Bhadravati person who lost lakshs of rupees by clicking part time job link! ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ!
Shivamogga : Car catches fire on the highway! ಶಿವಮೊಗ್ಗ : ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು!
shimoga APMC vegetable prices | Details of vegetable prices for March 13 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 10 ರ ತರಕಾರಿ ಬೆಲೆಗಳ ವಿವರ
Holehonnur : Yadehalli Grama Panchayat President and Vice President elected unopposed ಹೊಳೆಹೊನ್ನೂರು : ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ - ಉಪಾಧ್ಯಕ್ಷರ ಅವಿರೋಧ ಆಯ್ಕೆ
Shivamogga Cyber Crime Station police return Rs 19 lakhs to the heirs who had been robbed of their belongings! ವಂಚಕರ ಪಾಲಾಗಿದ್ದ 19 ಲಕ್ಷ ರೂ. ಮರಳಿ ವಾರಸುದಾರರಿಗೆ ಕೊಡಿಸಿದ ಶಿವಮೊಗ್ಗ ಸೈಬರ್ ಕ್ರೈಂ ಠಾಣೆ ಪೊಲೀಸರು!
shimoga APMC vegetable prices | Details of vegetable prices for March 13 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 10 ರ ತರಕಾರಿ ಬೆಲೆಗಳ ವಿವರ
Shivamogga : Tragic death of one-and-a-half-year-old child after being run over by a school bus!ಶಿವಮೊಗ್ಗ : ಶಾಲಾ ಬಸ್ ಗೆ ಸಿಲುಕಿ ಒಂದೂವರೆ ವರ್ಷದ ಪುಟಾಣಿಯ ದಾರುಣ ಸಾವು!
ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.
shimoga APMC vegetable prices | Details of vegetable prices for March 13 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 10 ರ ತರಕಾರಿ ಬೆಲೆಗಳ ವಿವರ
ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆ ಸಾವು! ಶಿವಮೊಗ್ಗ, ಜು. 7: ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆಯೋರ್ವರು ಮೃತಪಟ್ಟ ದಾರುಣ ಘಟನೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ಜು. 6 ರ ಭಾನುವಾರ ತಡರಾತ್ರಿ ನಡೆದಿದೆ. ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (55) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿದ ಮೇರೆಗೆ ಆಶಾ (45) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಏನೀದು ಘಟನೆ? : ಭಾನುವಾರ ಸಂಜೆ ಮೃತೆ ಗೀತಮ್ಮಅಸ್ವಾಭಾವಿಕವಾಗಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಸಂಜಯ್ ಎಂಬುವರು, ಅದೇ ಗ್ರಾಮದ ನಿವಾಸಿಯಾದ ಆರೋಪಿ ಆಶಾಳನ್ನು ಮನೆಗೆ ಕರೆಯಿಸಿದ್ದ. ಮಂಕಾಗಿದ್ದ ಗೀತಮ್ಮಳಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸುವುದಾಗಿ ಆಶಾ ಹೇಳಿದ್ದಾಳೆ. ನಂತರ ಆಪಾದಿತೆ ಆಶಾ, ‘ನನ್ನ ಮೇಲೆ ಚೌಡಮ್ಮ ದೇವರು ಬಂದಿದೆ. ಗೀತಮ್ಮಳ ಮೇಲಿನ ದೆವ್ವ ಬಿಟ್ಟು ಹೋಗು…’ ಎಂದು ಕೋಲಿನಿಂದ ಹೊಡೆಯಲು ಆರಂಭಿಸಿದ್ದಾಳೆ. ತದನಂತರ ರಾತ್ರಿ 9-30ಕ್ಕೆ ಮನೆಯಿಂದ ಎರಡೂವರೆ ಕಿಲೋಮೀಟರ್ ದೂರವಿರುವ ಹಳೇ ಜಂಬರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ಹೊಡೆದುಕೊಂಡು ಹೋಗಿದ್ದಾಳೆ. ಆದರೂ ದೆವ್ವ ಬಿಟ್ಟಿಲ್ಲವೆಂದು, ಬೆಳಗಿನ ಜಾವ 2-30 ರವರೆಗೂ ಥಳಿಸುವುದನ್ನು ಬಿಟ್ಟಿಲ್ಲ ಎನ್ನಲಾಗಿದೆ. ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡು ಗೀತಮ್ಮ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಯಲ್ಲಿದ್ದ ಆತ್ಮ ಹೋರ ಹೋಗಿದೆ. ಇನ್ನೂ ಮುಂದೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ಆಶಾ ಹೇಳಿದ್ದಾಳೆ ಎನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಗೀತಮ್ಮರನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷಿಸಿದ ವೈದ್ಯರು ಗೀತಮ್ಮ ಮೃತಪಟ್ಟಿದ್ದಾರೆ ಎಂದು ದೃಡ ಪಡಿಸಿದ್ದಾರೆ. ಮೃತೆ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಗೀತಮ್ಮಳ ಮೇಲೆ ನಡೆದ ಹಲ್ಲೆಯ ವೀಡಿಯೋ ತುಣುಕುಗಳು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

shimoga | ಹೊಳೆಹೊನ್ನೂರು | ದೆವ್ವ ಹಿಡಿದಿದೆ ಎಂದು ಥಳಿತಕ್ಕೊಳಗಾದ ಮಹಿಳೆ ಸಾ**ವು!

Holehonnuru | Woman dies after being beaten up for allegedly being possessed by a demon!
ಹೊಳೆಹೊನ್ನೂರು | ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆ ಸಾವು!

shimoga | ಹೊಳೆಹೊನ್ನೂರು | ದೆವ್ವ ಹಿಡಿದಿದೆ ಎಂದು ಥಳಿತಕ್ಕೊಳಗಾದ ಮಹಿಳೆ ಸಾ**ವು! Read More