by summer rain! ಶಿವಮೊಗ್ಗ : ಬೇಸಿಗೆ ಮಳೆಯಿಂದ ಒಣಗಿದ ಕೆರೆಗಳಿಗೆ ಜೀವ ಕಳೆ!

ಶಿವಮೊಗ್ಗ (shivamogga), ಮೇ 23: ಕಳೆದ ಮಳೆಗಾಲದ ವೇಳೆ ಮುಂಗಾರು ಮಳೆ (monsoon rain) ಕೊರತೆ ಹಾಗೂ ಪ್ರಸ್ತುತ ಬೇಸಿಗೆ ವೇಳೆ ಕಂಡುಂಬದ ತೀವ್ರ ಸ್ವರೂಪದ ಬಿಸಿಲಿನ (temprature) ಕಾರಣದಿಂದ, ಶಿವಮೊಗ್ಗ ತಾಲೂಕಿನ (shimoga taluk) ಹಲವು ಗ್ರಾಮಗಳ ಕೆರೆಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿದ್ದವು. ಹಲವೆಡೆ ಕೆರೆಕಟ್ಟೆಗಳಲ್ಲಿ (lakes) ಹನಿ ನೀರಿಲ್ಲದೆ ಒಣಗಿ ಹೋಗಿದ್ದವು. ಬಿರುಕು ಬಿಟ್ಟಿದ್ದವು. ಬರಗಾಲಕ್ಕೆ (drought) ಮೂಕ ಸಾಕ್ಷಿಯಾಗಿ ನಿಂತಿದ್ದವು.

ಕೆರೆಕಟ್ಟೆಗಳು ಒಣಗಿ ಹೋಗಿದ್ದರಿಂದ, ಜಾನುವಾರುಗಳು (cattle) ಸೇರಿದಂತೆ ಪ್ರಾಣಿ-ಪಕ್ಷಿ (animals – birds) ಸಂಕುಲದ ಸ್ಥಿತಿ ಅಯೋಮಯವಾಗಿತ್ತು. ಕುಡಿಯುವ ನೀರಿಗೆ (drinking water) ಪರದಾಡುವಂತಾಗಿತ್ತು. ನೀರು ಹುಡುಕಿಕೊಂಡು ಅಲೆದಾಡುವಂತಹ ದಯನೀಯ ಸ್ಥಿತಿ ಕಂಡುಬಂದಿತ್ತು.

ಕೆರೆಕಟ್ಟೆಗಳು ಬರಿದಾಗಿದ್ದರಿಂದ, ಬೋರ್’ವೆಲ್ – ಬಾವಿಗಳಲ್ಲಿಯೂ ಅಂತರ್ಜಲ (ground water) ಕುಸಿತವಾಗಿತ್ತು. ನಾಗರೀಕರು ಕುಡಿಯುವ ನೀರಿಗೆ ಪರಿತಪಿಸುವಂತಾಗಿತ್ತು. ಹಲವು ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು.

ಆದರೆ ಕಳೆದ ಕೆಲ ದಿನಗಳ ಹಿಂದೆ ಬಿದ್ದ ಮುಂಗಾರು ಪೂರ್ವ ಮಳೆಯು (pre monsoon rain), ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಜಲಮೂಲಗಳ (water source) ಚಿತ್ರಣವನ್ನೇ ಬದಲಾಯಿಸಿದೆ. ಮಳೆಯ (rain) ಕೃಪೆಯಿಂದ ಬರಗಾಲದ ಕರಿಛಾಯೆಯಿಂದ ಕೊಂಚ ಹೊರಬರುವಂತೆ ಮಾಡಿದೆ.

ನೀರಿಲ್ಲದೆ ಬರಿದಾಗಿದ್ದ ಕೆರೆಕಟ್ಟೆಗಳಲ್ಲಿ ನಿಧಾನವಾಗಿ ಜಲರಾಶಿ ಕಂಡುಬರಲಾರಂಭಿಸಿದೆ. ಇದರಿಂದ ಕಳೆದ ಹಲವು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಮೂಕಪ್ರಾಣಿಗಳಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

‘ಇತ್ತೀಚಿಗಿನ ವರ್ಷಗಳಿಗೆ ಹೋಲಿಸಿದರೆ ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ತೀವ್ರ ಸ್ವರೂಪದ ಬರಗಾಲದ ಛಾಯೆ ಕಂಡುಬಂದಿತ್ತು. ಹಲವು ಕೆರೆಕಟ್ಟೆಗಳಲ್ಲಿ ಹನಿ ನೀರೂ ಇರದಂತಹ ದುಃಸ್ಥಿತಿ ಎದುರಾಗಿತ್ತು. ತೀವ್ರ ಬಿಸಿಲ ತಾಪದಿಂದ ಹಸಿರು ಕೂಡ ಒಣಗಿ ಹೋಗಿತ್ತು. ನೀರು – ಹಸಿರಿಲ್ಲದೆ ಜಾನುವಾರುಗಳ ಸಂಕಷ್ಟ ಹೇಳತೀರದಾಗಿತ್ತು.

ಅದೆಷ್ಟೊ ಜಾನುವಾರುಗಳು ಹಸಿವಿನಿಂದ ನಾನಾ ರೋಗಕ್ಕೆ ತುತ್ತಾಗುವಂತಾಗಿತ್ತು. ಮತ್ತೊಂದೆಡೆ, ಮೇವಿನ ದರವು ಗಗನಕ್ಕೇರಿತ್ತು. ಆದರೆ ಇತ್ತೀಚೆಗೆ ಬಿದ್ದ ಭಾರೀ ಮಳೆಯು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ. ಕೆರೆಕಟ್ಟೆಗಳಲ್ಲಿ ಉತ್ತಮ ನೀರು ಸಂಗ್ರಹವಾಗಿದೆ. ಹಾಗೆಯೇ ಹಸಿರು ಕೂಡ ಬೆಳೆದಿದೆ. ಮಳೆಯಿಂದ ಮೂಕಪ್ರಾಣಿಗಳು ಹಸಿವು – ದಾಹದಿಂದ ಹೊರಬರುವಂತಾಗಿದೆ’ ಎಂದು ಜಾನುವಾರು ಪಾಲಕರು ಅಭಿಪ್ರಾಯಪಡುತ್ತಾರೆ.

ಹದ ಮಳೆ : ಮಳೆ ಕೊರತೆಯಿಂದ ಬೇಸಿಗೆ ಕೃಷಿ ಚಟುವಟಿಕೆ (Agricultural activity) ಸ್ತಬ್ದವಾಗಿತ್ತು. ತೋಟದ ಬೆಳೆ ಉಳಿಸಿಕೊಳ್ಳಲು ರೈತರು (farmers) ಹರಸಾಹಸ ಪಡುವಂತಾಗಿತ್ತು. ಆದರೆ ಮುಂಗಾರು ಪೂರ್ವ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬಹುತೇಕ ಕಡೆ ಉತ್ತಮ ಮಳೆಯಾಗಿರುವುದರಿಂದ, ಅತ್ಯಂತ ಉತ್ಸಾಹದಿಂದ ರೈತರು ಮುಂಗಾರು ಹಂಗಾಮಿನ ಸಿದ್ಧತೆಯತ್ತ ಕಾರ್ಯೋನ್ಮುಖರಾಗುತ್ತಿದ್ದಾರೆ. ಬಿತ್ತನೆ ಬೀಜ ಸೇರಿದಂತೆ ಕೃಷಿ ಉಪಕರಣಗಳ ಖರೀದಿಯಲ್ಲಿ ತೊಡಗಿದ್ದಾರೆ.

ಒಟ್ಟಾರೆ ಮರುಭೂಮಿಯಲ್ಲಿ (desert) ಓಯಸಿಸ್ ಕಂಡ ರೀತಿಯಲ್ಲಿ, ಸುಡು ಬೇಸಿಗೆ ಹಾಗೂ ಬರಗಾಲದ ವೇಳೆ ಬಿದ್ದ ಮಳೆಯು ಸಕಲ ಜೀವರಾಶಿಗಳಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಹಾಗೆಯೇ ಬರಿದಾಗಿದ್ದ ಜಲಮೂಲಗಳಿಗೆ ಹೊಸ ಜೀವಕಳೆ ತರುವಂತೆ ಮಾಡಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *