ಶಿವಮೊಗ್ಗ / ತೀರ್ಥಹಳ್ಳಿ, ಜು. 30: ಪಶ್ಚಿಮಘಟ್ಟ (western ghat) ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ನಡುವೆ ಮಂಗಳವಾರ, ತುಂಗಾ ನದಿಯು (tunga river) ಮತ್ತೆ ಮೈದುಂಬಿ ಹರಿಯಲಾರಂಭಿಸಿದೆ. ಶಿವಮೊಗ್ಗ ಹಾಗೂ ತೀರ್ಥಹಳ್ಳಿಯ ನದಿ ಪಾತ್ರದ ಹಲವೆಡೆ ಪ್ರವಾಹ (flood) ಭೀತಿ ಸೃಷ್ಟಿಸಿದೆ!
ಮಂಗಳವಾರ ಸಂಜೆಯ ಮಾಹಿತಿ ಅನುಸಾರ ಗಾಜನೂರು ತುಂಗಾ ಜಲಾಶಯದಿಂದ (gajanur tunga reservoir) ಸುಮಾರು 82 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ (outflow). ಇದರಿಂದ ಶಿವಮೊಗ್ಗ (shivamooga) ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು (tunga river) ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.
ಅಪಾಯದ ಮಟ್ಟ ತೋರ್ಪಡಿಸುವ, ನಗರದ (shimoga) ಕೋರ್ಪಳಯ್ಯನ ಛತ್ರ ಸಮೀಪ ತುಂಗಾ ನದಿಯಲ್ಲಿರುವ ಮಂಟಪದ ಮೇಲ್ಭಾಗದಲ್ಲಿ ನೀರು ಹರಿಯುತ್ತಿದೆ. ಡ್ಯಾಂನಿಂದ ಹೊರಬಿಡುವ (out flow) ನೀರಿನ ಪ್ರಮಾಣ ಹೆಚ್ಚಳವಾದರೆ, ನದಿಪಾತ್ರದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ತೀರ್ಥಹಳ್ಳಿ (thirthahalli) ತಾಲೂಕಿನಲ್ಲಿಯೂ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದೆ (over flowing). ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿದೆ. ತೀರ್ಥಹಳ್ಳಿ ಪಟ್ಟಣದ ಐತಿಹಾಸಿಕ ರಾಮ ಮಂಟಪ (rama mantapa) ಮುಳುಗಡೆಯಾಗಿದೆ. ನದಿ ಪಾತ್ರದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ. ನದಿ ಪಾತ್ರಕ್ಕೆ ತೆರಳದಂತೆ ಮೈಕ್ ಮೂಲಕ ನಾಗರೀಕರಿಗೆ ತಿಳಿಸಲಾಗುತ್ತಿದೆ

