ಶಿವಮೊಗ್ಗ ಪಾಲಿಕೆ ಆಯುಕ್ತರೊಂದಿಗೆ ಶಾಸಕ ಡಿ ಎಸ್ ಅರುಣ್ ಚರ್ಚೆ : ನಾಗರಿಕ ಸಮಸ್ಯೆ ಪರಿಹಾರಕ್ಕೆ ಸೂಚನೆ
ಶಿವಮೊಗ್ಗ ಪಾಲಿಕೆ ಚುನಾವಣೆ ನೆನೆಗುದಿಗೆ : ಹೈಕೋರ್ಟ್ ವಿಚಾರಣೆಯತ್ತ ಕುತೂಹಲದ ಚಿತ್ತ!
“Laddu and a Congratulatory Letter for Citizens Who Paid Tax on April 1!” – What is this unique initiative by Shivamogga Municipality?ಏಪ್ರಿಲ್ 01 ರಂದು ತೆರಿಗೆ ಪಾವತಿಸಿದ ನಾಗರಿಕರಿಗೆ ಲಡ್ಡು ಅಭಿನಂದನಾ ಪತ್ರ!’ : ಏನೀದು ಶಿವಮೊಗ್ಗ ಪಾಲಿಕೆಯ ವಿನೂತನ ತಂತ್ರ?
E–Khata System in State Municipal Corporations: Shivamogga First – Mangaluru Last! ರಾಜ್ಯದ ಪಾಲಿಕೆಗಳಲ್ಲಿ ಇ – ಖಾತಾ ವ್ಯವಸ್ಥೆ : ಶಿವಮೊಗ್ಗ ಫಸ್ಟ್ – ಮಂಗಳೂರು ಲಾಸ್ಟ್!
Shivamogga Municipal Corporation launches helpline for flood emergency management ಅತಿವೃಷ್ಠಿ ತುರ್ತು ನಿರ್ವಹಣೆಗೆ ಶಿವಮೊಗ್ಗ ಪಾಲಿಕೆಯಿಂದ ಸಹಾಯವಾಣಿ
Shivamogga Municipal Corporation launches helpline for flood emergency management ಅತಿವೃಷ್ಠಿ ತುರ್ತು ನಿರ್ವಹಣೆಗೆ ಶಿವಮೊಗ್ಗ ಪಾಲಿಕೆಯಿಂದ ಸಹಾಯವಾಣಿ
ಶಿವಮೊಗ್ಗ : ಗಾಡಿಕೊಪ್ಪದ ಮುಖ್ಯ ರಸ್ತೆ ಅವ್ಯವಸ್ಥೆ – ಗಮನಹರಿಸುವುದೆ ಪಾಲಿಕೆ ಆಡಳಿತ? ಶಿವಮೊಗ್ಗ, ನವೆಂಬರ್ 23: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಗಾಡಿಕೊಪ್ಪದ ಪುರದಾಳು ಮುಖ್ಯ ರಸ್ತೆಯು ಅವ್ಯವಸ್ಥೆಯ ಆಗರವಾಗಿದೆ. ಗುಂಡಿ-ಗೊಟರು ಬಿದ್ದು, ಜನ-ವಾಹನಗಳ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸದರಿ ರಸ್ತೆಯು ಗಾಡಿಕೊಪ್ಪದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಹೊಸದಾಗಿ ಅಭಿವೃದ್ದಿಪಡಿಸಲಾಗಿರುವ ರಿಂಗ್ ರೋಡ್ ಗೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ರಸ್ತೆಗೆ ಹೊಂದಿಕೊಂಡಂತೆ ಹಲವು ಹೊಸ ಬಡಾವಣೆಗಳು ಅಭಿವೃದ್ದಿಯಾಗಿವೆ. ಈ ಕಾರಣದಿಂದ ಸದರಿ ರಸ್ತೆಯಲ್ಲಿ ಜನ – ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಆದರೆ ಕಳೆದ ಕೆಲ ವರ್ಷಗಳಿಂದ ರಸ್ತೆಯ ಡಾಂಬರ್ ಕಿತ್ತು ಹೋಗಿದ್ದು, ಗುಂಡಿ-ಗೊಟರು ಬಿದ್ದಿವೆ. ಧೂಳಿನ ಪ್ರಮಾಣ ಹೆಚ್ಚಾಗಿದೆ. ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ ಎಂದು ನಿವಾಸಿಗಳು ದೂರುತ್ತಾರೆ. ತಕ್ಷಣವೇ ಶಾಸಕರಾದ ಚನ್ನಬಸಪ್ಪ ಹಾಗೂ ಮಹಾನಗರ ಪಾಲಿಕೆ ಆಡಳಿತವು ಸದರಿ ರಸ್ತೆಯ ಅವ್ಯವಸ್ಥೆ ಸರಿಪಡಿಸಿ, ಸುಗಮ ಜನ – ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲು ಕ್ರಮಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ. ಮಕ್ಕಳ ಪಾಲಿಗೆ ಅಪಾಯಕಾರಿಯಾದ ಹೆದ್ದಾರಿ : ಕಣ್ಮುಚ್ಚಿ ಕುಳಿತ ಆಡಳಿತ?! *** ಗಾಡಿಕೊಪ್ಪದ ಸರ್ಕಾರಿ ಶಾಲೆಗೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ನೂರಾರು ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಸದರಿ ಹೆದ್ದಾರಿಯು, ವಿದ್ಯಾರ್ಥಿಗಳ ಪಾಲಿಗೆ ಗಂಡಾಂತರಕಾರಿಯಾಗಿ ಪರಿಣಮಿಸಿದೆ. ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತವೆ. ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ರಸ್ತೆ ದಾಟುವಂತಹ ದುಃಸ್ಥಿತಿಯಿದೆ. ಈಗಾಗಲೇ ಕೆಲ ವಿದ್ಯಾರ್ಥಿಗಳು ಅಪಘಾತಕ್ಕೂ ತುತ್ತಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಸರ್ಕಾರಿ ಶಾಲೆಗೆ ಹೊಂದಿಕೊಂಡಂತಿರುವ ಸರ್ಕಲ್ ಬಳಿ, ವಾಹನಗಳ ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ವಿದ್ಯಾರ್ಥಿಗಳ ಸುರಕ್ಷತೆಗೆ ಕಿಂಚಿತ್ತೂ ಕ್ರಮವೂ ಆಗಿಲ್ಲ. ಈ ಹಿಂದೆ ಟ್ರಾಫಿಕ್ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಕೂಡ ಕೊಂಡೊಯ್ಯಲಾಗಿದೆ. ಸದರಿ ಸರ್ಕಲ್ ಬಳಿ ಸಿಗ್ನಲ್ ಲೈಟ್ ಅಳವಡಿಕೆ ಮಾಡುವುದು ಸೇರಿದಂತೆ ವಾಹನಗಳ ವೇಗ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಕೈಗೊಂಡು, ವಿದ್ಯಾರ್ಥಿಗಳು ಸುರಕ್ಷಿತವಾಗಿ ಹೆದ್ದಾರಿ ದಾಟಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
Commissioner puts a stop to 'secret evening transactions' in Shivamogga Corporation! ಶಿವಮೊಗ್ಗ ಪಾಲಿಕೆಯಲ್ಲಿನ ‘ಸಂಜೆ ಗುಪ್ತ ವ್ಯವಹಾರ’ಗಳಿಗೆ ಬ್ರೇಕ್ ಹಾಕಿದ ಆಯುಕ್ತರು!
E–Khata System in State Municipal Corporations: Shivamogga First – Mangaluru Last! ರಾಜ್ಯದ ಪಾಲಿಕೆಗಳಲ್ಲಿ ಇ – ಖಾತಾ ವ್ಯವಸ್ಥೆ : ಶಿವಮೊಗ್ಗ ಫಸ್ಟ್ – ಮಂಗಳೂರು ಲಾಸ್ಟ್!
Shimoga Municipal Corporation area revision: Important statement by DC, Commissioner! ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಡಿಸಿ, ಆಯುಕ್ತರ ಮಹತ್ವದ ಹೇಳಿಕೆ!