ಶಿವಮೊಗ್ಗದ ಆಲ್ಕೋಳದ ಎಫ್.ಸಿ.ಐ ಗೋದಾಮಿನಿಂದ ಬರುವ ಹುಳು, ಹುಪ್ಪಟ್ಟೆ : ನಾಗರೀಕರು ತತ್ತರ..!

Worms coming from FCI warehouse in Alkola, Shimoga : Citizens panic..! ಶಿವಮೊಗ್ಗದ ಆಲ್ಕೋಳದ ಎಫ್.ಸಿ.ಐ ಗೋದಾಮಿನಿಂದ ಬರುವ ಹುಳು, ಹುಪ್ಪಟ್ಟೆ : ನಾಗರೀಕರು ತತ್ತರ..!

ಶಿವಮೊಗ್ಗ, ಡಿ. 30: ಶಿವಮೊಗ್ಗ ( shimoga ) ನಗರದ ಹೊರವಲಯ ಆಲ್ಕೋಳ ಬಡಾವಣೆಯಲ್ಲಿರುವ ಭಾರತೀಯ ಆಹಾರ ನಿಗಮ ( FCI ) ಗೋದಾಮಿನಿಂದ ಆಗಮಿಸುವ ಹುಳ್ಳು-ಹುಪ್ಪಟ್ಟೆಗಳು ಸುತ್ತಮುತ್ತಲಿನ ನಿವಾಸಿಗಳ ನಿದ್ದೆಗೆಡುವಂತೆ ಮಾಡಿವೆ…!

‘ಸಂಜೆಯಾಗುತ್ತಿದ್ದಂತೆ ಗೋದಾಮು ಸಮೀಪದ ಮನೆಗಳಿಗೆ ಭಾರೀ ಪ್ರಮಾಣದ ಹುಳು-ಹುಪ್ಪಟ್ಟೆಗಳ ಆಗಮನವಾಗುತ್ತದೆ. ಮನೆಗಳ ಕಿಟಕಿ, ಬಾಗಿಲು ತೆರೆಯಲು ಆಗದಂತಾಗಿದೆ. ಸೊಳ್ಳೆ ಪರದೆ ಮರೆಯಲ್ಲಿ ಊಟ – ತಿಂಡಿ ಮಾಡುವಂತಾಗಿದೆ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

‘ನುಸಿ ಹುಳುಗಳು ಮನೆಯೊಳಗೆ ಹಾರಿಕೊಂಡು ಬರುತ್ತವೆ. ಅಡುಗೆ ಪಾತ್ರೆಗಳು, ಕುಡಿಯುವ ನೀರು ಸೇರಿದಂತೆ ಎಲ್ಲೆಂದರಲ್ಲಿ ಬೀಳುತ್ತಿವೆ. ನೆಮ್ಮದಿಯಾಗಿ ಮಲಗಲು ಸಾಧ್ಯವಾಗದಂತಾಗಿದೆ. ಮೈಮೇಲೆ ಹರಿದಾಡುತ್ತವೆ. ಹುಳುಗಳ ಕಾಟಕ್ಕೆ ಸಣ್ಣ ಮಕ್ಕಳು ಸರಿಯಾಗಿ ಮಲಗಲು ಆಗುತ್ತಿಲ್ಲ’ ಎಂದು ಎಫ್.ಸಿ.ಐ ಗೋದಾಮು ಹಿಂಭಾಗದ ಆಲ್ಕೋಳ (alkola) ದ ನಂದಿನಿ ಬಡಾವಣೆ ನಿವಾಸಿ ರಾಜೇಂದ್ರಪ್ಪ ಅವರು ದೂರಿದ್ದಾರೆ.

‘ಗೋದಾಮಿನಿಂದ ನುಸಿ ಹುಳು – ಹುಪ್ಪಟ್ಟೆಗಳು ಹೊರ ಬರದಂತೆ ಸೂಕ್ತ ವ್ಯವಸ್ಥೆಯನ್ನು ಗೋದಾಮಿನವರು ಮಾಡಬೇಕು. ನಮಗಾಗುತ್ತಿರುವ ತೊಂದರೆ ತಪ್ಪಿಸಬೇಕು. ಕಳೆದ ಹಲವು ವರ್ಷಗಳಿಂದ ಇದೇ ದುಃಸ್ಥಿತಿಯಿದೆ’ ಎಂದು ರಾಜೇಂದ್ರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನುಸಿ ಹುಳುಗಳ ಕಾಟಕ್ಕೆ ರಾತ್ರಿಯೆಲ್ಲ ನಿದ್ರೆಯಿಲ್ಲದಂತಾಗಿದೆ. ಸಂಜೆ ಮನೆಯೊಳಗೆ ಲೈಟ್ ಗಳು ಆನ್ ಮಾಡುತ್ತಿದ್ದಂತೆ, ನುಸಿಗಳು ಮನೆಯೊಳಗೆ ಹಾರಿ ಬರುತ್ತವೆ. ಊಟದ ತಟ್ಟೆಯೊಳಗೆ ಬೀಳುತ್ತವೆ. ಮನೆಯ ಎಲ್ಲೆಂದರಲ್ಲಿ ಕಂಡುಬರುತ್ತವೆ. ಹುಳು ಹುಪ್ಪಟ್ಟೆಗಳ ಕಾಟಕ್ಕೆ ಸಾಕಾಗಿ ಹೋಗಿದೆ.

ಎಫ್.ಸಿ.ಐ ನವರ ಗಮನಕ್ಕೆ ತಂದರೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸ್ಟಾಕ್ ಇದ್ದಾಗ ಹುಳುಗಳು ಬರುತ್ತವೆ. ನಾವೇನೂ ಮಾಡಕ್ಕಾಗುವುದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಹುಳುಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯನ್ನು ಗೋದಾಮಿ ( warehouse ) ನವರು ಏಕೆ ಮಾಡುತ್ತಿಲ್ಲ’ ಎಂದು ಸ್ಥಳೀಯ ಬಡಾವಣೆ ನಿವಾಸಿ, ಯುವ ಮುಖಂಡ ರಮೇಶ್ ಎಂಬುವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪ್ರತಿಭಟನೆ ಅನಿವಾರ್ಯ : ಹುಳುಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಎಫ್.ಸಿ.ಐ ಗೋದಾಮು ಆಡಳಿತಕ್ಕೆ ಸೂಚನೆ ನೀಡಬೇಕು. ನಾಗರೀಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *