ಶಿವಮೊಗ್ಗ(shivamgga), ಸೆಪ್ಟೆಂಬರ್ 15: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಡಿಪ್ಲೋಮಾ ಎಂಜಿನಿಯರ್ಸ್ ಅಸೋಸಿಯೇಷನ್ ಶಿವಮೊಗ್ಗ ವೃತ್ತದಿಂದ, ಸೆಪ್ಟೆಂಬರ್ 15 ರಂದು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರವರ 164 ನೇ ಜನ್ಮ ದಿನಾಚರಣೆ ಹಮ್ಮಿಕೊಂಡಿತ್ತು.
ಸಂಘದ ಪ್ರಮುಖರು ಶಿವಮೊಗ್ಗ ನಗರದ ಕರ್ನಾಟಕ ಸಂಘದ ಸಮೀಪವಿರುವ ಸರ್ ಎಂ ವಿಶ್ವೇಶ್ವರಯ್ಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಟಿಸಿಎಲ್ / ಮೆಸ್ಕಾಂ ಕಂಪೆನಿಯ ಉಪಾಧ್ಯಕ್ಷರಾದ ನವೀನ್ ಕುಮಾರ್ ಎಂ, ಕೇಂದ್ರ ಸಮಿತಿ ಪದಾಧಿಕಾರಿಗಳಾದ ಮುನಾಫ್, ಸತೀಶ್, ನಂದೀಶ್, ರವಿ,
ವೃತ್ತ ಸಮಿತಿ ಪದಾಧಿಕಾರಿಗಳಾದ ಪ್ರಮೋದ್, ರವಿ ಕುಮಾರ್, ನಂಜುಂಡ, ರಶ್ಮಿ, ಸಂತೋಷ್ ಕುಮಾರ್, ನವೀನ್, ಪ್ರಕಾಶ್, ಸಿದ್ದಲಿಂಗಸ್ವಾಮಿ, ಜಗದೀಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Shivamogga, September 15: The Karnataka Electricity Transmission Corporation Limited Diploma Engineers Association, Shivamogga Circle, organized a celebration to celebrate the 164th birth anniversary of Sir M. Visvesvaraya on September 15.

