ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.
Shivamogga : Robbers who stole a fake bangle and fled after being intimidated by an elderly woman's screams! ಶಿವಮೊಗ್ಗ : ವೃದ್ದೆಯ ನಕಲಿ ಬಳೆ ಕದ್ದು ಪರಾರಿಯಾದ ದರೋಡೆಕೋರರು!
Bhadravati: Four Missing in Bhadra Canal near Holehonnur–Arebilachi! ಭದ್ರಾವತಿ : ಹೊಳೆಹೊನ್ನೂರು ಅರೆಬಿಳಚಿ ಸಮೀಪದ ಭದ್ರಾ ನಾಲೆಯಲ್ಲಿ ನಾಲ್ವರು ನಾಪತ್ತೆ!
Hosnagar: Retired Teacher Dies After Falling Off Bridge With Bike! ಹೊಸನಗರ : ಸೇತುವೆ ಮೇಲಿಂದ ಆಯತಪ್ಪಿ ಬೈಕ್ ಸಮೇತ ಬಿದ್ದು ನಿವೃತ್ತ ಶಿಕ್ಷಕ ಸಾವು!
Shivamogga : Renowned doctor and his son commit suicide! ಶಿವಮೊಗ್ಗ : ಖ್ಯಾತ ವೈದ್ಯೆ ಮತ್ತವರ ಪುತ್ರ ಆತ್ಮಹತ್ಯೆಗೆ ಶರಣು!
RML Nagar attack case in Shivamogga : Three arrested - Doddapet police station puts a complete stop to the communal drama! shimoga news | ಶಿವಮೊಗ್ಗದ RML ನಗರ ಪ್ರಕರಣ : ಕೋಮು ಹೈಡ್ರಾಮಾಕ್ಕೆ ಪೂರ್ಣ ವಿರಾಮ ಹಾಕಿದ ದೊಡ್ಡಪೇಟೆ ಠಾಣೆ ಪೊಲೀಸರು!
Shivamogga - GS'W Company's sale of fake roofing sheets: Case registered! ಶಿವಮೊಗ್ಗ - ಜಿಎಸ್’ಡಬ್ಲ್ಯೂ ಕಂಪನಿಯ ನಕಲಿ ರೂಪಿಂಗ್ ಶೀಟ್ ಮಾರಾಟ : ಕೇಸ್ ದಾಖಲು!
Shivamogga : Robbers who stole a fake bangle and fled after being intimidated by an elderly woman's screams! ಶಿವಮೊಗ್ಗ : ವೃದ್ದೆಯ ನಕಲಿ ಬಳೆ ಕದ್ದು ಪರಾರಿಯಾದ ದರೋಡೆಕೋರರು!
ಶಿವಮೊಗ್ಗ : ಎರಡು ಪ್ರತ್ಯೇಕ ದರೋಡೆ ಪ್ರಕರಣ – ಇಬ್ಬರು ಆರೋಪಿಗಳು ಅರೆಸ್ಟ್! ಶಿವಮೊಗ್ಗ, ನವೆಂಬರ್ 15: ಶಿವಮೊಗ್ಗದಲ್ಲಿ ನಡೆದ ಎರಡು ಪ್ರತ್ಯೇಕ ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿನೋಬನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿವರ ಈ ಮುಂದಿನಂತಿದೆ. ಪ್ರಕರಣ 1 : 14/10/2025 ರಂದು ಬೆಳಿಗ್ಗೆ 4 ಗಂಟೆ ಸಮಯದಲ್ಲಿ ನವುಲೆಯ ಶಿವಬಸವನಗರ ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರನ್ನು, ಬೈಕ್ ನಲ್ಲಿ ಆಗಮಿಸಿದ ಅಪರಿಚಿತನೋರ್ವ ಅಡ್ಡಗಟ್ಟಿ ಬೆದರಿಕೆ ಹಾಕಿದ್ದ. ನಂತರ ಅವರ ಬಳಿಯಿದ್ದ ಬಂಗಾರದ ಉಂಗುರ ಹಾಗೂ ಹಣ ಅಪಹರಿಸಿ ಪರಾರಿಯಾಗಿದ್ದ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಕಟ್ಟೆ ರಸ್ತೆ ನವುಲೆಯ ನಿವಾಸಿ ಸಚಿನ್ ಯಾನೆ ಶಾಡೋ (27) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 7.90 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ 2 : ಆಲ್ಕೋಳದ ಮಂಗಳ ಮಂದಿರ ರಸ್ತೆಯಲ್ಲಿ 25/10/2025 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆ ಮುಂಭಾಗ ರಂಗೋಲಿ ಹಾಕುತ್ತಿದ್ದ ಮಹಿಳೆಯೋರ್ವರ ಬಳಿ, ವಿಳಾಸ ಕೇಳುವ ನೆಪದಲ್ಲಿ ಆಗಮಿಸಿದ ಬೈಕ್ ಸವಾರನೋರ್ವ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ. ಈ ಸಂಬಂಧ ಬೊಮ್ಮನಕಟ್ಟೆಯ ಎಂಬಿಎಸ್ ಲೇಔಟ್ ನಿವಾಸಿ ಭುವನೇಶ್ವರ ಯಾನೆ ಭುವನ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 13 ಗ್ರಾಂ ತೂಕದ ಬಂಗಾರದ ಸರ, ಕೃತ್ಯಕ್ಕೆ ಉಪಯೋಗಿಸಿ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆ : ಎರಡು ಪ್ರಕರಣಗಳ ಪತ್ತೆಗೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಎಎಸ್ಪಿಗಳಾದ ಕಾರಿಯಪ್ಪ, ರಮೇಶ್, ಡಿವೈಎಸ್ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಡಿ ಕೆ ಉಸ್ತುವಾರಿಯಲ್ಲಿ, ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಜಿ, ಸಿಬ್ಬಂದಿಗಳಾದ ರಾಜು ಕೆ ಆರ್, ಮನುಶಂಕರ್, ಮಲ್ಲಪ್ಪ ಎಸ್ ಜಿ, ಅರುಣ್ ಕುಮಾರ್ ಎಸ್ ಕೆ ರವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga : Robbers who stole a fake bangle and fled after being intimidated by an elderly woman's screams! ಶಿವಮೊಗ್ಗ : ವೃದ್ದೆಯ ನಕಲಿ ಬಳೆ ಕದ್ದು ಪರಾರಿಯಾದ ದರೋಡೆಕೋರರು!