bhadravati | ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ?

bhadravati | Which routes of Bhadravati taluk will the huge human chain pass through? ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ?

ಭದ್ರಾವತಿ (bhadravati), ಸೆ. 12: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (international democracy day) ಯ ಪ್ರಯುಕ್ತ ಸೆ. 15 ರಂದು ಭದ್ರಾವತಿ ತಾಲೂಕಿನಲ್ಲಿ ಮಾನವ ಸರಪಳಿ (human chain) ಕಾರ್ಯಕ್ರಮ ಆಯೋಜಿಸಲಾಗಿದೆ.

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮ (karehalli village) ದಿಂದ ಮಾನವ ಸರಪಳಿ ಆರಂಭವಾಗಲಿದೆ. ಕೆಂಪೇಗೌಡನಗರ – ಬಾರಂದೂರು – ಮೊಸರಳ್ಳಿ – ಸುಣ್ಣದಹಳ್ಳಿ – ಮಾರುತಿನಗರ – ಭದ್ರಾವತಿ ಬಸ್ ನಿಲ್ದಾಣ – ಕಡದಕಟ್ಟೆ – ಜೇಡಿಕಟ್ಟೆ – ಮಾಚೇನಹಳ್ಳಿ ಕೆ.ಎಂ.ಎಫ್ ಡೈರಿ (kmf dairy) ಯ ಮೂಲಕ ಶಿವಮೊಗ್ಗ ತಾಲೂಕು (shimoga taluk) ಗಡಿ ತಲುಪಲಿದೆ.  

ತಾಲೂಕಿನ ಸಾರ್ವಜನಿಕರು ಸೆ. 15 ರಂದು ಬೆಳಗ್ಗೆ 9 ಗಂಟೆಗೆ ನಿಗದಿತ ಮಾರ್ಗದಲ್ಲಿ ಹಾಜರಿದ್ದು, ಮಾನವ ಸರಪಳಿ (human chain) ರಚನೆಗೆ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →